ಬೆಂಗಳೂರು:ನೂತನ ಸಚಿವರಿಗೆ ಖಾತೆ ಹಂಚಿಕೆ ನಂತರ ಸೃಷ್ಟಿಯಾಗಿರುವ ಅಸಮಾಧಾನ ಶಮನಕ್ಕೆ ಸರ್ಕಸ್ ನಡೆಸುತ್ತಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕಡೆಗೂ ಸುಧಾಕರ್ ಒತ್ತಡಕ್ಕೆ ಮಣಿದು ವೈದ್ಯಕೀಯ ಶಿಕ್ಷಣ ಖಾತೆಯನ್ನು ನೀಡಲು ಒಪ್ಪಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಈಗಾಗಲೇ ಖಾತೆ ಹಂಚಿಕೆ ನಂತರ ಉಂಟಾದ ಅತೃಪ್ತಿ ಶಮನಕ್ಕೆ ಮುಂದಾಗಿ ಎಂಟಿಬಿ ನಾಗರಾಜ್,ನಾರಾಯಣಗೌಡ, ಶಂಕರ್ ಮತ್ತು ಗೋಪಾಲಯ್ಯ ಖಾತೆಗಳ ಬದಲಿಸಿದ್ದ ಸಿಎಂ ಸುಧಾಕರ್ ವಿಚಾರದಲ್ಲಿ ಮೌನವಾಗಿದ್ದರು. ಇದರಿಂದಾಗಿ ಸುಧಾಕರ್ ಅತೃಪ್ತಿ ಶಮನವಾಗಿರಲಿಲ್ಲ. ಅವರನ್ನು ನಿವಾಸಕ್ಕೆ ಕರೆಸಿಕೊಂಡು ಸಿಎಂ ಚರ್ಚೆ ನಡೆಸಿದ್ದರೂ ಸಂಧಾನ ಸಫಲವಾಗಿರಲಿಲ್ಲ ಎನ್ನಲಾಗ್ತಿದೆ.
ವೈದ್ಯಕೀಯ ಶಿಕ್ಷಣ ಇಲಾಖೆ ಬೇರೆಯವರಿಗೆ ಕೊಟ್ಟಿದ್ದಕ್ಕೆ ಬೇಸರವಿಲ್ಲ. ಆದರೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಒಬ್ಬರ ಬಳಿಯೇ ಇರಲಿ, ನೀವು ಯಾರಿಗಾದರೂ ಕೊಡಿ ಎರಡೂ ಇಲಾಖೆ ಒಬ್ಬರಿಗೇ ಕೊಡಿ ಕೊರೊನಾ ವೇಳ ಸಮನ್ವಯತೆ ಸಮಸ್ಯೆ ಆದರೆ ಸರಿಯಲ್ಲ. ಯಾರಿಗಾದರೂ ಒಬ್ಬರಿಗೇ ಕೊಡಿ ಎಂದಿದ್ದರು. ಹಾಗಾಗಿ ಕೊನೆಗೆ ಸುಧಾಕರ್ ಗೆ ವೈದ್ಯಕೀಯ ಶಿಕ್ಷಣ ಇಲಾಖೆ ಮರಳಿಸಲು ಸಿಎಂ ನಿರ್ಧರಿಸಿದ್ದಾರೆ ಎಂದು ಹೇಳಲಾಗ್ತಿದೆ.