ಕರ್ನಾಟಕ

karnataka

ಸಂಜೆ ವಾಯುವಿಹಾರಕ್ಕೆ ತೆರಳಿದ್ದ ವೃದ್ಧ ಬೆಳಗ್ಗೆ ಶವವಾಗಿ ಪತ್ತೆ

By

Published : Jan 16, 2021, 7:31 PM IST

ಶುಕ್ರವಾರ ಸಂಜೆ ವಾಯು ವಿಹಾರಕ್ಕೆಂದು ಹೋಗಿದ್ದ ವೃದ್ಧ ಇಂದು ಬೆಳಗ್ಗೆ ಶವವಾಗಿ ಪತ್ತೆಯಾಗಿರುವ ಘಟನೆ ದೇವನಹಳ್ಳಿಯ ಪ್ರಸನ್ನಹಳ್ಳಿಯಲ್ಲಿ ನಡೆದಿದೆ.

old aged murder
ವೃದ್ಧ ಕೊಲೆ

ದೇವನಹಳ್ಳಿ : ಸಂಜೆ ವಾಯು ವಿಹಾರಕ್ಕೆಂದು ತೆರಳಿದ್ದ ವೃದ್ಧ ಬೆಳಗ್ಗೆ ಶವವಾಗಿ ಪತ್ತೆಯಾಗಿರುವ ಘಟನೆ ದೇವನಹಳ್ಳಿ ಪಟ್ಟಣದ ಹೊರವಲಯದ ಪ್ರಸನ್ನಹಳ್ಳಿಯಲ್ಲಿ ನಡೆದಿದೆ.

ನಾಗರಾಜಮೂರ್ತಿ (60) ಮೃತ ದುರ್ದೈವಿಯಾಗಿದ್ದಾನೆ. ಇವರು ಶುಕ್ರವಾರ ಸಂಜೆ ವಾಯು ವಿಹಾರಕ್ಕೆಂದು ಪ್ರಸನ್ನಹಳ್ಳಿಯ ಕಡೆ ಹೋಗಿದ್ದಾಗ ಕಿಡಿಗೇಡಿಗಳು ಹಲ್ಲೆ ನಡೆಸಿ ಮೃತನ ಕೊರಳಲ್ಲಿದ್ದ 50 ಗ್ರಾಂ ಚಿನ್ನದ ಸರ, ಉಂಗುರ, ಬ್ರಾಸ್ ಲೈಟ್ ಕದ್ಯೊಯ್ದಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ದೇವನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ABOUT THE AUTHOR

...view details