ಕರ್ನಾಟಕ

karnataka

By

Published : Sep 8, 2021, 8:51 PM IST

ETV Bharat / state

ಕೇರಳ ಪ್ರಯಾಣ ನಿರ್ಬಂಧ ಆದೇಶ ಪಾಲನೆಗೆ ಸ್ಥಳೀಯಾಡಳಿತಗಳು ಮುಂದಾಗಬೇಕು: ಗೌರವ್ ಗುಪ್ತಾ

ಕೇರಳದಲ್ಲಿ ನಿಫಾ ವೈರಸ್ ಹಾವಳಿ ಹೆಚ್ಚಳವಾಗಿದೆ. ಹೀಗಾಗಿ, ರಾಜ್ಯಕ್ಕೆ ಕೇರಳದಿಂದ ಬರುವುದನ್ನು ಹಾಗೂ ರಾಜ್ಯದಿಂದ ಕೇರಳಕ್ಕೆ ಹೋಗಿ ಬರುವುದನ್ನು ನಿರ್ಬಂಧಿಸಿ ಅಕ್ಟೋಬರ್ ಅಂತ್ಯದವರೆಗೆ ರಾಜ್ಯಸರ್ಕಾರ ಸೂಚನೆ ಹೊರಡಿಸಿದೆ.

BBMP Commissioner Gaurav Gupta statement about Nipah virus
ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ

ಬೆಂಗಳೂರು:ಕೇರಳದಲ್ಲಿ ನಿಫಾ ವೈರಸ್ ಹಾವಳಿ ಹೆಚ್ಚಳವಾಗಿದ್ದು ರಾಜ್ಯಕ್ಕೆ ಕೇರಳದಿಂದ ಬರುವುದನ್ನು ಹಾಗೂ ರಾಜ್ಯದಿಂದ ಕೇರಳಕ್ಕೆ ಹೋಗಿ ಬರುವುದನ್ನು ನಿರ್ಬಂಧಿಸಿ ಅಕ್ಟೋಬರ್ ಅಂತ್ಯದವರೆಗೆ ರಾಜ್ಯಸರ್ಕಾರ ಸೂಚನೆ ಹೊರಡಿಸಿದೆ. ಆದರೆ ಇದರ ಅನುಷ್ಠಾನಕ್ಕೆ ಇನ್ನಷ್ಟೇ ಸ್ಥಳೀಯ ಆಡಳಿತಗಳು ಮುಂದಾಗಬೇಕಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಹೇಳಿದ್ದಾರೆ.

ನಿನ್ನೆ ಸಂಜೆಯಷ್ಟೆ ಸರ್ಕಾರ ಆದೇಶ ಹೊರಡಿಸಿದೆ. ಇದನ್ನು ಜಾರಿಗೊಳಿಸಬೇಕಿದೆ. ಪೊಲೀಸ್ ಸಿಬ್ಬಂದಿ, ಹೋಂ ಗಾರ್ಡ್ಸ್​, ಮಾರ್ಷಲ್ಸ್ ಹಾಗು ಆರೋಗ್ಯ ಅಧಿಕಾರಿಗಳು ಆದೇಶವನ್ನು ಅನುಷ್ಠಾನಗೊಳಿಸಲಿದ್ದಾರೆ ಎಂದಿದ್ದಾರೆ.

ನಗರದಲ್ಲಿ ಲಸಿಕೆ ಪೂರೈಕೆ‌ ಪ್ರಮಾಣ ಹೆಚ್ಚಾಗಿರುವುದರಿಂದ ಒಂದರಿಂದ ಒಂದೂವರೆ ಲಕ್ಷ ಜನರಿಗೆ ಲಸಿಕೆ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಆರಂಭದಲ್ಲಿ ಯಲಹಂಕದಲ್ಲಿ ಚಾಲನೆ ನೀಡಲಾಗುತ್ತಿದೆ.

ಕೋವಿಡ್​ನಿಂದ ಮೃತಪಟ್ಟ ಬಿಬಿಎಂಪಿ ಸಿಬ್ಬಂದಿಗಳ ಕುಟುಂಬಕ್ಕೆ 30 ಲಕ್ಷ ರೂ ಪರಿಹಾರ, ವೃಂದ ಮತ್ತು ನೇಮಕಾತಿ ನಿಯಮಾವಳಿಗೆ ವಿರುದ್ಧವಾಗಿ ಪಾಲಿಕೆಯಲ್ಲಿ ಕೆಲಸ ಮಾಡ್ತಿರುವ ಬೇರೆ ಇಲಾಖೆ ಅಧಿಕಾರಿಗಳನ್ನು ಮಾತೃ ಇಲಾಖೆಗೆ ಹಿಂದಿರುಗಿಸಬೇಕೆಂದು ನಿನ್ನೆ ನೌಕರರು ಪ್ರತಿಭಟನೆ ನಡೆಸಿ, ಒತ್ತಾಯಿಸಿದ್ದರು. ನೌಕರರ ಪ್ರತಿಭಟನೆ ವೇಳೆ ಹಲವು ಆಶ್ವಾಸನೆ ಕೊಡಲಾಗಿದೆ ಎಂದರು.

ಗಣೇಶೋತ್ಸವದಲ್ಲಿ ಹೆಚ್ಚು ಜನ ಸೇರದಂತೆ ಸ್ಥಳೀಯವಾಗಿ ಪೊಲೀಸರು ಎಚ್ಚರ ವಹಿಸಬೇಕಿದೆ. ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಕೆಲವು ನಿಗಾ ಇಡಬೇಕಾಗುತ್ತದೆ. ನಿಫಾ ವೈರಸ್ ಹಿನ್ನೆಲೆ, ಆರೋಗ್ಯಾಧಿಕಾರಿಗಳು ಎಚ್ಚರ ವಹಿಸಿದ್ದಾರೆ ಎಂದರು.

ಬೆಂಗಳೂರು ನಗರದ ಎಲ್ಲಾ 8 ವಲಯಗಳಲ್ಲಿ ರಸ್ತೆ ಗುಂಡಿಗಳನ್ನು ಸಮರೋಪಾದಿಯಲ್ಲಿ ಮುಚ್ಚಲಾಗುತ್ತಿದೆ. ಪಾಲಿಕೆಯ ಡಾಂಬರು ಮಿಶ್ರಣ ಘಟಕದಿಂದ ಅಗತ್ಯಕ್ಕೆ ತಕ್ಕಂತೆ ಡಾಂಬರನ್ನು ಪಡೆದು ತ್ವರಿತಗತಿಯಲ್ಲಿ ರಸ್ತೆಗುಂಡಿಗಳನ್ನು ಮುಚ್ಚಿ ವಾಹನ ಸವಾರರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಪ್ರಮುಖ ರಸ್ತೆಗಳಾದ ಆರ್ಟರಿಯಲ್, ಸಬ್-ಆರ್ಟರಿಯಲ್ ರಸ್ತೆಗಳು, ಹೈ-ಡೆನ್ಸಿಟಿ ಕಾರಿಡಾರ್ ರಸ್ತೆಗಳು ಸೇರಿದಂತೆ ಎಲ್ಲಾ ವಾರ್ಡ್ ರಸ್ತೆಗಳಲ್ಲಿನ ರಸ್ತೆ ಗುಂಡಿಗಳನ್ನು ಸಮರೋಪಾದಿಯಲ್ಲಿ ಮುಚ್ಚಲಾಗುತ್ತಿದೆ.

ಮುಖ್ಯ ಆಯುಕ್ತರು ಪುಲಕೇಶಿನಗರ ವ್ಯಾಪ್ತಿಯ ಬೋರ್ ಬಂಡ್ ಬಿದ್ದಿರುವ ಗುಂಡಿಗಳು ಹಾಗೂ ರಸ್ತೆಯಲ್ಲಿ ಕತ್ತರಿಸುವ ಭಾಗಗಳನ್ನು ಮುಚ್ಚುವ ಸ್ಥಳಕ್ಕೆ ಭೇಟಿ ನೀಡಿ ಬುಧವಾರ ಪರಿಶೀಲನೆ ನಡೆಸಿದರು.

ರಸ್ತೆ ಗುಂಡಿಗಳನ್ನು ಮುಚ್ಚುವಾಗ ಗುಂಡಿ ಬಿದ್ದಿರುವ ಸ್ಥಳದ ಸುತ್ತಲು ಸ್ವಚ್ಛಗೊಳಿಸಿ ಗುಣಮಟ್ಟವಾಗಿ ಗುಂಡಿಗಳನ್ನು ಮುಚ್ಚಬೇಕು. ಹಾಗು ಹೆಚ್ಚು ಗುಂಡಿಗಳು ಬಿದ್ದಿರುವ ಸ್ಥಳಗಳಲ್ಲಿ ಆದ್ಯತೆ ಮೇರೆಗೆ ಮುಚ್ಚಿ ವಾಹನ ಸವಾರರಿಗೆ ಅನುಕೂಲ ಮಾಡಿಕೊಡಲು ಅಧಿಕಾರಿಗಳಿಗೆ ಈ ಸಂದರ್ಭದಲ್ಲಿ ತಿಳಿಸಿದರು.

ಇದನ್ನೂ ಓದಿ:ಕೈಗಾರಿಕೋದ್ಯಮಕ್ಕೆ ಭೂಮಿ ಪಡೆದು ಅನ್ಯ ಉದ್ದೇಶಕ್ಕೆ ಬಳಸಿದರೆ ಭೂಮಿ ವಾಪಸ್: ಸಚಿವ ನಿರಾಣಿ ಎಚ್ಚರಿಕೆ

For All Latest Updates

TAGGED:

ABOUT THE AUTHOR

...view details