ಕರ್ನಾಟಕ

karnataka

By

Published : Jul 22, 2019, 10:15 PM IST

ETV Bharat / state

ನಾನು ರಾಜೀನಾಮೆ ನೀಡಿಲ್ಲ: ಸದನದಲ್ಲಿ ಸಿಎಂ ಕುಮಾರಸ್ವಾಮಿ ಸ್ಪಷ್ಟನೆ

ನಾನು ರಾಜೀನಾಮೆ ನೀಡಿದ್ದೇನೆ ಎಂಬ ವದಂತಿ ಹಬ್ಬಿದೆ. ಈ ಸುದ್ದಿಯನ್ನು ಯಾರು ಹರಡಿದ್ದಾರೆಂದು ಗೊತ್ತಿಲ್ಲ ಎಂದು ಸಿಎಂ ಸದನದಲ್ಲಿ ಹೇಳಿದರು.

ಕುಮಾರಸ್ವಾಮಿ

ಬೆಂಗಳೂರು: ಸಿಎಂ ಕುಮಾರಸ್ವಾಮಿ ರಾಜೀನಾಮೆ ನೀಡಿರುವುದಾಗಿ ವದಂತಿ ಸೃಷ್ಟಿಯಾಗಿದೆ. ಈ ಕುರಿತು ಸ್ವತಃ ಮುಖ್ಯಮಂತ್ರಿಗಳೇ ಸದನದಲ್ಲಿ ಸ್ಪಷ್ಟನೆ ನೀಡಿದರು.

ಸದನದಲ್ಲಿ ಮಾತನಾಡಿದ ಸಿಎಂ ಕುಮಾರಸ್ವಾಮಿ, ನಾನು ರಾಜೀನಾಮೆ ನೀಡಿದ್ದೇನೆ ಎಂಬ ವದಂತಿ ಹಬ್ಬಿದೆ. ಈ ಸುದ್ದಿಯನ್ನು ಯಾರು ಹರಡಿದ್ದಾರೆಂದು ಗೊತ್ತಿಲ್ಲ. ಸಿಎಂ ಆಗಲು ಯಾರು ಕಾಯುತ್ತಿದ್ದಾರೆಂದು ನನಗೆ ತಿಳಿದಿಲ್ಲ. ಯಾರೋ ನನ್ನ ಸಹಿಯನ್ನು ನಕಲಿ ಮಾಡಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಈ ರಾಜೀನಾಮೆ ಪತ್ರ ಹರಿದಾಡುತ್ತದೆ. ಇದು ನನಗೆ ಆಘಾತ ತಂದಿದೆ ಎಂದು ತಿಳಿಸಿದರು.

ನಾನು ರಾಜೀನಾಮೆ ನೀಡಿಲ್ಲ. ಯಾರೋ ನನ್ನ ಸಹಿಯನ್ನು ನಕಲಿ ಮಾಡಿ, ವದಂತಿ ಹರಡುತ್ತಿದ್ದಾರೆ ಎಂದು ಇದೇ ವೇಳೆ ಕುಮಾರಸ್ವಾಮಿ ಸ್ಪಷ್ಟನೆ ನೀಡಿದರು.

For All Latest Updates

TAGGED:

ABOUT THE AUTHOR

...view details