ಕರ್ನಾಟಕ

karnataka

ದಂಡ ಪಾವತಿಸುವೆ, ಸಹೋದರನಿಗೆ ಆಡಲು ಅವಕಾಶ ನೀಡಿ; ಕಮ್ರನ್ ಅಕ್ಮಲ್​

By

Published : May 9, 2021, 8:28 PM IST

ಪಿಸಿಬಿ ಭ್ರಷ್ಟಾಚಾರ ನಿಗ್ರಹ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ಉಮರ್ ಅಕ್ಮಲ್​ರನ್ನು ಫೆಬ್ರವರಿ 2020ರಂದು ಪಿಸಿಬಿ ಎಲ್ಲಾ ಮಾದರಿಯ ಕ್ರಿಕೆಟ್​ನಿಂದ ನಿಷೇಧಿಸಿತ್ತು. ಇದೀಗ ಅವರ ನಿಷೇಧದ ಅವಧಿ ಮುಗಿದಿದ್ದು, ಸ್ಪರ್ಧಾತ್ಮಕ ಕ್ರಿಕೆಟ್​ಗೆ ಮರಳಲು ಅವರು ಅರ್ಹರಾಗಿದ್ದಾರೆ. ಆದರೆ ಅವರು ಪಿಸಿಬಿ ಭ್ರಷ್ಟಾಚಾರ ನಿಗ್ರಹ ಸಂಹಿತೆ ಅಡಿಯಲ್ಲಿ ಪುನಶ್ಚೇತನಕ್ಕೆ ಒಳಗಾಗಬೇಕಾದರೆ 42,50,000 ಪಾಕಿಸ್ತಾನ ರೂಪಾಯಿಗಳನ್ನು ತುಂಬಬೇಕಿದೆ.

ಕಮ್ರಾನ್ ಅಕ್ಮಲ್
ಕಮ್ರಾನ್ ಅಕ್ಮಲ್

ಲಾಹೋರ್: ತಮ್ಮ ಸಹೋದರ ಉಮರ್​ ಅಕ್ಮಲ್​ಗೆ ಪುನಶ್ಚೇತನಕ್ಕೆ ಅವಕಾಶ ಮಾಡಿಕೊಟ್ಟರೆ, ಅವನು ಕಟ್ಟಬೇಕಿರುವ ದಂಡದ ಮೊತ್ತವನ್ನು ನನ್ನ ಪಿಎಸ್​ಎಲ್ ವೇತನದಲ್ಲಿ ನೀಡುತ್ತೇನೆ ಎಂದು ಪಾಕಿಸ್ತಾನದ ತಂಡದ ಹಿರಿಯ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ಕಮ್ರನ್ ಅಕ್ಮಲ್ ಪಿಸಿಬಿಗೆ ಮನವಿ ಮಾಡಿದ್ದಾರೆ.

ಪಿಸಿಬಿ ಭ್ರಷ್ಟಾಚಾರ ನಿಗ್ರಹ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ಉಮರ್ ಅಕ್ಮಲ್​ರನ್ನು ಫೆಬ್ರವರಿ 2020ರಂದು ಪಿಸಿಬಿ ಎಲ್ಲಾ ಮಾದರಿಯ ಕ್ರಿಕೆಟ್​ನಿಂದ ನಿಷೇಧಿಸಿತ್ತು. ಇದೀಗ ಅವರ ನಿಷೇಧದ ಅವಧಿ ಮುಗಿದಿದ್ದು, ಸ್ಪರ್ಧಾತ್ಮಕ ಕ್ರಿಕೆಟ್​ಗೆ ಮರಳಲು ಅವರು ಅರ್ಹರಾಗಿದ್ದಾರೆ. ಆದರೆ ಅವರು ಪಿಸಿಬಿ ಭ್ರಷ್ಟಾಚಾರ ನಿಗ್ರಹ ಸಂಹಿತೆ ಅಡಿಯಲ್ಲಿ ಪುನಶ್ಚೇತನಕ್ಕೆ ಒಳಗಾಗಬೇಕಾದರೆ 42,50,000 ಪಾಕಿಸ್ತಾನ ರೂಪಾಯಿಗಳನ್ನು ತುಂಬಬೇಕಿದೆ.

ಆದರೆ ಉಮರ್​ ತಾವೂ ತಂಡವನ್ನು ಕಟ್ಟಲು ಒಪ್ಪಿಗೆಯಿದೆ. ಆದರೆ ಹಣಕಾಸಿನ ಸಮಸ್ಯೆ ಎದುರಿಸುತ್ತಿದ್ದು ಕಂತುಗಳಲ್ಲಿ ಪಾವತಿಸಲು ಅವಕಾಶ ನೀಡಿ ಎಂದು ಪಿಸಿಬಿಗೆ ಮನವಿ ಮಾಡಿದ್ದರು. ಇದೀಗ ಅವರ ಸಹೋದರ ಕಮ್ರನ್ ನೆರವಿಗೆ ಬಂದಿದ್ದು ತಾವು ದಂಡವನ್ನು ಕಟ್ಟಲು ಸಿದ್ಧರಿರುವುದಾಗಿ ತಿಳಿಸಿದ್ದಾರೆ.

ನನ್ನ ಸಹೋದರನ ದಂಡವನ್ನು ಪಾವತಿಸಲು ನಾನು ಸಿದ್ಧನಿದ್ದೇನೆ. ನನ್ನ ಪಿಎಸ್‌ಎಲ್ ಪಂದ್ಯಗಳಿಂದ ಬರುವ ಯಾವುದೇ ವೇತನವನ್ನು ಕಡಿತಗೊಳಿಸಬಹುದು ಎಂದು ನಾನು ಪಿಸಿಬಿಗೆ ವಿನಂತಿಸುತ್ತೇನೆ ಎಂದು ಕಮ್ರನ್ ಭಾನುವಾರ ಹೇಳಿದರು.

"ಹಣವು ಅಂಥ ದೊಡ್ಡ ಸಮಸ್ಯೆಯಾಗಿರಬಾರದು. ಅವರು ನನ್ನ ಶುಲ್ಕದಿಂದ ದಂಡದ ಮೊತ್ತವನ್ನು ಕಡಿತಗೊಳಿಸಬಹುದು. ಅಲ್ಲದೆ ಉಮರ್ ಕ್ರಿಕೆಟ್ ಆಡಿದರೆ ಆತನ ವೇತನವೂ ಪಿಸಿಬಿ ಮೂಲಕವೇ ಬರುವುದರಿಂದ ಆ ಸಂದರ್ಭದಲ್ಲಿ ತೆಗೆದುಕೊಳ್ಳಬಹುದು. ಈ ವಿಚಾರದಲ್ಲಿ ಉಮರ್​ ಮೇಲೆ ಪಿಸಿಬಿ ಮೃದುತ್ವ ತೋರಬೇಕೆಂದು ವಿನಂತಿಸುತ್ತೇನೆ." ಎಂದು ಕಮ್ರನ್ ತಿಳಿಸಿದ್ದಾರೆ.

ಇದನ್ನು ಓದಿ:ಬುಮ್ರಾ 400 ಟೆಸ್ಟ್​ ವಿಕೆಟ್​ ಪಡೆಯಬಲ್ಲರು; ಕರ್ಟ್ಲೀ ಆ್ಯಂಬ್ರೋಸ್​

ABOUT THE AUTHOR

...view details