ಕರ್ನಾಟಕ

karnataka

ಬಾಗಲಕೋಟೆಯಲ್ಲಿ ನೆರೆ ಸಂತ್ರಸ್ತರಿಗೆ ಆರಕ್ಷಕರ ಪತ್ನಿಯರಿಂದ ನೆರವು

By

Published : Aug 13, 2019, 11:26 PM IST

ಪ್ರವಾಹಪೀಡಿತ ಸಂತ್ರಸ್ತರಿಗೆ ಆಹಾರವನ್ನು ತಯಾರಿಸಿ ಹಂಚುವ ಮೂಲಕ ಪೊಲೀಸ್ ಸಿಬ್ಬಂದಿಯ ಪತ್ನಿಯರು ಮಾನವೀಯತೆ ಮೆರೆದಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಪ್ರವಾಹ ಪೀಡಿತ ಸಂತ್ರಸ್ಥರಿಗೆ ಸಹಕಾರ ನೀಡಿದ ಪೊಲೀಸರ ಪತ್ನಿಯರು

ಬಾಗಲಕೋಟೆ:ಜಿಲ್ಲೆಯಲ್ಲಿ ಭಾರಿ ಮಳೆಯಿಂದಾಗಿ ಉಂಟಾಗಿರುವ ಪ್ರವಾಹ ಪ್ರದೇಶಗಳಲ್ಲಿ ಪೊಲೀಸ್​​ ಸಿಬ್ಬಂದಿ, ಅಧಿಕಾರಿಗಳು ಜನರ ಪ್ರಾಣ ಉಳಿಸುವುದಕ್ಕೆ ಸಹಕಾರ ನೀಡಿದ್ರೆ, ಅವರ ಪತ್ನಿಯರು ಪ್ರವಾಹಪೀಡಿತ ಸಂತ್ರಸ್ತರಿಗೆ ಆಹಾರವನ್ನು ತಯಾರಿಸಿ ಹಂಚುವ ಮೂಲಕ ತಮ್ಮ ಸೇವೆ ಸಲ್ಲಿಸಿದ್ದಾರೆ.

ನೆರೆ ಸಂತ್ರಸ್ತರಿಗೆ ಪೊಲೀಸರ ಪತ್ನಿಯರಿಂದ ನೆರವು

ಹೌದು, ಜಿಲ್ಲೆಯ ಡಿಎಆರ್ ಪೊಲೀಸ್ ವಸತಿ ಗೃಹಗಳಿಂದ ಅಧಿಕಾರಿ ವರ್ಗ ಹಾಗೂ ಸಿಬ್ಬಂದಿ ಕುಟುಂಬದಿಂದ ಚಪಾತಿ, ರೊಟ್ಟಿ, ಅನ್ನ, ಚಟ್ನಿ ಆಹಾರ ಪದಾರ್ಥಗಳನ್ನು ತಯಾರಿಸಿ ಪ್ರವಾಹಪೀಡಿತ ಕಲಾದಗಿ, ಉದಗಟ್ಟಿ ಸೇರಿ ಇನ್ನಿತರ ಗ್ರಾಮಗಳಲ್ಲಿರುವ ಸಂತ್ರಸ್ತರಿಗೆ ಹಂಚುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ABOUT THE AUTHOR

...view details