ಬಾಗಲಕೋಟೆ:ಇಲಕಲ್ಲ ಪಟ್ಟಣದಲ್ಲಿ ಕಳೆದ ರಾತ್ರಿ ಶಾಪಿಂಗ್ ಕಟ್ಟಡದಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಸುಮಾರು 10 ಕೋಟಿಗೂ ಅಧಿಕ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.
ಮಹೇಶಪ್ಪ ಸಜ್ಜನ್ ಎಂಬುವರಿಗೆ ಸೇರಿದ ಕಾಂಪ್ಲೆಕ್ಸ್ ಇದಾಗಿದೆ. ಮೂರು ಅಂತಸ್ತಿನ ಈ ಕಟ್ಟಡವನ್ನು ಸುಮಾರು 3 ಕೋಟಿಗೂ ಅಧಿಕ ವೆಚ್ಚ ಮಾಡಿ ನಿರ್ಮಾಣ ಮಾಡಲಾಗಿತ್ತು. ಇದರಲ್ಲಿ ಹಾರ್ಡವೇರ್, ಸಿಲ್ಕ್ ಸಾರಿ ಶಾಪ್ ಸೇರಿದಂತೆ ಮೋರ್ ಮಾಲ್ ಸಹ ಇತ್ತು. ಇದರ ಜೊತೆಗೆ ಲಾಡ್ಜ್ ಸಹ ನಿರ್ಮಾಣ ಆಗಿತ್ತು. ಕೆಲ ದಿನಗಳಲ್ಲೇ ಇನ್ನೊಂದು ಮಳಿಗೆ ಉದ್ಘಾಟನೆಗೆ ಸಿದ್ಧತೆ ಮಾಡಲಾಗಿತ್ತು. ಅಷ್ಟರಲ್ಲೇ ಅಗ್ನಿ ನರ್ತನಕ್ಕೆ ಕಾಂಪ್ಲೆಕ್ಸ್ ಸುಟ್ಟು ಕರಕಲಾಗಿದೆ.