ಕರ್ನಾಟಕ

karnataka

By

Published : Oct 5, 2019, 9:17 PM IST

ETV Bharat / state

ದುಬಾರಿ ದುನಿಯಾದಲ್ಲಿ ಆಯುಧ ಪೂಜೆಗೆ 100 ರೂಪಾಯಿ ಯಾವುದಕ್ಕೆ ಸಾಲುತ್ತೆ ಸ್ವಾಮಿ??‌

ಆಯುಧ ಪೂಜೆ ದಿನದಂದು ಬಸ್​ಗಳಿಗೆ ಪೂಜೆ ಮಾಡುವುದು ಸಹಜ. ಆದರೆ, ಪೂಜೆಗೆ ಕೇವಲ ನೂರು ರೂಪಾಯಿ ಸಾಲುತ್ತದೆಯೇ ಎಂಬುದನ್ನ ಯೋಚಿಸದೆ ಸಾರಿಗೆ ಸಂಸ್ಥೆಯ ಬಸ್​ ಡಿಪೋಗಳಲ್ಲಿ ಪ್ರತಿ ಬಸ್​ಗೆ ನೂರು ರೂಪಾಯಿ ಬಿಡುಗಡೆ ಮಾಡಿದ್ದಾರೆ.

Only hundred rupees for Ayudha pooja

ಬೆಂಗಳೂರು:ವಿಜಯದಶಮಿ-ಆಯುಧ ಪೂಜೆ ಹಿನ್ನೆಲೆ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ವತಿಯಿಂದ ಡಿಪೋಗಳಲ್ಲಿ ಪೂಜೆಗೆ ಅನುಮತಿ ನೀಡಲಾಗಿದೆ. ‌ಆದರೆ, ಈ‌ ದುಬಾರಿ‌ ದುನಿಯಾದಲ್ಲಿ ಪ್ರತಿ ಬಸ್‌ಗೆ
ಪೂಜೆಗಾಗಿ ಕೇವಲ 100 ರೂ. ಬಿಡುಗಡೆ ಮಾಡಿದ್ದು, ಅಷ್ಟೇ ಸಾಕಾ ಎಂಬ ಪ್ರಶ್ನೆ ಉದ್ಭವಿಸುತ್ತಿದೆ.

ಆಯುಧ ಪೂಜೆಗೆ ಕೇವಲ ನೂರು ರೂಪಾಯಿ

ಇಲಾಖಾ ವಾಹನಗಳಿಗೆ (ಕಾರು,ಜೀಪು ಇತ್ಯಾದಿ) 40 ರೂ. ಹಾಗೂ ಸಾಮಾನ್ಯ, ವೋಲ್ವೋ, ಕರೋನಾ ವಾಹನಗಳಿಗೆ 100 ರೂ. ಬಿಡುಗಡೆ ಮಾಡಲಾಗಿದೆ.. ವಿಭಾಗೀಯ ಕಾರ್ಯಾಗಾರಕ್ಕೆ ಕೆಎಸ್‌ಆರ್‌ಟಿಸಿಯಿಂದ 1000 ರೂ./ ಮತ್ತು ಬಿಎಂಟಿಸಿ ಕೇಂದ್ರೀಯ ಕಾರ್ಯಾಗಾರಕ್ಕೆ 3000 ರೂ. ಮುಂಗಡ ಹಣವನ್ನ ಸಂಬಂಧಪಟ್ಟ ಅಧಿಕಾರಿಗಳಿಂದ ಪಡೆಯುವಂತೆ ತಿಳಿಸಿದೆ.

ಹಬ್ಬದ ಸಮಯದಲ್ಲಿ ಹೂವುಗಳ ಬೆಲೆಯೇ 100 ರೂಪಾಯಿ ದಾಟಿರುತ್ತೆ. ಅಂತಹದರಲ್ಲಿ ಪೂಜೆಗೆ 100ರೂ. ಯಾರಿಗೆ ಸಾಲುತ್ತೆ ಎಂಬ ಪ್ರಶ್ನೆ ಕಾಡ ತೊಡಗಿದೆ.

ABOUT THE AUTHOR

...view details