ಕರ್ನಾಟಕ

karnataka

By

Published : Sep 6, 2020, 5:14 AM IST

Updated : Sep 6, 2020, 6:53 AM IST

ETV Bharat / state

ಅಗಲಿಕೆಯ ನೋವು... ಪತ್ನಿಯ ತಿಂಗಳ ತಿಥಿಯಂದೇ ರೈಲಿಗೆ ತಲೆ ಕೊಟ್ಟ ಗಂಡ!

ಪತ್ನಿಯ ಅಗಲಿಕೆಯ ನೋವು ತಾಳಲಾರದೇ ಗಂಡ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

man committed suicide, man committed suicide in Bangalore, Bangalore man committed suicide, ಹೆಂಡ್ತಿಯ ತಿಂಗಳ ತಿಥಿಯಂದೇ ರೈಲಿಗೆ ತಲೆ ಕೊಟ್ಟ ಗಂಡ, ವ್ಯಕ್ತಿ ಆತ್ಮಹತ್ಯೆಗೆ ಶರಣು, ಬೆಂಗಳೂರಿನಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಶರಣು, ಬೆಂಗಳೂರು ವ್ಯಕ್ತಿ ಆತ್ಮಹತ್ಯೆ ಸುದ್ದಿ,
ಹೆಂಡ್ತಿಯ ತಿಂಗಳ ತಿಥಿಯಂದೇ ರೈಲಿಗೆ ತಲೆ ಕೊಟ್ಟ ಗಂಡ!

ಆನೇಕಲ್: ಹೆಂಡತಿ ಅಕಾಲಿಕ ಮರಣವನ್ನಪ್ಪಿದ್ದ ಹಿನ್ನೆಲೆ ದುಃಖದಲ್ಲಿಯೇ ಕೊರಗುತ್ತಿದ್ದ ಗಂಡ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆನೇಕಲ್-ಹೊಸೂರು ರೈಲ್ವೆ ರಸ್ತೆಯ ಸಮಂದೂರು ರೈಲ್ವೆ ಗೇಟ್ ಸಮೀಪ ರೈಲಿನ ಹಳಿ ಮೇಲೆ ಶವವಾಗಿ ಪತ್ತೆಯಾಗಿದ್ದಾನೆ.

ಸಾವಿಗೀಡಾದ ಮುನಿರಾಜು

ಆನೇಕಲ್-ಜಿಗಣಿ ಮುಖ್ಯ ರಸ್ತೆಯ ಸುರಗಜಕ್ಕನಹಳ್ಳಿ ನಿವಾಸಿ ಮುನಿರಾಜು (29) ಪ್ರಾಣ ಕಳೆದುಕೊಂಡ ವ್ಯಕ್ತಿ. ಜಿಗಣಿ ಮೈಲಾನ್ ಕಂಪೆನಿಯಲ್ಲಿ ಖಾಯಂ ಉದ್ಯೋಗಿಯಾಗಿದ್ದ ಮುನಿರಾಜುವಿಗೆ ಆರು ವರ್ಷದ ಹೆಣ್ಣು ಮಗು ಹಾಗೂ ಇಬ್ಬರು ಸಹೋದರರು ಇದ್ದಾರೆ.

ಎಂಟು ವರ್ಷದ ಹಿಂದೆ ಆನೇಕಲ್​ನ ಮಾರನಾಯಕನಹಳ್ಳಿಯ ಯುವತಿಯನ್ನು ಮದುವೆ ಮಾಡಿಕೊಂಡಿದ್ದ . ಕಳೆದ ತಿಂಗಳು ಆಕೆ ಸಾವಿಗೀಡಾಗಿದ್ದರು. ಈ ಹಿನ್ನೆಲೆ ನಿನ್ನೆ ಆಕೆಯ ತಿಂಗಳ ತಿಥಿ ಕಾರ್ಯ ಮುಗಿಸಿದ್ದ. ರಾತ್ರಿ ಮಾರನಾಯಕನಹಳ್ಳಿಯಿಂದ ಸ್ನೇಹಿತನನ್ನು ಸುರಗಜಕ್ಕನಹಳ್ಳಿಗೆ ಕಾರಿನಲ್ಲಿ ಬಿಟ್ಟು ಮತ್ತೆ ಮಾರನಾಯಕನಹಳ್ಳಿಯ ಕಡೆಗೆ ಮುನಿರಾಜು ಪ್ರಯಾಣ ಬೆಳೆಸಿದ್ದ. ಈ ನಡುವೆ ಸ್ನೇಹಿತರ ಜತೆ ಹೆಂಡತಿಯ ಬಗ್ಗೆ ಮಧ್ಯರಾತ್ರಿಯವರೆಗೂ ಮಾತನಾಡಿದ್ದ ಎಂದು ತಿಳಿದು ಬಂದಿದೆ.

ಆದರೆ, ಮುಂಜಾನೆ ಆಗುವಷ್ಟರಲ್ಲಿ ಇಹಲೋಕ ತ್ಯಜಿಸಿದ್ದಾನೆ. ಮುಂಜಾನೆ 4 ಗಂಟೆಯ ಹೊತ್ತಿನಲ್ಲಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ರೈಲ್ವೇ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಈ ದಂಪತಿಗೆ ಆರು ವರ್ಷದ ಮಗಳಿದ್ದು, ಈಗ ಅನಾಥೆ ಆಗಿದ್ದಾಳೆ.

Last Updated : Sep 6, 2020, 6:53 AM IST

ABOUT THE AUTHOR

...view details