ಕರ್ನಾಟಕ

karnataka

ETV Bharat / state

ಆಟೋಗೆ ಗುದ್ದಿದ ಆರ್​​ಟಿಒ ಇನ್ಸ್​​ಪೆಕ್ಟರ್​​ ಕಾರು: ಜನರಿಂದ ನ್ಯಾಯ ಕೇಳಿ ಪ್ರತಿಭಟನೆ

ಆರ್​ಟಿಒ ಇನ್ಸ್​​​ಪೆಕ್ಟರ್​​​ ಕಾರು ಆಟೋಗೆ ಗುದ್ದಿದ್ದರಿಂದ, ಆಟೋ ಚಾಲಕ ಇಮ್ರಾನ್ ಆಟೋದಿಂದ ಕೆಳಗೆ ಹಾರಿದ ಕೈಗೆ ಗಾಯ ಮಾಡಿಕೊಂಡಿದ್ದರು. ಆಗ ಸುತ್ತಲಿದ್ದವರು ಗಾಯಾಳು ಇಮ್ರಾನ್​ನನ್ನು ಆಸ್ಪತ್ರೆಗೆ ಸಾಗಿಸಿ ಇನ್​ಸ್ಪೆಕ್ಟರ್​ ಬಳಿ ನ್ಯಾಯ ಕೇಳಿದ್ದರು. ಇನ್ಸ್​​​ಪೆಕ್ಟರ್​ ತುಸು ಗಡುಸಾಗೇ ಮಾತನಾಡಿದ್ದನ್ನ ವಿರೋಧಿಸಿ ಹಾಗೂ ಇನ್ಸ್​​ಪೆಕ್ಟರ್​ ಮದ್ಯ ಸೇವನೆ ಮಾಡಿದ್ದಾರೆ ಎಂದು ಆರೋಪಿಸಿ ಸ್ಥಳದಲ್ಲಿ ಪ್ರತಿಭಟನೆಗೆ ಇಳಿದಿದ್ದರು.

By

Published : Sep 13, 2019, 5:57 AM IST

Updated : Sep 14, 2019, 12:45 PM IST

ಸಂಚಾರ ನಿರೀಕ್ಷಕರಿಂದಲೇ ಡ್ರಿಂಕ್ ಅಂಡ್ ಡ್ರೈವ್

ಆನೇಕಲ್;ನಗರದ ಆರ್​ಟಿಒ ಕಚೇರಿ ಮುಂಭಾಗ ವಕೀಲರು, ನ್ಯಾಯಾಧೀಶರ ಮುಂದೆ ನಿಂತು ರಸ್ತೆ ನಿಯಮಗಳ ಕುರಿತು ವಿಶೇಷ ಬೋಧನೆ ಮಾಡಿದ್ದ ಆರ್​ಟಿಒ ಇನ್ಸ್​ಪೆಕ್ಟರ್ ಮಂಜುನಾಥ್ ತಾವೇ ಕಾರು ಚಲಾವಣೆ ಮಾಡ್ಕೊಂಡು ಹೋಗುವಾಗ ನಿಂತಿದ್ದ ಆಟೋಗೆ ಗುದ್ದಿದ್ದರು. ಈ ಘಟನೆ ಈಗ ಭಾರೀ ಟೀಕೆಗೆ ಗುರಿಯಾಗಿದೆ.

ತಮ್ಮ ಸ್ವಂತ ಕಾರಿನಲ್ಲಿ ಹೆಬ್ಬಾಳದಿಂದ ಎಲೆಕ್ಟ್ರಾನಿಕ್ ಸಿಟಿ ಕಡೆ ಬರುವ ಸಂದರ್ಭದಲ್ಲಿ ಎಲೆಕ್ಟ್ರಾನಿಕ್ ಸಿಟಿಯ 2ನೇ ಹಂತದ ಬಳಿಯಿರುವ ಟಿಸಿಎಸ್ ಅನ್ನೋ ಕಂಪನಿ ಬಳಿ ಆಟೋಗೆ ಡಿಕ್ಕಿ ಹೊಡೆದಿದ್ದಾರೆ ಎನ್ನಲಾಗಿದೆ.

ಆಟೋಗೆ ಗುದ್ದಿದ ಆರ್​​ಟಿಒ ಇನ್ಸ್​​ಪೆಕ್ಟರ್​​ ಕಾರು

ಆಟೋ ಚಾಲಕ ಇಮ್ರಾನ್ ಆಟೋದಿಂದ ಕೆಳಗೆ ಹಾರಿದ ಸಂದರ್ಭದಲ್ಲಿ ಕೈಗೆ ಗಾಯವಾಗಿತ್ತು. ಆಗ ಸುತ್ತಲಿದ್ದವರು ಗಾಯಾಳು ಇಮ್ರಾನ್​ನನ್ನು ಆಸ್ಪತ್ರೆಗೆ ಸಾಗಿಸಿ ಇನ್​ಸ್ಪೆಕ್ಟರ್​ ಬಳಿ ನ್ಯಾಯ ಕೇಳಿದ್ದರು. ಇನ್ಸ್​​​ಪೆಕ್ಟರ್​ ತುಸು ಗಡುಸಾಗೇ ಮಾತನಾಡಿದ್ದನ್ನ ವಿರೋಧಿಸಿ ಹಾಗೂ ಇನ್ಸ್​​ಪೆಕ್ಟರ್​ ಮದ್ಯ ಸೇವನೆ ಮಾಡಿದ್ದಾರೆ ಎಂದು ಆರೋಪಿಸಿ ಸ್ಥಳದಲ್ಲಿ ಪ್ರತಿಭಟನೆಗೆ ಇಳಿದಿದ್ದಾರೆ.

ಇನ್​ಸ್ಪೆಕ್ಟರ್ ಜೊತೆ ವಾಗ್ವಾದ ನಡೆಸುವ ವಿಡಿಯೋವನ್ನು​ ಕ್ಷಣಾರ್ಧದಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಕೂಡಾ ಮಾಡಿದ್ದರು. ಅಷ್ಟರಲ್ಲಿ ಪೊಲೀಸರಿಗೂ ಮಾಹಿತಿ ಸಿಕಿದ್ದು, ತಕ್ಷಣ ಪೊಲೀಸರು ಸ್ಥಳಕ್ಕೆ ಬಂದು ಎಲ್ಲರನ್ನು ಚದುರಿಸಿದ್ದರು. ನಂತರ ಅವರನ್ನ ಎಲೆಕ್ಟ್ರಾನಿಕ್ ಸಿಟಿ ಟ್ರಾಫಿಕ್ ಸ್ಟೇಷನ್​ಗೆ ಕರೆದೊಯ್ದು ವಿಚಾರಣೆಗೊಳಪಡಿಸಿದಾಗ ಪ್ರತಿಭಟನಾಕಾರರು ಆರೋಪಿಸಿದಂತೆ ಇನ್ಸ್​​​ಪೆಕ್ಟರ್​​ ಮದ್ಯ ಸೇವನೆ ಮಾಡಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

Last Updated : Sep 14, 2019, 12:45 PM IST

ABOUT THE AUTHOR

...view details