ಕರ್ನಾಟಕ

karnataka

By

Published : Jul 20, 2019, 9:05 PM IST

Updated : Jul 20, 2019, 11:03 PM IST

ETV Bharat / state

ಶಾಸಕ ಶ್ರೀನಿವಾಸ್ ಮೇಲೆ ಮಾನನಷ್ಟ ಮೊಕದ್ದಮೆ ಹೂಡುವೆ: ಶಾಸಕ ಎಸ್.ಆರ್.ವಿಶ್ವನಾಥ್

ಶ್ರೀನಿವಾಸ್ ಗೌಡ 5 ಕೋಟಿ ಆರೋಪ ವಿಚಾರ ತಂದು, ಕಲಾಪವನ್ನು ಅಡ್ಡದಾರಿಗೆ ಎಳೆಯುವ ಪ್ರಯತ್ನ ಮಾಡಿದರು. ವಿಶ್ವಾಸಮತ ನಮ್ಮ ಪ್ರಮುಖ ಅಜೆಂಡವಾಗಿತ್ತು. ಹಾಗಾಗಿ, ನಾವು ಸದನದಲ್ಲಿ ಮಾತಾಡೋದಕ್ಕೆ ಆಗಿರಲಿಲ್ಲ. ಹೀಗಾಗಿ ಈಗ ಶ್ರೀನಿವಾಸ್ ಮೇಲೆ ನಾನು ಮಾನನಷ್ಟ ಮೊಕದ್ದಮೆ ಹೂಡಲಿದ್ದೇನೆ ಎಂದು ಯಲಹಂಕ ಶಾಸಕ ಎಸ್. ಆರ್. ವಿಶ್ವನಾಥ್ ಹೇಳಿದ್ದಾರೆ.

ಶಾಸಕ ಎಸ್.ಆರ್.ವಿಶ್ವನಾಥ್

ಬೆಂಗಳೂರು:ಸದನದಲ್ಲಿ 5 ಕೋಟಿ ರೂ. ವಿಚಾರವಾಗಿ ನನ್ನ ಹೆಸರು ಬಳಸಿ ತೇಜೋವಧೆ ಮಾಡಿದ ಶಾಸಕ ಶ್ರೀನಿವಾಸ್ ಮೇಲೆ ಕೋರ್ಟ್ ಮೆಟ್ಟಿಲೇರಿ 1ರೂ. ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಎಂದು ಯಲಹಂಕ ಶಾಸಕ ಎಸ್. ಆರ್. ವಿಶ್ವನಾಥ್ ಹೇಳಿದ್ದಾರೆ.

ಶಾಸಕ ಶ್ರೀನಿವಾಸ್ ಮೇಲೆ 1ರೂ. ಮಾನನಷ್ಟ ಮೊಕದ್ದಮೆ ಹೂಡುತ್ತೇನೆ: ಶಾಸಕ ಎಸ್.ಆರ್.ವಿಶ್ವನಾಥ್

ಯಲಹಂಕದ ರಮಡ ರೆಸಾರ್ಟ್ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶ್ರೀನಿವಾಸ್ ಗೌಡ 5 ಕೋಟಿ ಆರೋಪ ವಿಚಾರ ತಂದು, ಕಲಾಪವನ್ನು ಅಡ್ಡದಾರಿಗೆ ಎಳೆಯುವ ಪ್ರಯತ್ನ ಮಾಡಿದರು. ವಿಶ್ವಾಸಮತ ನಮ್ಮ ಪ್ರಮುಖ ಅಜೆಂಡವಾಗಿತ್ತು. ಹಾಗಾಗಿ, ನಾವು ಸದನದಲ್ಲಿ ಮಾತಾಡೋದಕ್ಕೆ ಆಗಿರಲಿಲ್ಲ. ಹೀಗಾಗಿ ಈಗ ಶ್ರೀನಿವಾಸ್ ಮೇಲೆ ನಾನು ಮಾನನಷ್ಟ ಮೊಕದ್ದಮೆ ಹೂಡಲಿದ್ದೇನೆ ಎಂದು ಅವರು ತಿಳಿಸಿದರು.

ಸದನದಲ್ಲಿ ಸಿ.ಎಂ.ಕುಮಾರಸ್ವಾಮಿ ಬಹುಮತ ಸಾಬೀತುಪಡಿಸಬೇಕು ಎಂಬುದಷ್ಟೆ ನಮ್ಮ ಧ್ಯೇಯವಾಗಿದೆ. ಹೀಗಾಗಿ, ಅವರು ಏನೇ ಹೇಳಿದರು ನಾವು ತಲೆಕೆಡಿಸಿಕೊಳ್ಳುವ ಗೋಜಿಗೆ ಹೋಗುತ್ತಿಲ್ಲ ಎಂದರು. ಇನ್ನೂ 5 ಕೋಟಿ ವಂಚನೆ ವಿಚಾರವಾಗಿ, ನಾವು ಹೋಗಿ ಅವರ ಮನೆಯ ಟಾಯ್ಲೆಟ್​ನಲ್ಲಿ ಹಣ ಇಟ್ಟಿದ್ದೆವು. 2 ತಿಂಗಳ ಬಳಿಕ ಅವರು ಹಿಂತಿರುಗಿಸಿದ್ದಾರೆ ಎಂಬ ಹೇಳಿಕೆ ನೀಡಿ ಟಾಂಗ್​ ನೀಡಿದರು. ಅಷ್ಟೇ ಅಲ್ಲದೆ, ಹಣ ಕೊಟ್ಟಿರೋದನ್ನ ಸಾಬೀತು ಪಡಿಸಲಿ ಎಂದು ಸವಾಲು ಹಾಕಿದರು.

Last Updated : Jul 20, 2019, 11:03 PM IST

For All Latest Updates

TAGGED:

ABOUT THE AUTHOR

...view details