ಕರ್ನಾಟಕ

karnataka

By

Published : Aug 25, 2020, 1:27 PM IST

ETV Bharat / state

ಅಕ್ರಮ ಟಿಡಿಆರ್​ ಪ್ರಕರಣ: ಬಿಬಿಎಂಪಿ ಎಂಜಿನಿಯರ್​, ಬ್ರೋಕರ್​ಗಳ ಮನೆ ಮೇಲೆ ಎಸಿಬಿ ದಾಳಿ

ಅಕ್ರಮ ಟಿಡಿಆರ್​ ಸೃಷ್ಟಿಸಿ ಬಿಲ್ಡರ್​​ಗಳ ಪರ ಕೆಲಸ ಮಾಡಿ ಕೋಟ್ಯಂತರ ರೂ. ಅವ್ಯಹಾರ ಮಾಡಲಾಗಿದೆ ಎಂದು ಎಂಜಿನಿಯರ್ ಮತ್ತು ಬ್ರೋಕರ್​ಗಳ ವಿರುದ್ಧ ಎಸಿಬಿಯಲ್ಲಿ ದೂರು ದಾಖಲಾಗಿತ್ತು.

ACB raid on BBM engineer's house
ಅಕ್ರಮ ಟಿಡಿಆರ್​ ಪ್ರಕರಣ

ಬೆಂಗಳೂರು:ಅಭಿವೃದ್ದಿ ಹಕ್ಕು ವರ್ಗಾವಣೆ (ಟಿಡಿಆರ್​​)ಯಲ್ಲಿ ಅವ್ಯವಹಾರವೆಸಗಿದ ಪ್ರಕರಣಕ್ಕೆ‌ ಸಂಬಂಧಪಟ್ಟಂತೆ ಬಿಬಿಎಂಪಿ ಎಂಜಿನಿಯರ್ ಹಾಗೂ ಬ್ರೋಕರ್​ಗಳ ಮನೆ ಮೇಲೆ ಎಸಿಬಿ ದಾಳಿ ನಡೆಸಿದೆ.

ಅಧಿಕಾರಿಗಳ ಮನೆಗಳ ಮೇಲೆ ಇಂದು ಮುಂಜಾನೆ ಎಸಿಬಿ ತಂಡ ದಾಳಿ ನಡೆಸಿದೆ. ಅಕ್ರಮ ಟಿಡಿಆರ್​ ಸೃಷ್ಟಿಸಿ ಬಿಲ್ಡರ್​​ಗಳ ಪರ ಕೆಲಸ ಮಾಡಿ ಕೋಟ್ಯಂತರ ರೂ. ಅವ್ಯಹಾರ ಮಾಡಲಾಗಿದೆ ಎಂದು ಎಂಜಿನಿಯರ್ ಮತ್ತು ಬ್ರೋಕರ್​ಗಳ ವಿರುದ್ಧ ಎಸಿಬಿಯಲ್ಲಿ ದೂರು ದಾಖಲಾಗಿತ್ತು.

ಹೀಗಾಗಿ ಎಸಿಬಿ ಎಸ್ಪಿ ಕಲಾಕೃಷ್ಣ ಸ್ವಾಮಿ ನಿರ್ದೇಶನದ ಮೇರೆಗೆ ಡಿವೈಎಸ್ಪಿಗಾಳಾದ ರಾಜೇಂದ್ರ, ಶಿವಶಂಕರರೆಡ್ಡಿ ನೇತೃತ್ವದ ನಾಲ್ಕು ಪ್ರತ್ಯೇಕ ತಂಡ, ಇಂದು ಬೆಳ್ಳಂಬೆಳಗ್ಗೆ ರೇಡ್​ ಮಾಡಿದೆ. ದಾಳಿ ವೇಳೆ ಆರೋಪಿಗಳು ಸರ್ಕಾರಕ್ಕೆ 27 ಕೋಟಿ ರೂಪಾಯಿ ವಂಚಿಸಿರುವ ವಿಚಾರ ಬೆಳಕಿಗೆ ಬಂದಿದೆ ಎನ್ನಲಾಗಿದೆ. ಎಸಿಬಿ ಕಾರ್ಯಾಚರಣೆ ಮುಂದುವರೆಸಿದೆ.

ABOUT THE AUTHOR

...view details