ಕರ್ನಾಟಕ

karnataka

By

Published : Jan 22, 2021, 5:17 PM IST

ETV Bharat / sports

ಆಸೀಸ್​ ನೆಲದಲ್ಲಿ ಚರಿತ್ರೆ ಸೃಷ್ಟಿಸಿರುವ ಯುವಪಡೆಯ ಸಾಧನೆ ಅಸಾಮಾನ್ಯ: WWE ಟ್ರಿಪಲ್‌

ಅನುಭವಿಗಳ ಕೊರತೆ ಇದ್ದರೂ ಯುವಕರ ಅತ್ಯುತ್ತಮ ಪ್ರದರ್ಶನ, ಭಾರತ ತಂಡದ ನಿರ್ವಹಣೆ ಮತ್ತು ಆಸೀಸ್​​ ನೆಲದಲ್ಲಿ ಆಟಗಾರರರು ತೋರಿದ ಮನೋಭಾವನೆಯನ್ನು ಎಷ್ಟು ಕೊಂಡಾಡಿದರೂ ಸಾಲದು ಎಂದು ಡಬ್ಲ್ಯೂಡಬ್ಲ್ಯೂಇ ಸೂಪರ್​​ಸ್ಟಾರ್​​​ ಸಂತಸ ವ್ಯಕ್ತಪಡಿಸಿದರು.

A WWE-scripted level of a comeback: Triple H lauds Team India's win in Australia
ಡಬ್ಲ್ಯೂಡಬ್ಲ್ಯೂಇ ಗ್ಲೋಬಲ್​ ಟ್ಯಾಲೆಂಟ್​ ಸ್ಟ್ರಾಟಜಿ & ಡೆವಲಪ್​​ಮೆಂಟ್​​ ಕಾರ್ಯನಿರ್ವಾಹಕ ಉಪಾಧ್ಯಕ್ಷ ಟ್ರಿಪಲ್ ಹೆಚ್​.ಲಾಡ್ಸ್

ನವದೆಹಲಿ:ಆಸ್ಟ್ರೇಲಿಯಾ ವಿರುದ್ಧ ಮೊದಲ ಟೆಸ್ಟ್​​ ಪಂದ್ಯದಲ್ಲಿ ಹೀನಾಯ ಸೋಲು ಕಂಡ ಬಳಿಕವೂ ದೊಡ್ಡಮಟ್ಟದಲ್ಲಿ ತಿರುಗೇಟು ನೀಡುವ ಮೂಲಕ ಚರಿತ್ರೆ ಸೃಷ್ಟಿಸಿರುವ ಭಾರತ ಕ್ರಿಕೆಟ್​ ತಂಡದ ಸಾಧನೆ ಅಸಾಮಾನ್ಯವಾದದ್ದು ಎಂದು ಡಬ್ಲ್ಯೂಡಬ್ಲ್ಯೂಇ ಗ್ಲೋಬಲ್​ ಟ್ಯಾಲೆಂಟ್​ ಸ್ಟ್ರಾಟಜಿ & ಡೆವಲಪ್​​ಮೆಂಟ್​​ ಕಾರ್ಯನಿರ್ವಾಹಕ ಉಪಾಧ್ಯಕ್ಷ ಟ್ರಿಪಲ್ ಹೆಚ್​.ಲಾಡ್ಸ್​​​ ಶ್ಲಾಘಿಸಿದರು.

ಟೀಂ ಇಂಡಿಯಾದ ಈ ಗೆಲುವನ್ನು ಕೇವಲ ಭಾರತೀಯ ಅಭಿಮಾನಿಗಳು ಸಂಭ್ರಮಿಸುತ್ತಿಲ್ಲ. ವಿಶ್ವವೇ ಸಂಭ್ರಮಿಸುತ್ತಿದೆ. ಅನುಭವಿಗಳ ಕೊರತೆ ಇದ್ದರೂ ಯುವಕರು ತೋರಿದ ಉತ್ತಮ ಪ್ರದರ್ಶನ, ತಂಡದ ನಿರ್ವಹಣೆ ಮತ್ತು ಆಸೀಸ್​​ ನೆಲದಲ್ಲಿ ಆಟಗಾರರರು ತೋರಿದ ಮನೋಭಾವನೆಯನ್ನು ಎಷ್ಟು ಕೊಂಡಾಡಿದರೂ ಸಾಲದು ಎಂದು ಡಬ್ಲ್ಯೂಡಬ್ಲ್ಯೂಇ ಸೂಪರ್​​ಸ್ಟಾರ್​​​ ಸಂತಸ ವ್ಯಕ್ತಪಡಿಸಿದರು.

ನಾಯಕ ವಿರಾಟ್ ಕೊಹ್ಲಿ ಪಿತೃತ್ವ ರಜೆ ಪಡೆದು ತವರಿಗೆ ಬಂದಿದ್ದರು. ಅನುಭವಿ ಆಟಗಾರರಾದ ಹನುಮ ವಿಹಾರಿ, ಕೆ.ಎಲ್.ರಾಹುಲ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಇಶಾಂತ್ ಶರ್ಮಾ, ಆರ್.ಅಶ್ವಿನ್ ಮತ್ತು ರವೀಂದ್ರ ಜಡೇಜಾ ಎಲ್ಲರೂ ಗಾಯಗೊಂಡಿದ್ದರು. ಸಮರ್ಪಕ ಬೌಲಿಂಗ್ ದಾಳಿಯ ಕೊರತೆ ಕಂಡು ಬಂತು. ಹೀಗಾಗಿ, ಬಲಿಷ್ಠ ಆಸ್ಟ್ರೇಲಿಯಾವನ್ನು ಸೋಲಿಸುವುದೇ ದೊಡ್ಡ ಸವಾಲಾಗಿತ್ತು. ಹೀಗಾಗಿ, ಆಸ್ಟ್ರೇಲಿಯಾ ಮಾಜಿ ಆಟಗಾರರು ಭಾರತಕ್ಕೆ ಸೋಲು ಖಚಿತ ಎಂದೇ ಭಾವಿಸಿ ಹೇಳಿಕೆ ಕೊಟ್ಟಿದ್ದರು ಎಂದರು.

ಇದನ್ನೂ ಓದಿ:ಸೈಯದ್ ಮುಷ್ತಾಕ್ ಅಲಿ ಕ್ವಾರ್ಟರ್​ಫೈನಲ್​: ಕರ್ನಾಟಕಕ್ಕೆ ಪಂಜಾಬ್ ಎದುರಾಳಿ

ಅಡಿಲೇಡ್​​​ನಲ್ಲಿ ಜರುಗಿದ ಮೊದಲ ಪಂದ್ಯದಲ್ಲಿ ಭಾರತ ತಂಡ ಕೇವಲ 36 ರನ್​ಗಳಿಗೆ ಆಲೌಟ್​ ಆಗಿತ್ತು. ಇದರಿಂದಾಗಿ ಭಾರೀ ಟೀಕೆಗೆ ಒಳಗಾಗಿತ್ತು. ಆದರೂ, ಗಾಯಾಳುಗಳ ಸಮಸ್ಯೆ, ಅನುಭವಿ ಆಟಗಾರರ ಕೊರತೆ ಇವೆಲ್ಲವನ್ನೂ ಮೆಟ್ಟಿನಿಂತ ಯುವಪಡೆ ಆಸ್ಟ್ರೇಲಿಯಾವನ್ನು 2-1 ಅಂತರದಿಂದ ಗೆಲ್ಲುವು ಮೂಲಕ ಆಸೀಸ್​ ಮಾಜಿ ನಾಯಕರ ಭವಿಷ್ಯವನ್ನು ಹುಳಿಗೊಳಿಸಿದರು ಎಂದರು.

ಅದೂ ಅಲ್ಲದೆ, ಮೆಲ್ಬೋರ್ನ್​ನ​ ಗಬ್ಬಾ ಮೈದಾನದಲ್ಲಿ 32 ವರ್ಷಗಳಿಂದ ಒಂದು ಪಂದ್ಯವನ್ನು ಸೋಲನುಭವಿಸದ ಆಸೀಸ್​ಗೆ ಪ್ರತಿಕೂಲ ಪರಿಸ್ಥಿತಿಯಲ್ಲೂ ಯುವಕರ ತಂಡ ಮಣ್ಣುಮುಕ್ಕಿಸುವ ಮೂಲಕ ಭಾರತ ಇತಿಹಾಸ ಬರೆದಿದೆ. ಇದೊಂದು ಎಂದೂ ಮರೆಯದ ಜಯ ಎಂದು ಸಂತಸ ವ್ಯಕ್ತಪಡಿಸಿದ ಅವರು, ದುರಷ್ಟವಶಾತ್​ ಸಮಯದ ಅಭಾವದಿಂದಾಗಿ ಪಂದ್ಯವನ್ನು ವೀಕ್ಷಿಸಲು ಸಾಧ್ಯವಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಜನವರಿ 26 ರಂದು ನಡೆಯಲಿರುವ ಡಬ್ಲ್ಯೂಡಬ್ಲ್ಯೂಇ ಸೂಪರ್‌ಸ್ಟಾರ್ ಕಾರ್ಯಕ್ರಮ ವೀಕ್ಷಣೆಗೆ ಇಡೀ ತಂಡವನ್ನು ವೈಯಕ್ತಿಕವಾಗಿ ಆಹ್ವಾನಿಸುತ್ತೇನೆ. ನಿಮ್ಮೊಂದಿಗೆ ಆಚರಿಸುವ ಬಯಕೆ ಹೊಂದಿದ್ದೇವೆ. ನೀವು ಭಾಗವಹಿಸಿ, ನಿಮ್ಮ ಸಂಭ್ರಮವನ್ನು ನಮ್ಮೊಂದಿಗೂ ಹಂಚಿಕೊಳ್ಳಿ ಎಂದು ಮನವಿ ಮಾಡಿದರು.

ABOUT THE AUTHOR

...view details