ಬೆಂಗಳೂರು :ಐಎಎಸ್ ಅಧಿಕಾರಿ ಪೊನ್ನುರಾಜ್ ಅವರನ್ನು ಸಿಎಂ ಕಾರ್ಯದರ್ಶಿಯಾಗಿ ವರ್ಗಾವಣೆ ಮಾಡಲಾಗಿದೆ. ಪೊನ್ನುರಾಜು.ವಿ ಕೆಪಿಸಿಎಲ್ನ ಎಂಡಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈಗ ಅದರ ಜೊತೆಗೆ ಅವರಿಗೆ ಸಿಎಂ ಕಾರ್ಯದರ್ಶಿಯಾಗಿ ಹೆಚ್ಚುವರಿ ಹೊಣೆ ನೀಡಲಾಗಿದೆ.
ಸಿಎಂ ಕಾರ್ಯದರ್ಶಿಯಾಗಿ ಕೆಪಿಸಿಎಲ್ ಎಂಡಿ ಪೊನ್ನುರಾಜ್ ನೇಮಕ
ನೂತನ ಸಿಎಂ ಬೊಮ್ಮಾಯಿ ಅವರಿಗೆ ನೂತನ ಕಾರ್ಯದರ್ಶಿಯ ನೇಮಕವಾಗಿದೆ. ಕೆಪಿಸಿಎಲ್ನ ಎಂಡಿಯಾಗಿರುವ ಪೊನ್ನುರಾಜ್ ಅವರಗೆ ಹೆಚ್ಚುವರಿ ಜವಾಬ್ದಾರಿ ನೀಡಲಾಗಿದೆ..
ಕೆಪಿಸಿಎಲ್ ಎಂಡಿ ಪೊನ್ನುರಾಜ್
ಈ ಮೊದಲು ಸಿಎಂ ಕಾರ್ಯದರ್ಶಿಯಾಗಿದ್ದ ಸೆಲ್ವಕುಮಾರ್ ಎಸ್ ಅವರನ್ನು ವರ್ಗಾವಣೆ ಮಾಡಲಾಗಿದೆ. ಸೆಲ್ವಕುಮಾರ್ ಅವರನ್ನ ಕೌಶಲ್ಯ ಅಭಿವೃದ್ಧಿ, ಉದ್ಯಮಶೀಲತೆ ಇಲಾಖೆಯ ಕಾರ್ಯದರ್ಶಿಯಾಗಿ ವರ್ಗಾವಣೆ ಮಾಡಲಾಗಿದೆ.