ಕರ್ನಾಟಕ

karnataka

By

Published : Jul 13, 2021, 10:22 PM IST

ETV Bharat / state

ಬಿಸ್ಕೇಟ್ ಕೇಳುವ ನೆಪದಲ್ಲಿ ಅಂಗಡಿಗೆ ಬಂದ ಕಳ್ಳರು: ಕಣ್ಣಿಗೆ ಕಾರದ ಪುಡಿ ಎರಚಿ 60 ಗ್ರಾಂ ಚಿನ್ನದ ಸರ ಕದ್ದು ಎಸ್ಕೇಪ್

ನಂದಿನಿ ಪಾರ್ಲರ್​​ನಲ್ಲಿ‌ ಕಾರ್ಯನಿರ್ವಹಿಸುತ್ತಿದ್ದ ವಸಂತ ಕುಮಾರಿ ಎಂಬಾಕೆ ಚಿನ್ನದ ಸರ ಕಳೆದುಕೊಂಡಿದ್ದು, ದಾಬಾಸ್​​​ಪೇಟೆ ಪೊಲೀಸರಿಗೆ ದೂರು ನೀಡಿದ್ದಾರೆ.

http://10.10.50.85:6060//finalout4/karnataka-nle/thumbnail/13-July-2021/12448441_849_12448441_1626191498229.png
http://10.10.50.85:6060//finalout4/karnataka-nle/thumbnail/13-July-2021/12448441_849_12448441_1626191498229.png

ನೆಲಮಂಗಲ (ಬೆಂಗಳೂರು): ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿದ್ದ ಮಹಿಳೆಯ ಕಣ್ಣಿಗೆ ಕಾರದ ಪುಡಿ ಎರಚಿ ಚಿನ್ನದ ಸರ ಕದ್ದೊಯ್ದಿರುವ ಘಟನೆ ನೆಲಮಂಗಲದ ದಕ್ಷಿಣಕಾಶಿ ಶಿವಗಂಗೆಯ ನವ್ಯಶ್ರೀ ನಂದಿನಿ‌ ಪಾರ್ಲರ್​​ನಲ್ಲಿ ನಡೆದಿದೆ.

ಸಂಜೆ ವೇಳೆ ಬಿಸ್ಕೇಟ್ ಕೇಳುವ ನೆಪದಲ್ಲಿ ಅಂಗಡಿಗೆ ಬಂದ ಇಬ್ಬರು ಬಿಸ್ಕೇಟ್ ನೀಡುತ್ತಿದ್ದಂತೆ ಕಾರದ ಪುಡಿ ಎರಚಿ 3 ಲಕ್ಷ ಮೌಲ್ಯದ 60 ಗ್ರಾಂ ಚಿನ್ನದ ಸರ ಎಗರಿಸಿ ಪರಾರಿಯಾಗಿದ್ದಾರೆ. ನಂದಿನಿ ಪಾರ್ಲರ್​​ನಲ್ಲಿ‌ ಕಾರ್ಯ ನಿರ್ವಹಿಸುತ್ತಿದ್ದ ವಸಂತ ಕುಮಾರಿ ಎಂಬಾಕೆ ಚಿನ್ನದ ಸರ ಕಳೆದುಕೊಂಡಿದ್ದು, ದಾಬಾಸ್​​​ಪೇಟೆ ಪೊಲೀಸರಿಗೆ ದೂರು ನೀಡಿದ್ದಾರೆ.

ಸ್ಥಳಕ್ಕಾಗಮಿಸಿದ ಸಿಪಿಐ ಹರೀಶ್ ಪರಿಶೀಲನೆ ನಡೆಸಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ABOUT THE AUTHOR

...view details