ಕರ್ನಾಟಕ

karnataka

ETV Bharat / state

ಈ ಬಸ್​ಸ್ಟಾಪ್​ಗೆ ತೆಂಗಿನ ನಾರೇ ಶ್ರೀರಕ್ಷೆ... ಬೆಂಕಿಗೆ ಸುಡಲ್ಲ, ಮಳೆಗೆ ನೆನೆಯಲ್ಲ

ಮೆಕ್ಯಾನಿಕಲ್ ಎಂಜಿನಿಯರಿಂಗ್​ ವಿಭಾಗದ ವಿದ್ಯಾರ್ಥಿಗಳು ಸೇರಿಕೊಂಡು ಒಂದು ಅದ್ಭುತ ಬಸ್​ ನಿಲ್ದಾಣ ನಿರ್ಮಿಸಿದ್ದಾರೆ. ಅದರ ವಿಶೇಷತೆ ಏನು, ಹೇಗೆ ನಿರ್ಮಿಸಿದರು, ಅದರಿಂದಾಗುವ ಲಾಭ ಏನು ಅನ್ನೋದ ಬಗ್ಗೆ ತಿಳಿದುಕೊಳ್ಳಬೇಕೆ?

By

Published : Jun 20, 2019, 1:43 PM IST

ಮೆಕ್ಯಾನಿಕಲ್ ಎಂಜಿನಿಯರಿಂಗ್​ ವಿದ್ಯಾರ್ಥಿಗಳಿಂದ ತಯಾರಾದ ಬಸ್​ ನಿಲ್ದಾಣ

ಬೆಂಗಳೂರು: ಸಾಮಾನ್ಯವಾಗಿ ಬಸ್​ ನಿಲ್ದಾಣದ ಮೇಲ್ಛಾವಣಿ ನಿರ್ಮಿಸಲು ಏನನ್ನು ಬಳಸಬಹುದು? ತಗಡು, ಕಾಂಕ್ರೀಟ್, ಪ್ಲಾಸ್ಟಿಕ್ ಹೊದಿಕೆ ಇವುಗಳನ್ನು ಉಪಯೋಗಿಸುವುದನ್ನ ನೋಡಿದ್ದೀರಿ. ಆದರೆ, ರಾಜನಕುಂಟೆಯ ಕಾಕೋಳು ರಸ್ತೆಯಲ್ಲಿ ತೆಂಗಿನ ನಾರು ಬಳಸಿ ಬಸ್​ ನಿಲ್ದಾಣದ ಮೇಲ್ಛಾವಣಿ ನಿರ್ಮಾಣ ಮಾಡಿದ್ದು ಇದೀಗ ಎಲ್ಲರ ಗಮನ ಸೆಳೆಯುತ್ತಿದೆ.

ಹೌದು, ರಾಜಾನುಕುಂಟೆಯ ಸಾಯಿ ವಿದ್ಯಾ ಇನ್ಸ್ಟಿಟ್ಯೂಟ್​ ಆಫ್ ಟೆಕ್ನಾಲಜಿ ಕಾಲೇಜಿನ ಮೆಕ್ಯಾನಿಕಲ್ ಎಂಜಿನಿಯರಿಂಗ್​ ವಿಭಾಗದ ವಿದ್ಯಾರ್ಥಿಗಳು ತೆಂಗಿನ ನಾರು ಬಳಸಿ ಪರಿಸರ ಸ್ನೇಹಿ ಬಸ್​ ತಂಗುದಾಣ ನಿರ್ಮಿಸಿದ್ದಾರೆ. ಎರಡು ಕಡೆ ರೈಲ್ವೆ ಕಂಬಿ ಬಳಸಿ, ಮೇಲಿನ ಛಾವಣಿಯ ಎರಡು ಬದಿಗಳಿಗೆ ತೆಂಗಿನ ನಾರಿನಿಂದ ಲೇಪನ ಮಾಡಿದ ಫ್ಲೈವುಡ್​ ಶೀಟ್ ಬಳಸಿದ್ದಾರೆ. ಇದು ಮಳೆ ಬಿಸಿಲಿಗೆ ಹಾನಿಯಾಗಬಾರದೆಂಬ ಉದ್ದೇಶದಿಂದ ಮಳೆ ನೀರು, ಹಾಗೂ ಬೆಂಕಿ ತಾಗದಂತೆ ಅಂಟಿನ ಲೇಪನ ಮಾಡಿದ್ದಾರೆ.

ಮೆಕ್ಯಾನಿಕಲ್ ಎಂಜಿನಿಯರಿಂಗ್​ ವಿದ್ಯಾರ್ಥಿಗಳಿಂದ ತಯಾರಾದ ಬಸ್​ ನಿಲ್ದಾಣ
ಆಲೋಚನೆ ಬಂದದ್ದು ಹೇಗೆ?
ಎಂಜಿನಿಯರಿಂಗ್ ವಿದ್ಯಾರ್ಥಿಗಳು ಕೊನೆಯ ಸೆಮಿಸ್ಟರ್​ನಲ್ಲಿ ಏನಾದರೊಂದು ಆವಿಷ್ಕಾರ ಮಾಡಬೇಕು. ಈ ಪ್ರಯತ್ನದಲ್ಲಿದ್ದಾಗ ವಿದ್ಯಾರ್ಥಿಗಳ ತಂಡಕ್ಕೆ ಹೊಳದಿದ್ದೆ ಈ ಪರಿಸರ ಸ್ನೇಹಿ ಬಸ್ ನಿಲ್ದಾಣ.
ಈ ಆಲೋಚನೆ ವಿದ್ಯಾರ್ಥಿಗಳ ತಲೆಗೆ ಹೊಳೆದಿದ್ದೆ ತಡ, ನೇರವಾಗಿ ಮೆಕ್ಯಾನಿಕಲ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಸುಬ್ರಹ್ಮಣ್ಯ ಬಳಿ ಹೇಳಿಕೊಂಡಿದ್ದಾರೆ. ನಂತರ, ಪ್ರಾಂಶುಪಾಲ ರಮೇಶ್ ಬಾಬು ವಿಭಾಗದ ಮುಖ್ಯಸ್ಥೆ ಸೀತಾ ಹಾಗೂ ಶ್ರೀಕಾಂತ್ ಹಾಗೂ ಸಹಾಯಕ ಪ್ರಾಧ್ಯಾಪಕ ರಾಘವೇಂದ್ರ ಅವರ ಸಲಹೆಯಂತೆ ಬಸ್ ನಿರ್ಮಾಣದ ವಿನ್ಯಾಸ ಸಿದ್ಧಗೊಳಿಸಿದ್ದಾರೆ.
12 ಸಾವಿರ ರೂ ಖರ್ಚು
ನಾವು ತಯಾರಿಸುವ ಕೆಲಸ ನಮ್ಮ ತರಗತಿಯ ಪ್ರಾಜೆಕ್ಟ್​ಗೆ ಸೀಮಿತವಾಗಬಾರದು. ಬದಲಾಗಿ ಸಮಾಜಕ್ಕೆ ಅನುಕೂಲವಾಗಬೇಕು ಎಂಬ ಉದ್ದೇಶದಿಂದ ಬಸ್​ ನಿಲ್ದಾಣ ಮಾಡಲು ತೀರ್ಮಾನಿಸಿದೆವು.
ಅದಕ್ಕೆ ಅಗತ್ಯವಿರುವ ತೆಂಗಿನ ನಾರು ಲೇಪಿತ ಫ್ಲೈವುಡ್ ಶೀಟ್ ತಯಾರಿಸಲು ಚನ್ನಪಟ್ಟಣ ಬಳಿ ಇರುವ ತೆಂಗಿನ ನಾರು ಸಹಕಾರ ಮಂಡಳಿ ಸಹಕಾರದೊಂದಿಗೆ 4x6 ಅಡಿ ವಿಸ್ತೀರ್ಣದ ತೆಂಗಿನನಾರು ಲೇಪಿತ ಫ್ಲೈವುಡ್ ಶೀಟ್ ತಯಾರಿಸಿಕೊಂಡು ಬಂದೆವು.
ಹಾಗೆ, ರೈಲ್ವೆ ಇಲಾಖೆಯಿಂದ ಕಬ್ಬಿಣದ ಸರಳುಗಳನ್ನು ಪಡೆದುಕೊಂಡು, ಸಮಾಜಕ್ಕೆ ಅನುಕೂಲವಾಗುವಂತೆ ಕೇವಲ ಕೇವಲ 12 ಸಾವಿರ ರೂ.ನಲ್ಲಿ 10 ಅಡಿ ಎತ್ತರ 12 ಅಡಿ ಅಗಲ ವಿಸ್ತೀರ್ಣದ ಪರಿಸರ ಸ್ನೇಹಿ ನಿಲ್ದಾಣ ನಿರ್ಮಿಸಿದ್ದೇವೆ ಎನ್ನುತ್ತಾರೆ ಎಂಜಿನಿಯರಿಂಗ್ ವಿದ್ಯಾರ್ಥಿಗಳು.
ಏನೇ ಹೇಳಿ ಕೊನೆಯ ಸೆಮಿಸ್ಟರ್​ ಪ್ರಾಜೆಕ್ಟ್​ ಅಂದ್ರೆ ಏನೋ ಒಂದು ಮಾಡಿ ಮುಗಿಸೋಣ ಎನ್ನುವ ಮನಸ್ಥಿತಿಗಳ ನಡುವೆ ಸಮಾಜಕ್ಕೆ ಕೊಡುಗೆ ಕೊಡಬೇಕು ಎನ್ನುವ ಈ ಹುಡುಗರ ಕಾಳಜಿ ಮೆಚ್ಚಲೇಬೇಕು.

ABOUT THE AUTHOR

...view details