ಕರ್ನಾಟಕ

karnataka

ಉಪ-ಚುನಾವಣಾ ಗೆಲುವು ಬಿಎಸ್​​ವೈ ಸರ್ಕಾರಕ್ಕೆ ದೊರೆತ ಜನಬೆಂಬಲ: ಡಿವಿಎಸ್

ಶಿರಾ ಹಾಗೂ ಆರ್​ಆರ್​ ನಗರ ಉಪಕದನದಲ್ಲಿ ಬಿಜೆಪಿ ಗೆದ್ದು ಬೀಗಿರುವ ಹಿನ್ನೆಲೆ, ಎರಡೂ ಕ್ಷೇತ್ರದ ಅಭ್ಯರ್ಥಿಗಳಿಗೆ ಅಭಿನಂದನೆ ಸಲ್ಲಿಸಿ ಟ್ವೀಟ್​ ಮಾಡಿದ ಕೇಂದ್ರ ಸಚಿವ ಸದಾನಂದ ಗೌಡ, ಜನ ಜಾತಿರಾಜಕಾರಣದ ವರಸೆಯನ್ನು ತಿರಸ್ಕರಿಸಿದ್ದಾರೆ ಎಂದು ಹೇಳಿದ್ದಾರೆ.

By

Published : Nov 10, 2020, 5:48 PM IST

Published : Nov 10, 2020, 5:48 PM IST

FIle Photo
ಸಂಗ್ರಹ ಚಿತ್ರ

ಬೆಂಗಳೂರು:2018ರಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಗೆದ್ದಿದ್ದ ರಾಜರಾಜೇಶ್ವರಿನಗರ ಮತ್ತು ಶಿರಾ ವಿಧಾನಸಭಾ ಕ್ಷೇತ್ರಗಳನ್ನು ಈಗ ಬಿಜೆಪಿ ವಶಪಡಿಸಿಕೊಂಡಿದ್ದು, ಇದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆಡಳಿತಕ್ಕೆ ದೊರೆತ ಜನಬೆಂಬಲವಾಗಿದೆ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಟ್ವೀಟ್​​ ಮೂಲಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ರಾಜರಾಜೇಶ್ವರಿನಗರ ಮತ್ತು ಶಿರಾ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಜಯಭೇರಿ ಹೊಡೆದಿರುವ ಬಿಜೆಪಿಯ ಮುನಿರತ್ನ ಹಾಗೂ ರಾಜೇಶಗೌಡ ಅವರಿಗೆ ಹಾರ್ದಿಕ ಅಭಿನಂದನೆಗಳು. ಪ್ರತಿಪಕ್ಷದವರ ಜಾತಿರಾಜಕಾರಣದ ವರಸೆಯನ್ನು ತಿರಸ್ಕರಿಸಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿದ ಮತದಾರ ಪ್ರಭುಗಳಿಗೂ ಅಭಿನಂದನೆಗಳು ಮತ್ತು ಧನ್ಯವಾದಗಳು. ರಾಜ್ಯ ಬಿಜೆಪಿ ಘಟಕ ಹಾಗೂ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೂ ಅಭಿನಂದನೆ ಎಂದು ಸದಾನಂದಗೌಡ ಟ್ವೀಟ್ ಮಾಡಿದ್ದಾರೆ.

ABOUT THE AUTHOR

...view details