ಡರ್ಹಮ್: ಸಣ್ಣ ಗಾಯದ ಕಾರಣ ಕೌಂಟಿ ಇಲೆವೆನ್ ವಿರುದ್ಧದ 3 ದಿನಗಳ ಅಭ್ಯಾಸ ಪಂದ್ಯದಿಂದ ಹೊರಗುಳಿದಿದ್ದ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಗುರುವಾರ ನೆಟ್ಸ್ನಲ್ಲಿ ಮೀಸಲು ಬೌಲರ್ಗಳಾದ ಪ್ರಸಿದ್ ಕೃಷ್ಣ ಮತ್ತು ಅರ್ಜಾನ್ ನಾಗ್ವಾಸ್ವಲ್ಲಾ ಅವರ ಬೌಲಿಂಗ್ ಎದುರಿಸಿದ್ದಾರೆ.
ಮಂಗಳವಾರದಿಂದ ನಡೆಯುತ್ತಿರುವ ಮೂರು ದಿನಗಳ ಅಭ್ಯಾಸ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮತ್ತು ಅಜಿಂಕ್ಯ ರಹಾನೆ ಭಾಗವಹಿಸಿರಲಿಲ್ಲ. ಇಬ್ಬರಿಗೂ ಸಣ್ಣ ಪ್ರಮಾಣದ ಗಾಯಗಳಾಗಿರುವುದರಿಂದ ವಿಶ್ರಾಂತಿಯಲ್ಲಿದ್ದಾರೆ ಎಂದು ಬಿಸಿಸಿಐ ತಿಳಿಸಿತ್ತು. ಬುಧವಾರವೂ ಕೂಡ ಕೇವಲ 30 ನಿಮಿಷಗಳ ಕಾಲ ಬ್ಯಾಟಿಂಗ್ ಮಾಡಿದ್ದರು. ಇದೀಗ ಇಂದು ಇಬ್ಬರು ಯುವ ಬೌಲರ್ಗಳಿಬ್ಬರ ಜೊತೆಗೆ ಅಭ್ಯಾಸ ಮಾಡುತ್ತಿರುವುದನ್ನು ಅಭ್ಯಾಸ ಪಂದ್ಯದ ನೇರ ಪ್ರಸಾರದ ವೇಳೆ ಕಂಡುಬಂದಿದೆ.