ಕರ್ನಾಟಕ

karnataka

By

Published : Dec 7, 2020, 12:38 PM IST

ETV Bharat / state

ರಾಹುಲ್, ಪ್ರಿಯಾಂಕ ಗಾಂಧಿ ಕ್ರಾಸ್ ಬ್ರೀಡ್ ಅಂತ ಸಿದ್ದರಾಮಯ್ಯ ಒಪ್ಕೊತಾರಾ?: ಸಚಿವ ಕೆ.ಎಸ್.ಈಶ್ವರಪ್ಪ

600 ವರ್ಷದಿಂದ ಕ್ರಾಸ್ ಬ್ರೀಡ್​ ಇದೆ ಅಂತ ಕಾಂಗ್ರೆಸ್ ನವರು ಹೇಳುತ್ತಿದ್ದಾರೆ. ಕ್ರಾಸ್ ಬ್ರೀಡ್​ ಅನ್ನೋ ಪದ ಬಳಸೋದು ನಮ್ಮ ಸಂಸ್ಕೃತಿ ಅಲ್ಲ. ಆ ಪದ ನಾಯಿಗಳಿಗೆ ಬಳಕೆ ಮಾಡುವುದು, ಮನುಷ್ಯರಿಗೆ ಅಲ್ಲ ಎಂದು ಸಚಿವ ಕೆ.ಎಸ್.ಈಶ್ವರಪ್ಪ ವಾಗ್ದಾಳಿ ನಡೆಸಿದರು.

Minister KS Eshwarappa slams Siddaramaiah
ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಸಚಿವ ಕೆ.ಎಸ್.ಈಶ್ವರಪ್ಪ

ಬೆಂಗಳೂರು: ಸಿದ್ದರಾಮಯ್ಯ ಕ್ರಾಸ್ ಬೀಡ್ ಬಗ್ಗೆ ಮಾತನಾಡುತ್ತಾರೆ. ಇಂದಿರಾ ಗಾಂಧಿ ಮದುವೆ ಆಗಿದ್ಯಾರಿಗೆ?. ರಾಜೀವ್ ಗಾಂಧಿ ಕ್ರಾಸ್ ಬ್ರೀಡ್​ ಅಂತ ಒಪ್ಕೊತಾರಾ ಸಿದ್ದರಾಮಯ್ಯ? ಎಂದು ಸಚಿವ ಕೆ.ಎಸ್.ಈಶ್ವರಪ್ಪ ತಿರುಗೇಟು ನೀಡಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಕ್ರಾಸ್ ಬ್ರೀಡ್​ ಅಂತ ಒಪ್ಕೊತಾರಾ?. ಲವ್ ಜಿಹಾದ್ ನಲ್ಲಿ ನಾಟಕ ಮಾಡಿ ಮೋಸ ಮಾಡಿ ವಿದೇಶಕ್ಕೆ ಹೆಣ್ಣು ಮಕ್ಕಳನ್ನು ಮಾರುತ್ತಿದ್ದಾರೆ. ಅಂತರ್ಜಾತಿ ವಿವಾಹಕ್ಕೆ ನಮ್ಮ ವಿರೋಧ ಇಲ್ಲ. ಆದರೆ ನಮ್ಮ ಮಕ್ಕಳು ಅವರ ಮಕ್ಕಳನ್ನು ಕಂಡೋರಿಗೆ ಮಾರೋದನ್ನು ಸಿದ್ದರಾಮಯ್ಯ ಒಪ್ಪುತ್ತಾರಾ?. ಪ್ರೀತಿ ಹೆಸರಲ್ಲಿ ಹೆಣ್ಣು ಮಕ್ಕಳನ್ನು ಮಾರುತ್ತಾ ಇದ್ದಾರೆ ಎಂದು ಕಿಡಿ ಕಾರಿದರು.

ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಸಚಿವ ಕೆ.ಎಸ್.ಈಶ್ವರಪ್ಪ

600 ವರ್ಷದಿಂದ ಕ್ರಾಸ್ ಬ್ರೀಡ್​ ಇದೆ ಅಂತ ಕಾಂಗ್ರೆಸ್ ನವರು ಹೇಳುತ್ತಿದ್ದಾರೆ. ಕ್ರಾಸ್ ಬ್ರೀಡ್​ ಅನ್ನೋ ಪದ ಬಳಸೋದು ನಮ್ಮ ಸಂಸ್ಕೃತಿ ಅಲ್ಲ. ಅದು ನಾಯಿಗಳಿಗೆ ಬಳಕೆ ಮಾಡೋದು ಮನುಷ್ಯರಿಗೆ ಅಲ್ಲ ಎಂದು ವಾಗ್ದಾಳಿ ನಡೆಸಿದರು.

ಓದಿ: ಗೋಹತ್ಯೆ ನಿಷೇಧ ಬಿಲ್ ತಂದೇ ತರ್ತೇವೆ: ಸಚಿವ ಪ್ರಭು ಚವ್ಹಾಣ್

ಸಿದ್ದರಾಮಯ್ಯಗೆ ತಿರುಗೇಟು: ಗೋವನ್ನು ತಾಯಿ ಅಂತ ಕರೆಯುತ್ತೇವೆ. ಆದರೆ ಸಿದ್ದರಾಮಯ್ಯ ವಯಸ್ಸಾದ ಗೋವನ್ನು ಕಸಾಯಿ ಖಾನೆಗೆ ಕೊಡದೇ ಬಿಜೆಪಿ ಆರ್ ಎಸ್ ಎಸ್ ಲೀಡರ್ ಗಳ ಮನೆ ಮುಂದೆ ಬಿಟ್ಟುಕೊಳ್ಳಲಿ ಎಂದಿದ್ದಾರೆ. ಹಾಗಾದರೆ ಸಿದ್ದರಾಮಯ್ಯ ಅವರ ತಾಯಿಗೆ ವಯಸ್ಸಾಗಿದೆ ಅಂತ ಯಾರದಾದರೂ ಮನೆ ಮುಂದೆ ಬಿಟ್ ಬರ್ತಾರಾ? ಎಂದು ಪ್ರಶ್ನಿಸಿದರು.

ಬಹಳ ಮಾಡಿದ್ದೇವೆ ಅಂತ ಹೇಳುವ ಸಿದ್ದರಾಮಯ್ಯ ಚಾಮುಂಡೇಶ್ವರಿಯಲ್ಲಿ ಏಕೆ ಸೋತ್ರು?. ಗ್ರಾಮ ಪಂಚಾಯತಿಗೆ ಚುನಾವಣೆ ಪ್ರಣಾಳಿಕೆ ಮಾಡ್ತಿದ್ದಾರಲ್ಲವಾ ಕಾಂಗ್ರೆಸ್ ನವರು?. ಹಸು ಕಡಿಯೋಕೆ ಅವಕಾಶ ಕೊಡ್ತೀವಿ ಅಂತ ಪ್ರಣಾಳಿಕೆಯಲ್ಲಿ ಹೇಳಲಿ ನೋಡೋಣ. ಬಹುಸಂಖ್ಯಾತರ ಮನಸ್ಸಿಗೆ ಯಾಕೆ ನೋವು ಮಾಡ್ತೀರಿ? ಎ‌ಂದು ಕಿಡಿ ಕಾರಿದರು.

ABOUT THE AUTHOR

...view details