ಕರ್ನಾಟಕ

karnataka

By

Published : May 23, 2021, 5:16 PM IST

ETV Bharat / sports

ಪಿಚ್ ವೇಗಿಗಳಿಗೆ ಅನುಕೂಲವಾದರೆ ಭಾರತ ತಂಡಕ್ಕೆ WTC ಫೈನಲ್​ನಲ್ಲಿ ಹಿನ್ನಡೆ : ಪನೇಸರ್​

ಪ್ರಸ್ತುತ ಯುಕೆಯಲ್ಲಿ ಮಳೆ ಮತ್ತು ಚಳಿಯಿಂದ ಕೂಡಿರುವ ವಾತಾವಾರಣವಿದೆ. ಇದು ಜೂನ್ 18ರಿಂದ ನಡೆಯುವ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್ ಪಂದ್ಯದವರೆಗೆ ಮುಂದುವರಿದರೆ, ನ್ಯೂಜಿಲ್ಯಾಂಡ್​ಗೆ ಹೆಚ್ಚು ನೆರವು ನೀಡಲಿದೆ..

ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್
ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್

ನವದೆಹಲಿ :ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ಫೈನಲ್ ಪಂದ್ಯ ನಡೆಯುವ ಸೌತಾಂಪ್ಟನ್ ಪಿಚ್​ ವೇಗಿಗಳಿಗೆ ನೆರವು ನೀಡಿದರೆ, ನ್ಯೂಜಿಲ್ಯಾಂಡ್ ತಂಡ ಭಾರತದ ವಿರುದ್ಧ ಮೇಲುಗೈ ಸಾಧಿಸಲಿದೆ ಎಂದು ಇಂಗ್ಲೆಂಡ್​ ಮಾಜಿ ಸ್ಪಿನ್ನರ್ ಮಾಂಟಿ ಪನೇಸರ್​ ಅಭಿಪ್ರಾಯ ಪಟ್ಟಿದ್ದಾರೆ.

ಪ್ರಸ್ತುತ ಯುಕೆಯಲ್ಲಿ ಮಳೆ ಮತ್ತು ಚಳಿಯಿಂದ ಕೂಡಿರುವ ವಾತಾವಾರಣವಿದೆ. ಇದು ಜೂನ್ 18ರಿಂದ ನಡೆಯುವ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್ ಪಂದ್ಯದವರೆಗೆ ಮುಂದುವರಿದರೆ ನ್ಯೂಜಿಲ್ಯಾಂಡ್​ಗೆ ಹೆಚ್ಚು ನೆರವು ನೀಡಲಿದೆ ಎಂದು ಪನೇಸರ್ ಅಭಿಪ್ರಾಯಪಟ್ಟಿದ್ದಾರೆ.

ಪ್ರಸ್ತುತ ಇಂಗ್ಲೆಂಡ್​ನಲ್ಲಿ ಸಾಕಷ್ಟು ಮಳೆ ಸುರಿಯುತ್ತಿದೆ. ಭಾರತ ಮತ್ತು ನ್ಯೂಜಿಲ್ಯಾಂಡ್​ ನಡುವಿನ ಪಂದ್ಯದವರೆಗೂ ಇದೇ ವಾತಾವರಣವಿದ್ದರೆ, ಎರಡೂ ತಂಡಗಳ ಬೌಲರ್​ಗಳ ನಡುವೆ ಆಸಕ್ತಿದಾಯಕ ಹೋರಾಟವನ್ನು ನಾವು ನೋಡಬಹುದಾಗಿದೆ.

ಈ ಪರಿಸ್ಥಿತಿಯಲ್ಲಿ ಚಲಿಸುವ ಚೆಂಡನ್ನು ಭಾರತೀಯ ಬ್ಯಾಟ್ಸ್​ಮನ್​ಗಳಿಗಿಂತ ಕಿವೀಸ್ ಬ್ಯಾಟ್ಸ್​ಮನ್​ಗಳು ಉತ್ತಮವಾಗಿ ಆಡಲಿದ್ದಾರೆ".

"ಆದ್ದರಿಂದ, ಟೆಸ್ಟ್ ಪಂದ್ಯದ ಸಮಯದಲ್ಲಿ ಚೆಂಡು ಸ್ವಿಂಗ್ ಆಗುತ್ತಿದೆಯೇ ಮತ್ತು ಕೆಲವು ಹಂತದಲ್ಲಿ ಚಲಿಸುತ್ತಿದೆಯೇ ಎಂದು ನೋಡಲು ಸಾಕಷ್ಟು ಆಸಕ್ತಿದಾಯಕವಾಗಿದೆ.

ಆದರೆ, ನ್ಯೂಜಿಲೆಂಡ್‌ಗೆ ಹೋಲಿಸಿದರೆ ಭಾರತೀಯ ಬ್ಯಾಟ್ಸ್‌ಮನ್‌ಗಳು ಈ ಸಂದರ್ಭವನ್ನು ಹೇಗೆ ನಿಭಾಯಿಸಲಿದ್ದಾರೆ ಎಂದು ಕಾದು ನೋಡಬೇಕಿದೆ" ಎಂದು ಪನೇಸರ್ ದೂರವಾಣಿ ಮೂಲಕ ಪಿಟಿಐಗೆ ತಿಳಿಸಿದ್ದಾರೆ.

ಆದರೆ, ಸೌತಾಂಪ್ಟನ್​ನಲ್ಲಿ ಬಿಸಿಲು ಬಂದರೆ ಭಾರತ ತಂಡಕ್ಕೆ ಹೆಚ್ಚು ಅನುಕೂಲವಾಗಲಿದೆ. ಆಗ ಭಾರತ ತಂಡ ಇಬ್ಬರು ಸ್ಪಿನ್ನರ್(ಜಡೇಜಾ ಮತ್ತು ಆಶ್ವಿನ್) ಮತ್ತು ಮೂವರು ಸ್ಪಿನ್ನರ್​ಗಳೊಂದಿಗೆ ಕಣಕ್ಕಿಳಿಯಬಹುದು.

ಭಾರತ ತಂಡ ಆಗ ನೆಚ್ಚಿನ ತಂಡವಾಗಬಹುದು. ಆದರೆ, ಅದೆಲ್ಲಾ ಹವಾಮಾನದ ಮೇಲೆ ಅವಲಂಭಿಸಿದೆ ಎಂದು ಪನೇಸರ್ ತಿಳಿಸಿದ್ದಾರೆ.

ನ್ಯೂಜಿಲ್ಯಾಂಡ್ ತಂಡ ಇಂಗ್ಲೆಂಡ್ ವಿರುದ್ಧ ಜೂನ್​ 2ರಿಂದ ಟೆಸ್ಟ್​ ಸರಣಿಯನ್ನಾಡಲಿದೆ. ಅದೇ ದಿನದಂದು ಭಾರತ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದೆ.

ಇದನ್ನು ಓದಿ:ಹೀಗಾದ್ರೆ... ಆಂಗ್ಲರ​ ವಿರುದ್ಧ ಭಾರತ ಟೆಸ್ಟ್​ ಸರಣಿ ಕ್ಲೀನ್​ ಸ್ವೀಪ್​ ಮಾಡಲಿದೆ: ಇಂಗ್ಲೆಂಡ್​ ಮಾಜಿ ಬೌಲರ್​

ABOUT THE AUTHOR

...view details