ಕರ್ನಾಟಕ

karnataka

By

Published : Apr 21, 2023, 9:28 AM IST

Updated : Apr 21, 2023, 1:20 PM IST

ETV Bharat / state

ಹಣ, ಪ್ರಶಸ್ತಿಗೋಸ್ಕರ ಕೆಲಸ ಮಾಡಬೇಡಿ: ಸುಧಾಮೂರ್ತಿ

ಇನ್ಫೋಸಿಸ್​ ಪ್ರತಿಷ್ಠಾನದ ಮುಖ್ಯಸ್ಥೆ ಸುಧಾಮೂರ್ತಿ ಅವರಿಗೆ ಪದ್ಮಭೂಷಣ ಪ್ರಶಸ್ತಿ ದೊರೆತ ಹಿನ್ನೆಲೆ ನಿರ್ಮಾಪಕ ಎಂ.ರಮೇಶ್​ ರೆಡ್ಡಿ ಹಾಗೂ ಗೆಳೆಯರ ಬಳಗ ಸನ್ಮಾನ ಕಾರ್ಯಕ್ರಮ ಹಮ್ಮಿಕೊಂಡಿದ್ದರು.

ಇನ್ಫೋಸಿಸ್​ ಪ್ರತಿಷ್ಠಾನದ ಮುಖ್ಯಸ್ಥೆ ಸುಧಾಮೂರ್ತಿ
ಇನ್ಫೋಸಿಸ್​ ಪ್ರತಿಷ್ಠಾನದ ಮುಖ್ಯಸ್ಥೆ ಸುಧಾಮೂರ್ತಿ

ಸುಧಾಮೂರ್ತಿ ಪ್ರತಿಕ್ರಿಯೆ

ಬೆಂಗಳೂರು:ಇನ್ಫೋಸಿಸ್‌ ಫೌಂಡೇಷನ್​ ಮುಖ್ಯಸ್ಥೆಸುಧಾಮೂರ್ತಿತಮ್ಮ ಸರಳತೆ ಮತ್ತು ಸಮಾಜ ಸೇವೆಯ ಮೂಲಕ ಹೆಸರುವಾಸಿಯಾದವರು. ಜೊತೆಗೆ ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಸಾಹಿತ್ಯ ರಚಿಸಿದ ಬರಹಗಾರ್ತಿ ಕೂಡ ಹೌದು. ಇನ್ಫೋಸಿಸ್‌ ಫೌಂಡೇಷನ್​ ಮೂಲಕ ಸುಧಾಮೂರ್ತಿ ತಮ್ಮ ಪಾಡಿಗೆ ಸಮಾಜ ಮುಖಿ ಕೆಲಸಗಳನ್ನ ಮಾಡ್ತಿದ್ದಾರೆ. ಅಂತೆಯೇ ಇತ್ತೀಚೆಗೆ ಕೇಂದ್ರ ಸರ್ಕಾರವು ಸುಧಾಮೂರ್ತಿ ಅವರ ಸಮಾಜ ಸೇವೆ ಗುರುತಿಸಿ, ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ.

ಈ ಹಿನ್ನೆಲೆಯಲ್ಲಿ ನಾತಿಚರಾಮಿ, ಪಡ್ಡೆಹುಲಿ, 100 ಹಾಗೂ ಗಾಳಿಪಟ2 ಸಿನಿಮಾಗಳ ನಿರ್ಮಾಪಕ ಎಂ.ರಮೇಶ್ ರೆಡ್ಡಿ ಗೆಳಯರ ಬಳಗ ಸೇರಿಕೊಂಡು ಖಾಸಗಿ ಹೋಟೆಲ್​​ನಲ್ಲಿ ಸುಧಾಮೂರ್ತಿಯವರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಈ ಕಾರ್ಯಕ್ರಮದಲ್ಲಿ ನಿರ್ಮಾಪಕ ರಮೇಶ್ ರೆಡ್ಡಿ ಗೆಳೆಯರು ಸುಧಾಮೂರ್ತಿಯವರಿಗೆ ಮೈಸೂರು ಪೇಟಾ ತೊಡಿಸಿ ಗೋವಿನ ನೆನಪಿನ ಕಾಣಿಕೆ ನೀಡಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಸುಧಾಮೂರ್ತಿಯವರು, ಮೊದಲು ಹೆಣ್ಣು ಮಕ್ಕಳು ಸಾಧನೆ ಮಾಡಬೇಕು. ಯಾಕಂದ್ರೆ ಹೆಣ್ಣು ಮಕ್ಕಳಲ್ಲಿ ಒಂದು ಅಗಾಧವಾದ ಶಕ್ತಿ ಇದೆ. ಅದನ್ನ ಬಳಸಿಕೊಂಡು ನೀವು ದೊಡ್ಡ ಮಟ್ಟದಲ್ಲಿ ಬೆಳಯುವ ಯೋಚನೆ ಮಾಡಬೇಕು. ನಿಮ್ಮನ್ನು ಎಂದಿಗೂ ಇತರರಿಗೆ ಹೋಲಿಸಿಕೊಂಡು ನಿಮ್ಮ ಮನಸ್ಸು ಹಾಳುಮಾಡಿಕೊಳ್ಳಬೇಡಿ ಎಂದರು.

ಹಾಗೆಯೇ ಮೊಬೈಲ್​​ನಲ್ಲಿ ಕೆಲಸಕ್ಕೆ ಬಾರದ ಮೆಸೇಜ್ ಓದಿ, ನಿಮ್ಮ ಕುಟುಂಬದ ನೆಮ್ಮದಿಯ ಹಾಳು ಮಾಡಿಕೊಳ್ಳಬೇಡಿ. ಇನ್ನು ತಂದೆ, ತಾಯಂದಿರು ದಯವಿಟ್ಟು ಮಕ್ಕಳಿಗೆ ಓದಿ ಅಂತಾ ಒತ್ತಡ ಹಾಕಬೇಡಿ. ಆ ಮಗುವಿಗೆ ಸುಂದರವಾದ ರೂಮ್ ಕಟ್ಟಿಸಿ ಕೊಟ್ಟೆ, ವಿದೇಶಕ್ಕೆ ಕರೆದುಕೊಂಡು ಹೋದೆ, ಅವನು ಹೇಳಿದ ಹಾಗೇ ನಾವು ಮಾಡಿದ್ದೇವೆ ಅಂತಾ ಮಕ್ಕಳ ಮೇಲೆ ಪೋಷಕರು ಒತ್ತಡ ಹೇರಬಾರದು. ಯಾಕಂದ್ರೆ ಇದು ಕಾಂಫಿಟೇಷನ್ ಯುಗ ನಿಮ್ಮ ಮಗ ಸದಾ ಕಾಂಫಿಟೇಟರ್ ಆಗಿ ಇರಬೇಕಾದ ಪರಿಸ್ಥಿತಿ ಇದೆ ಎಂದು ಹೇಳಿದರು.

ನಾವು ಪ್ರಶಸ್ತಿಗೋಸ್ಕರ, ಹಣಕ್ಕೋಸ್ಕರ ಅಥವಾ ಮನ್ನಣೆ ಸಿಗುತ್ತೆ ಎಂದು ಕೆಲಸ ಮಾಡಬಾರದು. ನಾವು ಕೆಲಸವನ್ನು ಚೆನ್ನಾಗಿ ಮಾಡುತ್ತೇವೆ ಎಂದಾಗ ಪ್ರಶಸ್ತಿ, ಹಣ, ಮನ್ನಣೆ ಎಲ್ಲವೂ ನಮ್ಮನ್ನು ಹಿಂಬಾಲಿಸಿಕೊಂಡು ಬರುತ್ತವೆ ಎಂದರು.

ಇದನ್ನೂ ಓದಿ:ಶ್ವಾನದ ಕೈಯಲ್ಲಿ ಪುಸ್ತಕ ಬಿಡುಗಡೆ ಮಾಡಿಸಿದ ಇನ್ಫೋಸಿಸ್ ಸುಧಾ ಮೂರ್ತಿ

ಹಾಗೆಯೇ ಪ್ರತಿಯೊಬ್ಬರು ಪ್ರಾಣಿಗಳ ಬಗ್ಗೆ ಪ್ರೀತಿ ವಾತ್ಸಲ್ಯ ಹೊಂದಿರಬೇಕು. ಪ್ರತಿದಿನ ನೀವು ಕೂಡಿಟ್ಟ ಹಣದಲ್ಲಿ 10 ರೂಪಾಯಿ ಉಳಿಸಿದರೆ ವರ್ಷಕ್ಕೆ 3,650 ರೂಪಾಯಿ ಆಗುತ್ತೆ. ಆ ಹಣವನ್ನ ಬೀದಿಯಲ್ಲಿರುವ ಪ್ರಾಣಿಗಳನ್ನ ಸಾಕುವ ಸಂಸ್ಥೆಗಳಿಗೆ ಅಥವಾ ಗೋ ಶಾಲೆಗಳಿಗೆ ನೀಡಿದರೇ ನೀವು ಕೊಟ್ಟ ಹಣ ಮಾತು ಬಾರದ ಪ್ರಾಣಿಗಳ ಹೊಟ್ಟೆಯನ್ನ ತುಂಬಿಸುತ್ತೆ ಎಂದು ತಿಳಿಸಿದರು.

ಇದನ್ನೂ ಓದಿ:ಬಿಸಿ ನೀರು ಪವಾಡ ಲಕ್ಷ್ಮೀ ವೆಂಕಟೇಶ್ವರ ದೇಗುಲಕ್ಕೆ ಇನ್ಫೋಸಿಸ್​ ಸುಧಾಮೂರ್ತಿ ಭೇಟಿ

ಇದನ್ನೂ ಓದಿ:Watch.. ಮಕ್ಕಳಿಗೆ 14 ವರ್ಷದವರೆಗೂ ಓದುವ ಹವ್ಯಾಸ ರೂಢಿಸಿ: ಸುಧಾಮೂರ್ತಿ ಸಲಹೆ

Last Updated : Apr 21, 2023, 1:20 PM IST

ABOUT THE AUTHOR

...view details