ಕರ್ನಾಟಕ

karnataka

ETV Bharat / state

ಬೆಂಗಳೂರಿಗೆ ಆಗಮಿಸಿದ ಕಾಂಗ್ರೆಸ್​​​ ಉಸ್ತುವಾರಿ ವೇಣುಗೋಪಾಲ್​​

ಶಾಸಕರ ರಾಜೀನಾಮೆ ಹಿನ್ನೆಲೆ ಈ ವಿಚಾರವಾಗಿ ಚರ್ಚಿಸಲು ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಬೆಂಗಳೂರಿಗೆ ಆಗಮಿಸಿದ್ದಾರೆ.

By

Published : Jul 6, 2019, 7:21 PM IST

ಬೆಂಗಳೂರಿಗೆ ಆಗಮಿಸಿದ ಕಾಂಗ್ರೆಸ್​ ಉಸ್ತುವಾರಿ ಕೆಸಿವಿ

ಬೆಂಗಳೂರು: ಶಾಸಕರ ರಾಜೀನಾಮೆ ವಿಚಾರ ನನಗೆ ಗೊತ್ತಾಗಿದೆ. ಹೀಗಾಗಿ ನಾನು ಬೆಂಗಳೂರಿಗೆ ಆಗಮಿಸಿದ್ದೇನೆ. ಚರ್ಚೆ ಮಾಡಿ ಮುಂದಿನ ನಿರ್ಧಾರ ತಿಳಿಸುತ್ತೇವೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್​ ತಿಳಿಸಿದ್ರು.

ಬೆಂಗಳೂರಿಗೆ ಆಗಮಿಸಿದ ಕಾಂಗ್ರೆಸ್​ ಉಸ್ತುವಾರಿ ಕೆಸಿವಿ

ರಾಜ್ಯ ರಾಜಕಾರಣದಲ್ಲಿ ರಾಜೀನಾಮೆ ಪರ್ವ ಶುರುವಾಗಿರುವ ಬೆನ್ನಲ್ಲೇ ರಾಜ್ಯ‌ ನಾಯಕರ ಜೊತೆ ಚರ್ಚೆ ನಡೆಸಲು ವೇಣುಗೋಪಾಲ್​ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಾಗ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಚರ್ಚೆ ಮಾಡಿ ನಂತರ ಹೇಳುವೆ ಎಂದರು. ಇನ್ನು ಸೌಮ್ಯಾ ರೆಡ್ಡಿ ಆಕಸ್ಮಿಕವಾಗಿ ಸಿಕ್ರು. ಅವರ ಜೊತೆ ಮಾತನಾಡಿದ್ದೇನೆ. ಇದರಲ್ಲಿ ಯಾವುದೇ ರಾಜಕೀಯ ಇಲ್ಲ ಎಂದರು. ಇದೇ ವೇಳೆ ಈಶ್ವರ್ ಕಂಡ್ರೆ ಕೂಡ ಕೆಸಿವಿ ಜೊತೆಗಿದ್ರು.

ABOUT THE AUTHOR

...view details