ಕರ್ನಾಟಕ

karnataka

ನೆರೆ ಸಂತ್ರಸ್ತರ ನೆರವಿಗೆ ಧಾವಿಸಿದ ನೀನಾಸಂ ಸತೀಶ್...

By

Published : Aug 11, 2019, 5:14 AM IST

ಉಕ್ಕಿಹರಿಯುತ್ತಿರುವ ಪ್ರವಾಹಕ್ಕೆ ನಲುಗಿ ಹೋಗಿರುವ ಜನರ ಸಹಾಯಕ್ಕೆ ಸ್ಯಾಂಡಲ್​ವುಡ್​ನ ಬಹುತೇಕ ಸ್ಟಾರ್​ಗಳು ಮುಂದಾಗಿದ್ದಾರೆ. ಸದ್ಯ ನೀನಾಸಂ ಸತೀಶ್​ ಕೂಡ ತಮ್ಮ ಕೈಲಾದ ಸಹಾಯ ಮಾಡುವುದಾಗಿ ತಿಳಿಸಿದ್ದು, ತಮ್ಮ ಆಭಿಮಾನಿಗಳು, ಸ್ನೇಹಿತರಲ್ಲೂ ಸಂತ್ರಸ್ತರ ನೆರವಿಗೆ ನಿಲ್ಲುವಂತೆ ಮನವಿಯನ್ನು ‌ಮಾಡಿದ್ದಾರೆ.

ನೆರೆ ಸಂತ್ರಸ್ತರ ನೆರವಿಗೆ ಧಾವಿಸಿದ ನೀನಾಸಂ ಸತೀಶ್...

ಬೆಂಗಳೂರು: ವರುಣನ ಆರ್ಭಟಕ್ಕೆ ಉತ್ತರ ಕರ್ನಾಟಕ ಬಹುತೇಕ ದ್ವೀಪದಂತಾಗಿದೆ. ಉಕ್ಕಿಹರಿಯುತ್ತಿರುವ ಪ್ರವಾಹಕ್ಕೆ ಅಲ್ಲಿನ ಜನರು ಎಲ್ಲವನ್ನು ಕಳೆದುಕೊಂಡು ನಿರಾಶ್ರಿತರ ಕೇಂದ್ರ ಸೇರಿದ್ದು, ನೊಂದ ಜೀವಗಳಿಗೆ ಇಡೀ ಕರ್ನಾಟಕದ ಜನರೇ ಕಣ್ಣೀರು ಹಾಕುತ್ತಿದ್ದಾರೆ. ಅಲ್ಲದೇ ನೆರವಿನ ಸಹಾಯ ನೀಡಲು ಸ್ವಯಂ‌ ಪ್ರೇರಿತರಾಗಿ ಮುಂದೆ ಬಂದಿದ್ದಾರೆ. ಇನ್ನೂ ಸ್ಯಾಂಡಲ್​ವುಡ್​ನ ಬಹುತೇಕ ಸ್ಟಾರ್ ನಟರುಗಳು ನೇರವು ‌ನೀಡಿದ್ದಾರೆ. ಜೊತೆಗೆ ಅವರ ಅಭಿಮಾನಿಗಳಿಗೂ ನೆರೆ ಸಂತ್ರಸ್ತರ ನೆರವಿಗೆ ಬರುವಂತೆ ಮನವಿ ಮಾಡಿದ್ದಾರೆ.

ನೆರೆ ಸಂತ್ರಸ್ತರ ನೆರವಿಗೆ ಧಾವಿಸಿದ ನೀನಾಸಂ ಸತೀಶ್...

ಸದ್ಯ ನೀನಾಸಂ ಸತೀಶ್ ಅವರು ಸಹ ಉತ್ತರ ಕರ್ನಾಟಕದ ನೆರವಿಗೆ ಧಾವಿಸಿದ್ದಾರೆ. ಭೀಕರ ಮಳೆಗೆ ತತ್ತರಿಸಿ ಹೋಗಿರುವ ಉತ್ತರ ಕರ್ನಾಟಕ ಜನತೆಗೆ ನಾವು ನಮ್ಮ ಕೈಲಾದ ಸಹಾಯ ಮಾಡುತ್ತೇವೆ. ಅಭಿಮಾನಿಗಳು ಕೂಡ ಸಹಾಯ ಹಸ್ತವನ್ನು ನೀಡಬೇಕು, ಇಲ್ಲಿಂದ ಕಳುಹಿಸುವ ಸಾಮಗ್ರಿಗಳನ್ನು ಸಂತ್ರಸ್ತರಿಗೆ ತಲುಪಿಸಲು ಸಹಾಯ ಮಾಡಬೇಕು ಎಂದು ವಿಡಿಯೋ ಮೂಲಕ ಆಭಿಮಾನಿಗಳು, ಸ್ನೇಹಿತರಲ್ಲಿ ಮನವಿಯನ್ನು ‌ಮಾಡಿದ್ದಾರೆ.

ABOUT THE AUTHOR

...view details