ನೆಲಮಂಗಲ: ಎಂದಿನಂತೆ ಬೆಳಗ್ಗೆ ಬಹಿರ್ದೆಸೆಗೆಂದು ಹೊರಹೋದ ಮಹಿಳೆವೋರ್ವಳು ನಾಪತ್ತೆಯಾಗಿದ್ದಾಳೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ತಡಸೀಘಟ್ಟ ಗ್ರಾಮದಲ್ಲಿ ಈ ಘಟನೆ ನಡೆದಿದೆ.
25 ವರ್ಷದ ಮಹಿಳೆ ಬಹಿರ್ದೆಸೆಗೆಂದು ಹೊರ ಹೋದವಳು ನಾಪತ್ತೆಯಾಗಿದ್ದು, ಮಹಿಳೆ ಪತಿ ಮಂಜುನಾಥ್ ಠಾಣೆ ಮೆಟ್ಟಿಲೇರಿದ್ದಾರೆ. ತಡಸೀಘಟ್ಟದ ಸಂಗಿತಮ್ಮನವರ ತೋಟದ ಮನೆಯಲ್ಲಿ ಇವರು ವಾಸವಾಗಿದ್ದರು. ಮರ ಕಡಿಯುವ ಕೆಲಸ ಮಾಡುತ್ತಿದ್ದ ದಂಪತಿ ಮೂಲತಃ ಬೆಳಗಾವಿ ಜಿಲ್ಲೆ ಗೋಕಾಕ್ ತಾಲೂಕಿನ ಜಮನಾಳ ಗ್ರಾಮದವರು. ಕಳೆದ 15 ದಿನಗಳ ಹಿಂದೆ ತಡಸೀಘಟ್ಟದ ಸಂಗಿತಮ್ಮನವರ ತೋಟದ ಮನೆಯಲ್ಲಿ ವಾಸವಾಗಿದ್ದರು.