ಕರ್ನಾಟಕ

karnataka

By

Published : Sep 9, 2019, 3:24 PM IST

ETV Bharat / state

ಬೆಂಗಳೂರಲ್ಲಿ ಎಟಿಎಂ ದರೋಡೆ... ಯಾವುದೇ ಸುಳಿವು ಸಿಗದಂತೆ ಲಕ್ಷಾಂತರ ರೂ. ಕಳವು!

ಬನಶಂಕರಿಯಲ್ಲಿರುವ ಆಕ್ಸಿಸ್ ಬ್ಯಾಂಕ್ ಎಂಟಿಎಂನಲ್ಲಿ ಖದೀಮರು ಯಾವುದೇ ಸುಳಿವು ಸಿಗದ ರೀತಿಯಲ್ಲಿ ಹಣ ಕದ್ದು ಪರಾರಿಯಾಗಿದ್ದಾರೆ.

ಎಟಿಎಂ ದರೋಡೆ

ಬೆಂಗಳೂರು: ಸಿಲಿಕಾನ್​ ಸಿಟಿ ಬ್ಯಾಂಕ್ ಎಂಟಿಎಂಗಳಲ್ಲಿ ಸುರಕ್ಷತೆ ಎಷ್ಟರ ಮಟ್ಟಿಗಿದೆ ಎಂಬುದು ಪದೇ ಪದೇ ತಿಳಿಯುತ್ತಿದೆ. ಸದ್ಯ ಜನ ಎಂಟಿಎಂಗೆ ಒಬ್ಬರೇ ಹೋಗಲು ಭಯ ಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಎಟಿಎಂ ದರೋಡೆ ಮಾಡಿರುವ ಖದೀಮರು

ಬನಶಂಕರಿಯಲ್ಲಿರುವ ಆಕ್ಸಿಸ್ ಬ್ಯಾಂಕ್ ಎಂಟಿಎಂನಲ್ಲಿ ಖದೀಮರು ಯಾವುದೇ ಸುಳಿವು ಸಿಗದ ರೀತಿಯಲ್ಲಿ ಹಣ ದೋಚಿ ಪರಾರಿಯಾಗಿದ್ದಾರೆ. ಕಳ್ಳರ ಶೋಧನೆಗೆ ಬನಶಂಕರಿ ಪೊಲೀಸರು ತಲೆಕೆಡಿಸಿಕೊಂಡಿದ್ದಾರೆ. ಬ್ಯಾಂಕ್ ಎಟಿಎಂನಲ್ಲಿದ್ದ 2,89,500 ಕದ್ದಿರುವ ಕಳ್ಳರು, ಗ್ಯಾಸ್ ಕಟ್ಟರ್ ನಿಂದ ಎಟಿಎಂ ಮಷಿನ್ ಕಟ್ ಮಾಡಿ ಹಣ ದೋಚಿರುವುದು ಬೆಳಕಿಗೆ ಬಂದಿದೆ.

ಮಧ್ಯರಾತ್ರಿ 2.30 ಕ್ಕೆ ಬೈಕ್ ಮೂಲಕ ಬಂದಿದ್ದರೆನ್ನಲಾದ ಇಬ್ಬರಿಂದ ಕೃತ್ಯ ನಡೆದಿದೆ ಎಂದು ಶಂಕಿಸಲಾಗಿದೆ. ಬನಶಂಕರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದ್ದು, ಎಟಿಎಂ ಹತ್ತಿರದ ಅಂಗಡಿಗಳಲ್ಲಿನ ಸಿಸಿಟಿವಿ ದೃಶ್ಯ ಪಡೆದು ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ABOUT THE AUTHOR

...view details