ಲೀಡ್ಸ್: ಭಾರತ ತಂಡದ ನಾಯಕ 2ನೇ ಟೆಸ್ಟ್ನಲ್ಲಿ ಎದುರಾಳಿ ಇಂಗ್ಲೆಂಡ್ ತಂಡವನ್ನು ತಮ್ಮ ಆಕ್ರಮಣಶೀಲತೆಯಿಂದ ಕೆಣಕಿ ಯಶಸ್ವಿಯಾಗಿದ್ದರು. ಲಾರ್ಡ್ಸ್ನಲ್ಲಿ ಗೆಲುವಿನ ಸಹಿಯುಂಡಿದ್ದ ಭಾರತೀಯರು ಹೆಡಿಂಗ್ಲೆಯಲ್ಲಿ ನಡೆಯುತ್ತಿರುವ 3ನೇ ಟೆಸ್ಟ್ನಲ್ಲಿ ಆಂಗ್ಲರ ವಿರುದ್ಧ ತಮ್ಮ ಹಿಡಿತ ಕಳೆದುಕೊಂಡಿದ್ದಾರೆ.
ಆದರೆ, ವಿರಾಟ್ ಕೊಹ್ಲಿಯ ಆಕ್ರಮಣಶೀಲತೆಯ ಮನೋಭಾವನೆಗೆ ಟೀಮ್ ಇಂಡಿಯಾ ಮಾಜಿ ನಾಯಕ ಸುನೀಲ್ ಗವಾಸ್ಕರ್ ಬೆಂಬಲ ಸಿಕ್ಕಿಲ್ಲ. ಲೆಜೆಂಡರಿ ಕ್ರಿಕೆಟರ್ ಪ್ರಕಾರ ಕೊಹ್ಲಿ ಪ್ರತಿ ವಿಕೆಟ್ ಬಿದ್ದಾಗ ತಮ್ಮ ಮುಖದಲ್ಲಿ ಅಷ್ಟೊಂದು ಆಕ್ರಮಣಶೀಲತೆ ಪ್ರದರ್ಶನ ತೋರುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.
2ನೇ ಟೆಸ್ಟ್ ಪಂದ್ಯದ ನಂತರ ಇಂಗ್ಲೆಂಡ್ ಮಾಜಿ ನಾಯಕ ನಾಸಿರ್ ಹುಸೇನ್ ಸೇರಿದಂತೆ ಕ್ರಿಕೆಟ್ ಜಗತ್ತು ಕೊಹ್ಲಿಯ ಆಕ್ರಮಣ ಭಾರತೀಯ ತಂಡವನ್ನು ಹೇಗೆ ಪರಿವರ್ತಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಜೊತೆಗೆ ಹಿಂದಿನ ಭಾರತೀಯ ತಂಡಗಳು ಇಂಗ್ಲೆಂಡ್ನಲ್ಲಿ ಯಾವಾಗಲೂ ಅವಹೇಳನಕ್ಕೆ ಒಳಗಾಗುತ್ತಿದ್ದರು, ಆದರೆ, ಕೊಹ್ಲಿ ತಂಡದ ವಿರುದ್ಧ ಅದು ಸಾಧ್ಯವಿಲ್ಲ ಎಂದಿದ್ದರು. ಆದರೆ, ಗವಾಸ್ಕರ್ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಆಕ್ರಮಣಕಾರಿ ಮನೋಭಾವನೆ ಅಗತ್ಯವಿಲ್ಲ ಎಂದಿದ್ದಾರೆ.