ಶಾರ್ಜಾ:ರಾಜಸ್ಥಾನ್ ರಾಯಲ್ಸ್ ವಿರುದ್ಧ ಮಂಗಳವಾರ ನಡೆದ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿ ಮುಂಬೈಗೆ ದೊಡ್ಡ ಗೆಲುವು ತಂದುಕೊಟ್ಟ ಇಶಾನ್ ಕಿಶನ್ರನ್ನು ನಂಬಿಕಾರ್ಹ ಹುಡುಗ ಎಂದಿದ್ದು, ಆತನ ಸಾಮರ್ಥ್ಯ ಮೇಲೆ ಎಂದಿಗೂ ತಾವೂ ನಂಬಿಕೆ ಕಳೆದುಕೊಂಡಿರಲಿಲ್ಲ ಎಂದು ಮುಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ.
ಮುಂಬರುವ ಟಿ-20 ವಿಶ್ವಕಪ್ಗೆ ಭಾರತ ತಂಡದಲ್ಲಿ ಸ್ಥಾನ ಪಡೆದಿರುವ ಇಶಾನ್ ಕಿಶನ್ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಕೇವಲ 25 ಎಸೆತಗಳಲ್ಲಿ 5 ಬೌಂಡರಿ 3 ಸಿಕ್ಸರ್ಗಳ ನೆರವಿನಿಂದ ಅಜೇಯ 50 ರನ್ಗಳಿಸಿ ರಾಯಲ್ಸ್ ನೀಡಿದ್ದ 91 ರನ್ಗಳ ಗುರಿಯನ್ನು 8.2 ಓವರ್ಗಳಲ್ಲಿ ಮುಗಿಸಲು ನೆರವಾಗಿದ್ದರು.
"ನಮಗೆ ಎರಡು ಪಾಯಿಂಟ್ಗಳು ನಮಗೆ ಬಹಳ ನಿರ್ಣಾಯಕವಾಗಿದ್ದವು. ನಾವು ಅವರನ್ನು (ರಾಜಸ್ಥಾನ ರಾಯಲ್ಸ್) 90 ರನ್ಗಳಿಗೆ ಆಲೌಟ್ ಮಾಡಿದ್ದೆವು. ಹಾಗಾಗಿ ಆ ಗುರಿಯನ್ನು ಬೇಗ ಮುಗಿಸಲು ನಮಗೆ ಅವಕಾಶವಿತ್ತು. ಅಲ್ಲದೇ ಹಾಗೆ ಬೇಗ ಪಂದ್ಯವನ್ನು ವಶಪಡಿಸಿಕೊಳ್ಳುವುದು ಬಹಳ ಮುಖ್ಯ ಕೂಡ ಆಗಿತ್ತು. ಆದ್ದರಿಂದ ನಾವು ಮೈದಾನಕ್ಕೆ ಬಂದು ಮುಕ್ತವಾಗಿ ಬ್ಯಾಟ್ ಮಾಡಬೇಕಾಗಿತ್ತು.