ಕರ್ನಾಟಕ

karnataka

ETV Bharat / state

ಕೆಲಸ‌ ಕೊಟ್ಟ ಮಾಲೀಕನ‌ ಅಂಗಡಿಯಲ್ಲಿ ಚಿನ್ನಾಭರಣ ದೋಚಿದ್ದ ಆರೋಪಿ‌ ಅಂದರ್

ಚಿನ್ನದ ಅಂಗಡಿಯ ಮಾಲೀಕರು ಇಲ್ಲದ ವೇಳೆ ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಆರೋಪಿಯನ್ನು ಜಯನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಸಂಗಮೇಶ್ ಎಂದು ಗುರುತಿಸಲಾಗಿದ್ದು, ಸದ್ಯ ಜಯನಗರ ಪೊಲೀಸರು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.

By

Published : Mar 7, 2022, 8:17 AM IST

jayanagar gold theft case, police arrested by the suspect
ಕೆಲಸ‌ ಕೊಟ್ಟ ಮಾಲೀಕನ‌ ಅಂಗಡಿಯಲ್ಲಿ ಚಿನ್ನಾಭರಣ ದೋಚಿದ್ದ ಆರೋಪಿ‌ ಅಂದರ್

ಬೆಂಗಳೂರು: ಕೆಲಸ ಕೊಟ್ಟ ಮಾಲೀಕನ‌ ಅಂಗಡಿಯಲ್ಲಿ ಚಿನ್ನಾಭರಣ ದೋಚಿ‌‌ ಪರಾರಿಯಾಗಿದ್ದ ಆರೋಪಿಯನ್ನು ಜಯನಗರ‌ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಸಂಗಮೇಶ್ ಎಂದು ಗುರುತಿಸಲಾಗಿದೆ.

ಜಯನಗರದ ಎಂಪಿಎಸ್ ಜ್ಯುವೆಲ್ಲರಿ ಶಾಪ್ ನಲ್ಲಿ ಆರೋಪಿ ಸಂಗಮೇಶ್ ಹಲವು ತಿಂಗಳುಗಳಿಂದ ಕೆಲಸ ಮಾಡುತ್ತಿದ್ದ. ಜೊತೆಗೆ ಮಾಲೀಕರ ವಿಶ್ವಾಸವನ್ನು ಗಳಿಸಿಕೊಂಡಿದ್ದ. ಕಳೆದ ಫೆ.12ರಂದು ಮಾಲೀಕರು ಅಂಗಡಿಯಲ್ಲಿ‌‌ ಇಲ್ಲದಿರುವಾಗ 2 ಲಕ್ಷ ಮೌಲ್ಯದ ಎರಡು ವಜ್ರದುಂಗುರ‌ ಹಾಗೂ ಒಂದು ಚಿನ್ನದ ಉಂಗುರ ಕಳ್ಳತನ ಮಾಡಿದ್ದ. ‌ಬಳಿಕ ಯಾರಿಗೂ ತಿಳಿಯದಂತೆ ಕೆಲಸ‌ ಬಿಟ್ಟು ಪರಾರಿಯಾಗಿದ್ದ.

ಬಳಿಕ ಅಂಗಡಿಯಲ್ಲಿದ್ದ ಸಿಸಿಟಿವಿಯಲ್ಲಿ ಪರಿಶೀಲಿಸಿದಾಗ ಆರೋಪಿ ಕಳ್ಳತನ ಮಾಡಿರುವುದು ಕಂಡು ಬಂದಿತ್ತು. ಬಳಿಕ ಮಾಲೀಕರು ಪೊಲೀಸರಿಗೆ ದೂರು ನೀಡಿದ್ದಾರೆ. ಸದ್ಯ ಆರೋಪಿಯನ್ನು ಬಂಧಿಸಿದ ಜಯನಗರ ಪೊಲೀಸರು ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ ಎಂದು ತಿಳಿದುಬಂದಿದೆ.

ಓದಿ :ವಿಶೇಷ ವಿಮಾನದಲ್ಲಿ ದೆಹಲಿಗೆ ಆಗಮಿಸಿದ 160 ಭಾರತೀಯರು.. ಇಂದು ಉಕ್ರೇನ್​​ನಿಂದ ಬರಲಿದ್ದಾರೆ ಇನ್ನೂ1200 ಜನ

ABOUT THE AUTHOR

...view details