ಕರ್ನಾಟಕ

karnataka

By

Published : Dec 14, 2021, 4:25 PM IST

ETV Bharat / sports

ಒಬ್ಬರ ನಾಯಕತ್ವದಲ್ಲಿ ಮತ್ತೊಬ್ಬರಾಡಲು ಇಷ್ಟವಿಲ್ವೆ?: ರೋಹಿತ್​-ಕೊಹ್ಲಿ ನಿರ್ಧಾರ ಪ್ರಶ್ನಿಸಿದ ಫ್ಯಾನ್ಸ್​

ಭಾರತ ತಂಡದ ನಾಯಕರಾದ ಈ ಇಬ್ಬರು ಕೇವಲ ತಾವೂ ನಾಯಕರಾಗಿಲ್ಲದ ಮಾದರಿಯ ಸರಣಿಯಿಂದ ಹೊರ ಬಂದಿದ್ದಾರೆ. ಈ ಕಾರಣದಿಂದಲೇ ನಾಯಕತ್ವ ವಿಭಜನೆಯಿಂದ ಟೀಮ್ ಇಂಡಿಯಾದಲ್ಲಿ ದೊಡ್ಡ ಬಿರುಕು ಕಂಡು ಬಂದಿದೆ ಎನ್ನಲಾಗುತ್ತಿದೆ..

Netizens feel rift between Rohit Sharma and Virat Kohli
ವಿರಾಟ್​ ಕೊಹ್ಲಿ ರೋಹಿತ್ ಶರ್ಮಾ

ಮುಂಬೈ :ರೋಹಿತ್ ಶರ್ಮಾ ಹ್ಯಾಮ್​ಸ್ಟ್ರಿಂಗ್ ಗಾಯದ ಕಾರಣ ಸೋಮವಾರ ಟೆಸ್ಟ್​ ಸರಣಿಯಿಂದ ಹೊರ ಬರುತ್ತಿದ್ದಂತೆ ಕ್ರಿಕೆಟ್​ ಅಭಿಮಾನಿಗಳು ಭಾರತ ತಂಡದಲ್ಲಿ ಬಿರುಕು ಕಾಣಿಸಿರಬಹುದು ಎಂದು ಅನುಮಾನುಸಿತ್ತಿದ್ದಾರೆ.

ಇದೀಗ ಕೊಹ್ಲಿ ತಾವೂ ಏಕದಿನ ಸರಣಿಯಿಂದ ವಿಶ್ರಾಂತಿ ಬಯಸಿರುವುದಾಗಿ ಬಿಸಿಸಿಐ ಬಳಿ ಹೇಳಿರುವುದರಿಂದ ಆ ಅನುಮಾನಕ್ಕೆ ಮತ್ತಷ್ಟು ಪುಷ್ಠಿ ನೀಡುತ್ತಿದೆ. ಈಗಾಗಲೇ ಕೊಹ್ಲಿ ಮುಂಬೈನಲ್ಲಿ ಭಾರತೀಯ ಕ್ರಿಕೆಟಿಗರಿಗೆ ಆಯೋಜಿಸಿದ್ದ ಮೂರು ದಿನಗಳ ಅಭ್ಯಾಸ ಶಿಬಿರಕ್ಕೆ ಹಾಜಾರಾಗಿರಲಿಲ್ಲ. ಅಧಿಕಾರಿಗಳು ಕರೆ ಮಾಡಿದರೂ ಸ್ವೀಕರಿಸಿರಲಿಲ್ಲ ಎಂದು ತಿಳಿದು ಬಂದಿತ್ತು.

ಇದೀಗ ರೋಹಿತ್ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್​ ಸರಣಿಗೆ ಅಲಭ್ಯರಾಗುತ್ತಿದ್ದಂತೆ ಕೊಹ್ಲಿ ತಮ್ಮ ಮಗಳಾದ ವಮಿಕಾಳ ಮೊದಲ ಬರ್ತ್‌ಡೇಯನ್ನು ಪತ್ನಿ ಅನುಷ್ಕಾ ಶರ್ಮಾ ಜೊತೆಗೆ ಆಚರಿಸಿಕೊಳ್ಳಬೇಕೆಂಬ ಕಾರಣ ನೀಡಿ ಏಕದಿನ ಸರಣಿಗೆ ತಾವೂ ಲಭ್ಯರಾಗುವುದಿಲ್ಲ ಎಂದು ಆಯ್ಕೆ ಸಮಿತಿಗೆ ಹೇಳಿದ್ದಾರೆ ಎಂದು ಬಿಸಿಸಿಐ ಮೂಲಗಳಿಂದ ತಿಳಿದು ಬಂದಿದೆ.

ಇದನ್ನೂ ಓದಿ:ವಿಶ್ರಾಂತಿ ನೀಡುವಂತೆ ಬಿಸಿಸಿಗೆ ವಿರಾಟ್‌ ಮನವಿ; ದ.ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಕೊಹ್ಲಿ ಅಲಭ್ಯ!

ಭಾರತ ತಂಡದ ನಾಯಕರಾದ ಈ ಇಬ್ಬರು ಕೇವಲ ತಾವೂ ನಾಯಕರಾಗಿಲ್ಲದ ಮಾದರಿಯ ಸರಣಿಯಿಂದ ಹೊರ ಬಂದಿದ್ದಾರೆ. ಈ ಕಾರಣದಿಂದಲೇ ನಾಯಕತ್ವ ವಿಭಜನೆಯಿಂದ ಟೀಂ ಇಂಡಿಯಾದಲ್ಲಿ ದೊಡ್ಡ ಬಿರುಕು ಕಂಡು ಬಂದಿದೆ ಎನ್ನಲಾಗುತ್ತಿದೆ.

ಭಾರತದಲ್ಲಿ ಬಿರುಕು ಕಾಣಿಸಿಕೊಳ್ಳುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಭಾರತ ಕ್ರಿಕೆಟ್​ ಇತಿಹಾಸದಲ್ಲಿ ಇಂತಹ ಘಟನೆಗಳು ನಡೆದಿವೆ. ದಂತಕತೆಗಳಾದ ಸುನಿಲ್ ಗವಾಸ್ಕರ್-ಕಪಿಲ್​ ದೇವ್​, ಸಚಿನ್ ತೆಂಡೂಲ್ಕರ್-ರಾಹುಲ್ ದ್ರಾವಿಡ್​, ಸಚಿನ್ ತಂಡೂಲ್ಕರ್​- ಮೊಹಮ್ಮದ್ ಅಜರುದ್ದೀನ್, ಸೆಹ್ವಾಗ್-ಧೋನಿ ನಡುವೆಯೂ ಮನಸ್ಥಾಪ ಕಂಡು ಬಂದಿತ್ತು.

ಆದರೆ, ಅಂದು ತಂಡದಿಂದ ಹೊರ ಉಳಿಯುವ ಮಟ್ಟಕ್ಕೆ ಅದು ಬೆಳೆದಿರಲಿಲ್ಲ. ಆದರೆ ಇದೀಗ ಈ ಒಳ ಜಗಳ ಅತಿರೇಕಕ್ಕೆ ತಿರುಗುವಂತೆ ಕಾಣುತ್ತಿತದ್ದು, ಬಿಸಿಸಿಐ ಆದಷ್ಟು ಬೇಗ ಈ ಇಬ್ಬರು ಕ್ರಿಕೆಟಿಗರ ನಡುವಿನ ಬಿರುಕನ್ನು ನಿಯಂತ್ರಿಸಲು ಪ್ರಯತ್ನಿಸಬೇಕೆಂಬುದು ಅಭಿಮಾನಿಗಳ ಆಶಯವಾಗಿದೆ.

ABOUT THE AUTHOR

...view details