ಕರ್ನಾಟಕ

karnataka

By

Published : Nov 24, 2022, 7:55 PM IST

ETV Bharat / state

ತೆರಿಗೆ ವಸೂಲಿ ಹಣ ಖಾತೆಗೆ ಜಮೆ ಮಾಡದೇ ಗೋಲ್ ಮಾಲ್ ಆರೋಪ..

ಸಾರ್ವಜನಿಕರಿಂದ ಸಂಗ್ರಹಿಸಿದ ತೆರಿಗೆ ಹಣ ಪಂಚಾಯಿತಿ ಖಾತೆಗೆ ಜಮೆ ಮಾಡದೇ ವಂಚಿಸಿರುವ ಆರೋಪದ ಮೆರೆಗೆ ಕರ ವಸುಲಿಗಾರನ ಮೇಲೆ ಪ್ರಕಣ ದಾಖಲಾಗಿದೆ.

kn_bng
ತೆರಿಗೆ ವಸೂಲಿ ಹಣ ಖಾತೆಗೆ ಜಮೆ ಮಾಡದೆ ಗೋಲ್ ಮಾಲ್

ದೇವನಹಳ್ಳಿ:ಕನ್ನಮಂಗಲ ಗ್ರಾಮ ಪಂಚಾಯಿತಿಯಲ್ಲಿ ಸಾರ್ವಜನಿಕರಿಂದ ತೆರಿಗೆಯಾಗಿ ಪಡೆದ ಹಣವನ್ನ ಪಂಚಾಯಿತಿ ಅಕೌಂಟ್​ಗೆ ಜಮೆ ಮಾಡದೇ 5 ಕೋಟಿ ಹಣ ವಂಚನೆ ಮಾಡಿರುವ ಆರೋಪದ ಮೇಲೆ ಕರ ವಸೂಲಿಗಾರನ ಮೇಲೆ ಪ್ರಕರಣ ದಾಖಲಾಗಿದೆ.

ದೇವನಹಳ್ಳಿ ತಾಲೂಕಿನ ಕನ್ನಮಂಗಲ ಗ್ರಾಮ ಪಂಚಾಯಿತಿ ಕರ ವಸೂಲಿಗಾರರಾದ ಬಿ.ಪಿ.ಮಂಜುನಾಥ 2020-21 ನೇ ಸಾಲಿನ ಒಟ್ಟು 7 ರಸೀದಿ ಪುಸ್ತಕಗಳಲ್ಲಿ ಸಾರ್ವಜನಿಕರಿಂದ ವಸೂಲಾದ ತೆರಿಗೆ ಹಣ ಪಂಚಾಯಿತಿ ಅಕೌಂಟ್​ಗೆ ಜಮೆ ಮಾಡದೇ ಮತ್ತು ರಿಜಿಸ್ಟರ್​ನಲ್ಲೂ ನಮೂದಿಸಿಸದೇ ಒಟ್ಟು 5 ಕೋಟಿ 75 ಲಕ್ಷ ಹಣ ವಂಚನೆ ಮಾಡಿರುವುದಾಗಿ ಪಿಡಿಒ ಆದರ್ಶ ಕುಮಾರ್ ಆರೋಪಿಸಿ ಹಣ ಗೋಲ್ ಮಾಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಜುನಾಥ ವಿರುದ್ದ ಆದರ್ಶ ಕುಮಾರ್ ದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಇದನ್ನೂ ಓದಿ:ಲಕ್ಷಗಟ್ಟಲೇ ಹಣ ಗಳಿಸುವ ಆಮಿಷ: 15 ಸಾವಿರ ಜನರಿಗೆ ಮಕ್ಮಲ್​ ಟೋಪಿ: ಇಬ್ಬರು ಆರೋಪಿಗಳು ಅರೆಸ್ಟ್​

ABOUT THE AUTHOR

...view details