ಕರ್ನಾಟಕ

karnataka

ETV Bharat / state

ರಾಜ್ಯದಲ್ಲಿ ಕೈಗಾರಿಕಾ ಬೆಳವಣಿಗೆಗೆ ಒತ್ತು: 9 ವಿಷನ್ ಗ್ರೂಪ್ ರಚನೆ, ಪ್ರತಿ ತಂಡಕ್ಕೂ ಗಣ್ಯ ಉದ್ಯಮಿಗಳ ನೇಮಕ

ರಾಜ್ಯ ಸರ್ಕಾರ 9 ಉದ್ಯಮ ವಲಯಗಳಿಗೆ ವಿಷನ್​ ಗ್ರೂಪ್​ಗಳನ್ನು ರಚಿಸಿ ಆದೇಶ ಹೊರಡಿಸಿದೆ.

By ETV Bharat Karnataka Team

Published : Oct 21, 2023, 6:16 AM IST

ವಿಧಾನಸೌಧ
ವಿಧಾನಸೌಧ

ಬೆಂಗಳೂರು:ರಾಜ್ಯದಲ್ಲಿ ಕೈಗಾರಿಕೆಗಳ ಬೆಳವಣಿಗೆಗೆ ಒತ್ತು ನೀಡಿರುವ ಸರ್ಕಾರ ಭಾರಿ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ಅಧ್ಯಕ್ಷತೆಯಲ್ಲಿ 9 ಉದ್ಯಮ ವಲಯಗಳಿಗೆ ವಿಷನ್ ಗ್ರೂಪ್‌​ಗಳನ್ನು ರಚಿಸಿ, ಆದೇಶ ಹೊರಡಿಸಿದೆ. ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಇವುಗಳಿಗೆ ಉಪಾಧ್ಯಕ್ಷರಾಗಿದ್ದು, ಎಲ್ಲ ವಿಷನ್ ಗ್ರೂಪ್‌ಗಳಿಗೂ ಆಯಾ ವಲಯದ ಗಣ್ಯ ಉದ್ಯಮಿಗಳನ್ನು ಸದಸ್ಯರನ್ನಾಗಿ ನೇಮಿಸಲಾಗಿದೆ.

ಸ್ಪಷ್ಟ ಗುರಿಗಳೊಂದಿಗೆ ವಿಷನ್ ಗ್ರೂಪ್​ಗಳನ್ನು ರಚಿಸಲಾಗುವುದು ಎಂದು ಹೇಳಿದ್ದ ಸರ್ಕಾರ, ವೈಮಾಂತರಿಕ್ಷ ಮತ್ತು ರಕ್ಷಣೆ, ಮಶೀನ್ ಟೂಲ್ಸ್, ಎಲೆಕ್ಟ್ರಾನಿಕ್ಸ್ ಸಿಸ್ಟಂ ಡಿಸೈನ್ ಮತ್ತು ಮ್ಯಾನುಫ್ಯಾಕ್ಚರಿಂಗ್, ಫಾರ್ಮಾಸುಟಿಕಲ್ಸ್, ಕೋರ್ ಮ್ಯಾನುಫ್ಯಾಕ್ಚರಿಂಗ್, ಆಟೋಮೋಟೀವ್/ಎಲೆಕ್ಟ್ರಿಕ್ ವೆಹಿಕಲ್ಸ್, ಇಂಡಸ್ಟ್ರಿ 5.0, ಜವಳಿ ಮತ್ತು ಹಸಿರು ಇಂಧನ ವಲಯಗಳಿಗೆ ಈ ಉಪಕ್ರಮ ಕೈಗೊಂಡಿದೆ.

ಈ ವಿಷನ್ ಗ್ರೂಪ್​ಗಳು ಉದ್ಯಮಗಳ ಬೆಳವಣಿಗೆ ಸಾಧಿಸುವ ನಿಟ್ಟಿನಲ್ಲಿ ಕೈಗಾರಿಕಾ ಇಲಾಖೆಗೆ ಅಗತ್ಯ ಮಾರ್ಗದರ್ಶನ ಮಾಡಲಿದ್ದು, ಬಂಡವಾಳ ಹೂಡಿಕೆಗೆ ಇರುವ ಅವಕಾಶಗಳನ್ನು ಶೋಧಿಸಲಿವೆ. ವಿಷನ್ ಗ್ರೂಪ್​ಗಳಿಗೆ ನೇಮಕವಾಗಿರುವ ಸದಸ್ಯರ ವಿವರ ಹೀಗಿದೆ:

ವೈಮಾಂತರಿಕ್ಷ & ರಕ್ಷಣೆ: ಅಪ್ಪಾರಾವ್ ವೆಂಕಟ ಮಲ್ಲವರಪು (ಸೆಂಟಮ್ ಎಲೆಕ್ಟ್ರಾನಿಕ್ಸ್), ಉದಯಂತ್ ಮಲ್ಹೋತ್ರ (ಡೈನಾಮಿಕ್ ಟೆಕ್ನಾಲಜೀಸ್), ಎಚ್.ಜಿ.ಚಂದ್ರಶೇಖರ್ (ಸಾಸ್ಮೋಸ್), ಅಶ್ವಿನಿ ಭಾರ್ಗವ (ಬೋಯಿಂಗ್), ಕೃತ್ತಿವಾಸ ಮುಖರ್ಜಿ (ಏರ್ ಬಸ್), ಸಮಿತ್ ರಾಯ್ (ರೇಥಿಯಾನ್), ಸಿ.ಬಿ.ಅನಂತಕೃಷ್ಣನ್ (ಎಚ್ಎಎಲ್).

ಇ.ಎಸ್.ಡಿ.ಎಂ: ಜಿತೇಂದ್ರ ಛಡ್ಡಾ (ಗ್ಲೋಬಲ್ ಫೌಂಡ್ರೀಸ್), ಸಂತೋಷ್ ಕುಮಾರ್ (ಟೆಕ್ಸಾಸ್ ಇನ್ಸ್ಟ್ರುಮೆಂಟ್ಸ್), ರಮೇಶ್ ಕುನ್ಹಿಕಣ್ಣನ್ (ಕೇನ್ಸ್ ಟೆಕ್ನಾಲಜಿ), ವಿನಯ್ ಶೆಣೈ (ಇನ್ಫೈನ್ ಆನ್), ವೇಣು ನೂಗೂರಿ (ಹಿಟಾಚಿ ಎನರ್ಜಿ), ಎಸ್ ಕೆ ಮೂರ್ತಿ (ಇಂಟೆಲ್), ಚರಣ್ ಗುರುಮೂರ್ತಿ (ಟಾಟಾ ಸೆಮಿಕಂಡಕ್ಟರ್ಸ್).

ಆಟೋ/ಇ.ವಿ: ಗುರುಪ್ರಸಾದ್ ಮುದ್ಲಾಪುರ (ಬಾಶ್), ಅರುಣ್ ಮಿತ್ತಲ್ (ಎಕ್ಸೈಡ್), ಸುದೀಪ್ ದಳವಿ (ಟೊಯೋಟ), ಕಮಲ್ ಬಾಲಿ (ವೋಲ್ವೊ), ಸುಶಾಂತ್ ನಾಯಕ್ (ಟಾಟಾ ಮೋಟಾರ್ಸ್).

ಮಶೀನ್ ಟೂಲ್ಸ್: ಸಂಜಯ್ ಕೌಲ್ (ಟಿಮ್ ಕೆನ್), ಬಿ.ಹರೀಶ್ (ಎಸಿಇ), ಲಕ್ಷ್ಮೀಕಾಂತನ್ ಕೃಷ್ಣನ್ (ಟೇಗು ಟೆಕ್), ಎ.ವೆಂಕಟಕೃಷ್ಣನ್ (ಯೂಕೆನ್), ತರಂಗ್ ವಿ.ಪಾರೀಕ್ (ವೈಜಿ-1).

ಫಾರ್ಮಾಸುಟಿಕಲ್ಸ್: ಜಿ.ವಿ.ಪ್ರಸಾದ್ (ರೆಡ್ಡಿ ಲ್ಯಾಬ್ಸ್), ಸಿದ್ಧಾರ್ಥ ಮಿತ್ತಲ್ (ಬಯೋಕಾನ್), ಸಮೀರ್ ಕೇತ್ರಪಾಲ್ (ಜ್ಯುಬಿಲಿಯೆಂಟ್ ಲೈಫ್ ಸೈನ್ಸಸ್), ವಿಷ್ಣುಕಾಂತ ಭೂತದ (ಶಿಲ್ಪಾ), ಉಮಾಂಗ್ ವೋಹ್ರ (ಸಿಪ್ಲಾ), ದಿಲೀಪ್ ಸುರಾನ (ಮೈಕ್ರೋಲ್ಯಾಬ್ಸ್).

ಕೋರ್ ಮ್ಯಾನುಫ್ಯಾಕ್ಚರಿಂಗ್:ವಿನೋದ್ ನೋವಲ್ (ಜಿಂದಾಲ್), ಕೆ.ಸಿ.ಜಾನ್ವಾರ್ (ಅಲ್ಟ್ರಾ ಟೆಕ್), ರಾಹುಲ್ ಕುಮಾರ್ (ಬಲ್ದೋಟ), ಬಹಿರಜಿ ಘೋರ್ಫಡೆ (ಸ್ಮಿಯೋರ್), ಆರ್.ಬಿ.ಎಂ.ತ್ರಿಪಾಠಿ (ಜೆ ಕೆ ಸಿಮೆಂಟ್).

ಇಂಡಸ್ಟ್ರಿ 5.0: ಅಕ್ಷಯ್ ಸಿಂಘಾಲ್ (ಲಾಗ್ 9), ಮಲ್ಲಿಕಾರ್ಜುನ್ ಸಂತಾನಕೃಷ್ಣನ್ (ಜಿ ಎಸ್ ಗ್ಲೋಬಲ್ ವೆಂಚರ್ಸ್), ರೋಹನ್ ಗಣಪತಿ (ಬೆಲಾಟ್ರಿಕ್ಸ್), ಅವೈಸ್ ಅಹಮದ್ (ಪಿಕ್ಸೆಲ್), ಸೌವಿಕ್ ಸೇನಗುಪ್ತ (ಇನ್ಫ್ರಾ ಮಾರ್ಕೆಟ್), ಗದಾಧರ ರೆಡ್ಡಿ (ನೋಪೋ ನ್ಯಾನೋ ಟೆಕ್ನಾಲಜೀಸ್).

ಜವಳಿ:ಪಂಕಜ್ ನಾರೂಲ (ಶಾಹಿ ಎಕ್ಸ್ಪೋರ್ಟ್ಸ್), ಗೌತಮ್ ಚಕ್ರವರ್ತಿ (ಗೋಕಲದಾಸ್), ವಿಶಾಖ್ ಕುಮಾರ್ (ಆದಿತ್ಯ ಬಿರ್ಲಾ ಮಧುರಾ ಎಫ್ & ಎಲ್), ವಿ ಎಸ್ ಗಣೇಶ್ (ಪೇಜ್ ಇಂಡಸ್ಟ್ರೀಸ್), ಪುನೀತ್ ಲಾಲಭಾಯ್ (ಅರವಿಂದ್ ಮಿಲ್ಸ್),

ಹಸಿರು ಇಂಧನ: ಕಿಶೋರ್ ನಾಯರ್ (ಅವಾಡ ಎನರ್ಜಿ), ವಿವೇಕ್ ಸಿಂಗ್ಲಾ (ರೆನ್ಯೂ ಪವರ್), ಕೃಷ್ಣ ರೇವಂಕರ್ (ಎಂವೀ ಸೋಲಾರ್ ಸಿಸ್ಟಮ್ಸ್), ಶರದ್ ಪುಂಗಾಲಿಯ (ಆ್ಯಮ್ ಪ್ಲಸ್ ಸೋಲಾರ್), ಆಶಿಶ್ ಖನ್ನಾ (ಟಾಟಾ ಪವರ್ ಸೋಲಾರ್).

ಇದನ್ನೂ ಓದಿ:ದೇವನಹಳ್ಳಿ ತಾಲೂಕಿನಲ್ಲಿ ಭೂಸ್ವಾಧೀನಕ್ಕೆ ವಿರೋಧ: ರೈತರೊಂದಿಗೆ ಅ. 25ರ ಬಳಿಕ ಮತ್ತೊಂದು ಸಭೆ- ಸಚಿವ ಎಂ.ಬಿ.ಪಾಟೀಲ್

ABOUT THE AUTHOR

...view details