ಕರ್ನಾಟಕ

karnataka

ಬೆಂಗಳೂರಲ್ಲಿ ಸೀಮಿತ ಅವಧಿಗೆ ಮಾತ್ರ ಅಂಗಡಿಗಳು ಓಪನ್ : ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದ ಜನ

By

Published : Apr 24, 2021, 10:39 AM IST

ಕೋವಿಡ್ ಎರಡನೇ ಅಲೆಯ ಓಟಕ್ಕೆ ಬ್ರೇಕ್ ಹಾಕಲು ಬೆಂಗಳೂರಿನಲ್ಲಿ ಶುಕ್ರವಾರದಿಂದ-ಸೋಮವಾರದವರೆಗೆ ವೀಕೆಂಡ್ ಕರ್ಫ್ಯೂ ವಿಧಿಸಲಾಗಿದೆ. ಹೀಗಾಗಿ, ನಿಗದಿತ ಅವಧಿಯಲ್ಲಿ ಮಾತ್ರ ಅಂಗಡಿ-ಮುಂಗಟ್ಟು ತೆರೆಯಲು ಅವಕಾಶ ನೀಡಲಾಗಿದೆ. ಆದ್ದರಿಂದ, ಅಗತ್ಯ ವಸ್ತುಗಳ ಖರೀದಿಗೆ ಜನ ಮುಗಿಬಿದ್ದಿದ್ದರು.

Bengalureans rushed to purchase essentia
ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದ ಬೆಂಗಳೂರಿಗರು

ಬೆಂಗಳೂರು : ಶನಿವಾರ ಹಾಗೂ ಭಾನುವಾರ ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ ಘೋಷಿಸಲಾಗಿದ್ದು, ದಿನಸಿ, ತರಕಾರಿ, ಹಾಲಿನ ಅಂಗಡಿಗಳು ಬೆಳಗ್ಗೆ 6 ರಿಂದ 10 ಗಂಟೆಯವರೆಗೆ ಮಾತ್ರ ತೆರೆದಿರುವ ಕಾರಣ ನಗರದಲ್ಲಿ ಜನ ಖರೀದಿಗೆ ಮುಗಿಬಿದ್ದಿರುವ ದೃಶ್ಯ ಕಂಡು ಬಂತು.

ಸೀಮಿತ ಅವಧಿ ಮಾತ್ರ ಅಂಗಡಿಗಳು ತೆರೆದಿರುವ ಹಿನ್ನೆಲೆ, ಸಾಮಾಜಿಕ ಅಂತರವನ್ನೂ ಕಾಪಾಡದೆ, ಮಾಸ್ಕ್ ಕೂಡಾ ಸರಿಯಾಗಿ ಹಾಕಿಕೊಳ್ಳದೆ ಜನ ಅಗತ್ಯ ವಸ್ತುಗಳ ಖರೀದಿಯಲ್ಲಿ ತೊಡಗಿದ್ದರು. ಬೇಕರಿ, ದಿನಸಿ, ಹಾಲು, ತರಕಾರಿ ಹಲವೆಡೆ ಬೆಳಗ್ಗೆಯೇ ಸ್ಟಾಕ್ ಖಾಲಿಯಾಗಿದೆ. ಇನ್ನೂ ಹಲವು ಜನ ಹೋಟೆಲ್​​ ಪಾರ್ಸೆಲ್​ ಅವಲಂಬಿಸಿದ್ದಾರೆ.

ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದ ಬೆಂಗಳೂರಿಗರು

ಓದಿ : ವೀಕೆಂಡ್ ನೈಟ್ ಕರ್ಫ್ಯೂ : ಶಿವಮೊಗ್ಗದಲ್ಲಿ ಉತ್ತಮ ಪ್ರತಿಕ್ರಿಯೆ

ಈ ನಡುವೆ ತಳ್ಳುವ ಗಾಡಿಯಲ್ಲಿರುವ ವ್ಯಾಪಾರಿಗಳು, ತರಕಾರಿ ಮಾರಾಟವಾಗದಿದ್ದರೆ ಎಲ್ಲವೂ ಹಾಳಾಗಲಿದೆ ಎಂಬ ಬೇಸರದಲ್ಲಿದ್ದಾರೆ. ಮತ್ತೆ ನಾಳೆ ಬೆಳಗ್ಗೆಯೇ ಮಾರಲು ಅವಕಾಶ ಇರುವುದರಿಂದ ತಳ್ಳುಗಾಡಿಯ ವ್ಯಾಪಾರಿಗಳು ಚಿಂತೆಗೀಡಾಗಿದ್ದಾರೆ.

ABOUT THE AUTHOR

...view details