ಕರ್ನಾಟಕ

karnataka

ETV Bharat / state

ನಾನು ಗುಳ್ಳೆ ನರಿ ಎಂದ ಅನರ್ಹ ಶಾಸಕ ಎಂಟಿಬಿ ನಾಗರಾಜ

ನನ್ನನ್ನು ರಾಜಕೀಯವಾಗಿ ಟೀಕಿಸುವವರು ಹುಲಿ, ಸಿಂಹಗಳ ರೀತಿ ಬದುಕಲಿ. ತಾಲೂಕಿನ ಜನರ ಅಭಿವೃದ್ಧಿಯಾಗದಿದ್ದರೆ ನಾನು ಸಹಿಸುವುದಿಲ್ಲ. ಅದಕ್ಕಾಗಿಯೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಇದೊಂದು ಬಾರಿ ಉಪಚುನಾವಣೆಯಲ್ಲಿ ಗೆಲ್ಲಿಸಿ ಎಂದು ಅನರ್ಹ ಶಾಸಕ ಎಂಟಿಬಿ ನಾಗರಾಜ್​ ಮನವಿ ಮಾಡಿದರು.

By

Published : Oct 2, 2019, 7:53 AM IST

ಅನರ್ಹ ಶಾಸಕ ಎಂಟಿಬಿ ನಾಗರಾಜ್

ಹೊಸಕೋಟೆ: ನಾನು ಗುಳ್ಳೆನರಿ, ನನ್ನನ್ನು ಟೀಕಿಸುವವರು ಹುಲಿ, ಸಿಂಹಗಳ ರೀತಿಯಲ್ಲಿರಲಿ ಎಂದು ಅನರ್ಹ ಶಾಸಕ ಎಂಟಿಬಿ ನಾಗರಾಜ್ ಶರತ್ ಬಚ್ಚೇಗೌಡ ಅವರಿಗೆ ಪರೋಕ್ಷವಾಗಿ ಟಾಂಗ್​ ನೀಡಿದರು.

ತಾಲೂಕಿನ ದೊಡ್ಡ ನಲ್ಲೂರುಹಳ್ಳಿಯಲ್ಲಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿದ ನಂತರ ಮಾಧ್ಯಮಗಳ ಜತೆ ಮಾತನಾಡಿದರು.

ಅನರ್ಹ ಶಾಸಕ ಎಂಟಿಬಿ ನಾಗರಾಜ್

ಸಚಿವನಾಗಿಯೂ ನನ್ನ ಕ್ಷೇತ್ರಕ್ಕೆ ಏನು ಮಾಡಲು ಆಗುತ್ತಿರಲಿಲ್ಲ. ಅವರು ಕೊಟ್ಟ ಕಾರು ಹತ್ತಿ, ತಿಂಗಳ ಸಂಬಳ ಎಣಿಸಿಕೊಂಡು ಕೂಡಲು ನನ್ನಿಂದ ಆಗುವುದಿಲ್ಲ. ಅದಕ್ಕಾಗಿಯೆ ಕಾಂಗ್ರೆಸ್​ಗೆ ರಾಜೀನಾಮೆ ನೀಡಿ, ಪಕ್ಷ ತೊರೆದಿದ್ದೇನೆ ಎಂದು ಹೇಳಿದರು.

ಕ್ಷೇತ್ರದ ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಯಾವುದೇ ಭೇದ - ಭಾವದಿಂದ ಜನರಿಗೆ ಅನ್ಯಾಯ ಮಾಡಿಲ್ಲ. ನಾನು ತಪ್ಪು ಮಾಡಿದರೆ ದೇವರೆ ನೋಡಿಕೊಳ್ಳಲಿ. ಮುಂಬರುವ ಉಪಚುನಾವಣೆಯಲ್ಲಿ ಇದೊಂದು ಬಾರಿ ನನಗೆ ಮತ ಹಾಕಿ ಗೆಲ್ಲಿಸಿ, ನನ್ನ ಪ್ರಭಾವ ತೋರಿಸುತ್ತೇನೆ ಎಂದು ಹೇಳಿದರು.

ABOUT THE AUTHOR

...view details