ಕರ್ನಾಟಕ

karnataka

By

Published : Sep 3, 2019, 6:45 PM IST

ETV Bharat / state

ನೀವು ಬಿತ್ತಿರುವ ಫಲವನ್ನು ನೀವೇ ಉಣ್ಣಬೇಕು: ಡಿಕೆಶಿಗೆ ಡಿಸಿಎಂ ಅಶ್ವಥ್​ ನಾರಾಯಣ್ ಟಾಂಗ್

ನೀವು ಬಿತ್ತಿರುವ ಫಲವನ್ನು ನೀವೇ ಉಣ್ಣಬೇಕು ಎಂದು ಟ್ವೀಟ್​ ಮಾಡುವ ಮೂಲಕ ಡಿಸಿಎಂ ಅಶ್ವಥ್​​ ನಾರಾಯಣ ಅವರು ಮಾಜಿ ಸಚಿವ ಡಿ.ಕೆ.ಶಿವಕುಮಾರ್​ಗೆ ಮತ್ತೆ ಟಾಂಗ್​ ನೀಡಿದ್ದಾರೆ.

ಡಿಕೆಶಿಗೆ ಡಿಸಿಎಂ ಅಶ್ವತ್ಥನಾರಾಯಣ್ ಟಾಂಗ್

ಬೆಂಗಳೂರು: ನೀವು ಬಿತ್ತಿರುವ ಫಲವನ್ನೇ ನೀವು ಉಣ್ಣಬೇಕು ಎಂದು ಟ್ವೀಟ್​ ಮಾಡುವ ಮೂಲಕ ಡಿಸಿಎಂ ಅಶ್ವಥ್​​ ನಾರಾಯಣ್​ ಅವರು ಮಾಜಿ ಸಚಿವ ಡಿ.ಕೆ. ಶಿವಕುಮಾರ್​ಗೆ ಮತ್ತೆ ಟಾಂಗ್​ ನೀಡಿದ್ದಾರೆ.

ದ್ವೇಷದ ರಾಜಕಾರಣದ ಆರೋಪ ಮತ್ತು ನಿಮ್ಮ ಕುಕೃತ್ಯಗಳಿಗೆ ಅನುಕಂಪ ಗಿಟ್ಟಿಸುವ ನಿಮ್ಮ ಪ್ರಯತ್ನಗಳು ಫಲ ನೀಡುವುದಿಲ್ಲ. ನೀವು ಬಿತ್ತಿರುವ ಫಲವನ್ನು ನೀವೇ ಉಣ್ಣಬೇಕು. ಭಾರತ ಬದಲಾಗುತ್ತಿದೆ. ನವಭಾರತ ನಿರ್ಮಾಣವಾಗುತ್ತಿದೆ ಎಂದು ಟ್ವೀಟ್​ ಮಾಡಿದ್ದಾರೆ.

ಭಾರತವು ಪರಿವರ್ತನೆಯ ಹಾದಿಯಲ್ಲಿದೆ. 'ಹೊಸ ಭಾರತ'ದಲ್ಲಿ ಭ್ರಷ್ಟಾಚಾರ ಮತ್ತು ಜನರ ಹಣವನ್ನು ಲೂಟಿ ಮಾಡಲು ಅವಕಾಶವಿಲ್ಲ. ಭ್ರಷ್ಟ ಮತ್ತು ಅಪ್ರಾಮಾಣಿಕರನ್ನು ನ್ಯಾಯಾಲಯದ ಮುಂದೆ ತರಲು ಸರ್ಕಾರ ಹೋರಾಡುತ್ತಿದೆ ಎಂದು ಟ್ವಿಟ್ಟರ್​ ಮೂಲಕ ಡಿಸಿಎಂ ಚಾಟಿ ಬೀಸಿದ್ದಾರೆ.

ABOUT THE AUTHOR

...view details