ಬೆಂಗಳೂರು: ಮಹಾರಾಷ್ಟ್ರ, ಹರಿಯಾಣ ಫಲಿತಾಂಶಗಳ ಟ್ರೆಂಡ್ ನೋಡಿದರೆ ಮೋದಿಗೆ ಜನರ ವಿಶ್ವಾಸ ಕಡಿಮೆ ಆಗುತ್ತಿದೆ ಎಂಬುದು ಸ್ಪಷ್ವವಾಗುತ್ತಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದರು.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಎಲ್ಲೂ ಬಿಜೆಪಿಗೆ ಸ್ವತಂತ್ರ ಅಧಿಕಾರ ಸಿಗುತ್ತಿಲ್ಲ. ಬಿಜೆಪಿ ಮೈತ್ರಿಕೂಟಕ್ಕೆ ಬೆಂಬಲ ಅಂತ ಹೇಳಿದ್ದ ಎಲ್ಲಾ ಸಮೀಕ್ಷೆಗಳು ಸುಳ್ಳಾಗಿವೆ. ಕಾಂಗ್ರೆಸ್ಗೆ ಬೆಂಬಲ ಹೆಚ್ಚಾಗುತ್ತಿದೆ. ಕಾಂಗ್ರೆಸ್ನ ಸಾಕಷ್ಟು ನಾಯಕರು ಬಿಜೆಪಿ ಸೇರಿದರು. ಆದರೆ, ಜನ ಬುದ್ಧಿವಂತರಿದ್ದಾರೆ. ಬಿಜೆಪಿ ದುರಾಲೋಚನೆಗೆ ಹೊಡೆತ ಬಿದ್ದಿದೆ. ಶಿವಸೇನೆ ಬಿಜೆಪಿ ಜೊತೆಗೆ ಸೇರದಿದ್ದರೆ ಅಧಿಕಾರ ತಪ್ಪುತ್ತದೆ ಎಂದು ತಿಳಿಸಿದರು.
ಕೇಂದ್ರ ಸರ್ಕಾರ ಚುನಾವಣಾ ಪ್ರಚಾರದಲ್ಲಿ ಎಲ್ಲೂ ಐದು ವರ್ಷದ ಸಾಧನೆಗಳ ಬಗ್ಗೆ ಮಾತನಾಡಿಲ್ಲ. ಕೇವಲ ಪಾಕ್, ಕಾಶ್ಮೀರದಂತಹ ಭಾವನಾತ್ಮಕ ವಿಚಾರ ಇಟ್ಟುಕೊಂಡು ಬಿಜೆಪಿಯವರು ಪ್ರಚಾರ ನಡೆಸಿದರು. ಬಿಜೆಪಿಗೆ ಜನ ಮನ್ನಣೆ ಇಲ್ಲ, ಶೇಕಡಾವಾರು ಮತಗಳು ಕೂಡ ಕಡಿಮೆ ಆಗಿದೆ ಎಂದು ಹೇಳಿದರು.
ರಾಹುಲ್ ಗಾಂಧಿ ಮಹಾರಾಷ್ಟ್ರ, ಹರಿಯಾಣದಲ್ಲೂ ಪ್ರಚಾರ ಮಾಡಿದ್ದರು. ನಮ್ಮ ನಿರೀಕ್ಷೆಯಂತೆ ಫಲಿತಾಂಶ ಬಂದಿಲ್ಲ. ಮಹಾರಾಷ್ಟ್ರ ಹಾಗೂ ಹರಿಯಾಣದಲ್ಲಿ ಸಂಪನ್ಮೂಲಗಳ ಕೊರತೆ ಇತ್ತು. ಸೋನಿಯಾ ಅನಾರೋಗ್ಯದ ಕಾರಣಕ್ಕೆ ಬಂದಿರಲಿಲ್ಲ ಎಂದು ತಿಳಿಸಿದರು.
ನಾನೂ ಮಹಾರಾಷ್ಟ್ರದಲ್ಲಿ ಮೂರು ಕಡೆ ಪ್ರಚಾರ ಮಾಡಿದ್ದೆ. ಆ ಪೈಕಿ ಎರಡು ಕಡೆ ಗೆಲುವು ಸಾಧಿಸಿದ್ದು ಕಾಂಗ್ರೆಸ್ಗೆ ಮುನ್ನಡೆ ಇದೆ. ಜತ್, ಸಾಂಗ್ಲಿ, ಅಕ್ಕಲಕೋಟೆಯ, ಮಂಜೇಶ್ವರದಲ್ಲಿ ಪ್ರಚಾರ ಮಾಡಿದ್ದೆ ಎಂದು ಹೇಳಿದ್ರು.
ಯಡಿಯೂರಪ್ಪ ರಾಜೀನಾಮೆ ನೀಡಬೇಕಾಗುತ್ತದೆ: