ಕರ್ನಾಟಕ

karnataka

ಸಾಲಬಾಧೆಗೆ ದಂಪತಿ ಆತ್ಮಹತ್ಯೆ.. ಹಲವು ಚೀಟಿ ವ್ಯವಹಾರ ನಡೆಸುತ್ತಿದ್ದರಂತೆ ಮೃತ ಗಂಡ-ಹೆಂಡ್ತಿ

ಪಟಾಕಿ ಚೀಟಿ ಸೇರಿದಂತೆ ಹಲವು ಚೀಟಿ ವ್ಯವಹಾರ ನಡೆಸುತ್ತಿದ್ದ ದಂಪತಿ ವ್ಯಾಪಾರದಲ್ಲಿ ನಷ್ಟವಾಯಿತೆಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ದೊಡ್ಡಬಳ್ಳಾಪುರ‌ದ ಚೈತನ್ಯನಗರದಲ್ಲಿ ನಡೆದಿದೆ.

By

Published : Sep 17, 2019, 12:44 PM IST

Published : Sep 17, 2019, 12:44 PM IST

ದಂಪತಿ ಆತ್ಮಹತ್ಯೆ

ದೊಡ್ಡಬಳ್ಳಾಪುರ: ಪಟಾಕಿ ಚೀಟಿ ಸೇರಿದಂತೆ ಹಲವು ಚೀಟಿ ವ್ಯವಹಾರ ನಡೆಸುತ್ತಿದ್ದ ದಂಪತಿ, ವ್ಯವಹಾರದಲ್ಲಿ ನಷ್ಟವಾಯಿತೆಂದು ಆತ್ಮಹತ್ಯೆಗೆ ಶರಣಾದ ಘಟನೆ ದೊಡ್ಡಬಳ್ಳಾಪುರ‌ದ ಚೈತನ್ಯನಗರದಲ್ಲಿ ನಡೆದಿದೆ.

ಇಲ್ಲಿನ ನಿವಾಸಿಗಳಾದ ರಾಮಮೂರ್ತಿ (49) ವೀಣಾ (45 )ಆತ್ಮಹತ್ಯೆಗೆ ಶರಣಾದ ದಂಪತಿ. ಬೆಳಗಿನ ಜಾವ ಬೆಡ್ ರೂಮ್​ನ ಫ್ಯಾನ್ ಕಂಬಿಗೆ ಮತ್ತು ಕಬ್ಬಿಣದ‌ ಹುಕ್​ಗೆ ಸೀರೆಯನ್ನು ಕಟ್ಟಿ ನೇಣು‌ಹಾಕಿ ಕೊಳ್ಳುವುದರ ಮೂಲಕ‌‌ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಮೃತ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಸಾಲಬಾಧೆ ತಾಳಲಾರದೆ ನೇಣಿಗೆ ಶರಣಾಗಿರುವ ಸಂಶಯವಿದೆ. ಈ ಸಂಬಂಧ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details