ಕರ್ನಾಟಕ

karnataka

ಮಾನ ಮರ್ಯಾದೆ ಇದ್ದರೆ ದೇಶದಲ್ಲಿ ಲೂಟಿ ಹೊಡೆದಿರುವುದನ್ನು ಸರ್ಕಾರಕ್ಕೆ ವಾಪಸ್ ಕೊಡಿ: ಸಚಿವ ಆರಗ

By

Published : Jul 22, 2022, 3:31 PM IST

ಮಾಜಿ ಸ್ಪೀಕರ್​ ರಮೇಶ್​ ಕುಮಾರ್​ ಮೂರು ತಲೆಮಾರಿಗೆ ಆಗುವಷ್ಟು ಆಸ್ತಿ ಮಾಡಿದ್ದೇವೆ ಎಂಬ ಹೇಳಿಕೆಯ ಹಿನ್ನೆಲೆ ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯಿಸಿದ್ದಾರೆ. ಮಾನ ಮರ್ಯಾದೆ ಇದ್ದರೆ ದೇಶದಲ್ಲಿ ಲೂಟಿ ಹೊಡೆದಿರುವ ದುಡ್ಡನ್ನು ಸರ್ಕಾರಕ್ಕೆ ಹಿಂತುರುಗಿಸಿ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

araaga jnanendra
ಆರಗ ಜ್ಞಾನೇಂದ್ರ

ಬೆಂಗಳೂರು:ಮಾನ ಮರ್ಯಾದೆ ಇದ್ದರೆ ದೇಶದಲ್ಲಿ ಲೂಟಿ ಹೊಡೆದಿರುವುದನ್ನು ಸರ್ಕಾರಕ್ಕೆ ವಾಪಸ್ ಕೊಡಿ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಕಾಂಗ್ರೆಸ್​​ಗೆ ಒತ್ತಾಯಿಸಿದ್ದಾರೆ.

ವಿಧಾನಸೌಧದಲ್ಲಿ ರಮೇಶ್ ಕುಮಾರ್ ಅಪರೂಪಕ್ಕೆ ಸತ್ಯವನ್ನು ಹೇಳಿದ್ದಾರೆ. ಮೂರು ತಲೆಮಾರಿಗೆ ಆಗುವಷ್ಟು ಆಸ್ತಿ ಮಾಡಿಕೊಂಡಿದ್ದೇವೆ ಎಂಬ ಮಾಜಿ ಸ್ವೀಕರ್ ರಮೇಶ್ ಕುಮಾರ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ರಮೇಶ್ ಕುಮಾರ್ ಹೇಳಿದ್ದನ್ನು ಇಡೀ ದೇಶ ಗಮಸಿದೆ. ರಮೇಶ್ ಕುಮಾರ್ ಮಾತಿನಲ್ಲಿ ತೂಕ ಇರುತ್ತದೆ. ಏನು ಮಾಡಿದ್ದೇವೆ ಎಂಬುದನ್ನ ಅವರು ಹೇಳಿದ್ದಾರೆ ಎಂದು ಗೃಹ ಸಚಿವರು ಹೇಳಿದರು.

ಮಾನಮರ್ಯಾದೆ ಇದ್ದರೆ ದೇಶದಲ್ಲಿ ಲೂಟಿ ಹೊಡೆದಿರುವುದನ್ನ ಸರ್ಕಾರಕ್ಕೆ ವಾಪಸ್ ಕೊಡಿ ಎಂದು ವಾಗ್ದಾಳಿ ನಡೆಸಿದರು. ಜಿಎಸ್​ಟಿ ಹೆಚ್ಚಳ ಖಂಡಿಸಿ ರಮೇಶ್ ಕುಮಾರ್ ಪ್ರತಿಭಟನೆ ನಡೆಸುತ್ತಿರುವುದು ಸರಿಯೇ ಎಂಬ ವಿಚಾರವಾಗಿ, ಬೇರೆ ಬೇರೆ ವಿಚಾರಗಳಿವೆ ಅವುಗಳ ಬಗ್ಗೆಯೂ ಚರ್ಚೆಯಾಗಲಿ ಎಂದರು.

ಇದನ್ನೂ ಓದಿ:ಮುಂದಿನ ಚುನಾವಣೆಯಲ್ಲಿ ಶಿಕಾರಿಪುರದಿಂದ ವಿಜಯೇಂದ್ರ ಸ್ಪರ್ಧೆ: ಮಗನಿಗೆ ಕ್ಷೇತ್ರ ಬಿಟ್ಟುಕೊಟ್ಟ ಮಾಜಿ ಸಿಎಂ

For All Latest Updates

TAGGED:

ABOUT THE AUTHOR

...view details