ಕರ್ನಾಟಕ

karnataka

ETV Bharat / state

ಬೆಂಗಳೂರು: ಕುಳಿತ ಜಾಗದಲ್ಲೇ ವ್ಯಕ್ತಿ ಸಾವು...!

ಕುಳಿತ ಜಾಗದಲ್ಲೇ ವ್ಯಕ್ತಿಯೋರ್ವ ಸಾವನ್ನಪ್ಪಿದ ಘಟನೆ ನಗರದ ಹೆಚ್​ಎಸ್​ಆರ್​ ಮೇಲ್ಸೇತುವೆ ಬಳಿಯ ಪೆಟ್ರೋಲ್ ಬಂಕ್​ನಲ್ಲಿ ನಡೆದಿದೆ. ಅತಿಯಾದ ಮದ್ಯ ಸೇವನೆಯಿಂದ ಈತ ಸಾವನಪ್ಪಿರಬಹುದು ಎಂದು ಶಂಕಿಸಲಾಗಿದೆ.

By

Published : Dec 30, 2019, 1:58 PM IST

A Young man dead in Bengaluru
ಕುಳಿತ ಜಾಗದಲ್ಲೇ ವ್ಯಕ್ತಿ ಸಾವು...!

ಬೆಂಗಳೂರು: ಕುಳಿತ ಜಾಗದಲ್ಲೇ ವ್ಯಕ್ತಿಯೋರ್ವ ಸಾವನ್ನಪ್ಪಿದ ಘಟನೆ ನಗರದ ಹೆಚ್​ಎಸ್​ಆರ್​ ಮೇಲ್ಸೇತುವೆ ಬಳಿಯ ಪೆಟ್ರೋಲ್ ಬಂಕ್​ನಲ್ಲಿ ನಡೆದಿದೆ.

ಕುಳಿತ ಜಾಗದಲ್ಲೇ ವ್ಯಕ್ತಿ ಸಾವು...!

ಮೃತ ವ್ಯಕ್ತಿಯನ್ನು ನಾಗಮಂಗಲ ಮೂಲದ ಧನಂಜಯ (35) ಎಂದು ಗುರುತಿಸಲಾಗಿದೆ. ಧನಂಜಯ ಸ್ಥಳೀಯ ಕ್ಯಾಂಟರಿಂಗ್​ ಸರ್ವಿಸ್​ನಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.

ಸ್ಥಳಕ್ಕೆ ಹೆಚ್​ಎಸ್​ಆರ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದು ಈ ವೇಳೆ ಮೃತ ಧನಂಜಯ ಜೇಬಿನಲ್ಲಿ ಸಾರಾಯಿ ಬಾಟಲಿ ಪತ್ತೆಯಾಗಿದೆ. ಅತಿಯಾದ ಮದ್ಯ ಸೇವನೆಯಿಂದ ಈತ ಸಾವನಪ್ಪಿರಬಹುದು ಎಂದು ಶಂಕಿಸಲಾಗಿದೆ. ಮೃತ ದೇಹವನ್ನು ಸೇಂಟ್ ಜಾನ್ ಆಸ್ಪತ್ರೆಗೆ ರವಾನಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ABOUT THE AUTHOR

...view details