ನವದೆಹಲಿ :ಭಾರತ ಕ್ರಿಕೆಟ್ ತಂಡದ ಸ್ಟಾರ್ ವೇಗಿಜಸ್ಪ್ರೀತ್ ಬುಮ್ರಾ ಬೆನ್ನು ನೋವಿನ ಟಿ20 ವಿಶ್ವ ಕಪ್ನಿಂದ ಹೊರಗುಳಿದ್ದಿದ್ದಾರೆ ಎಂದು ಬಿಸಿಸಿಐ ಅಧಿಕೃತವಾಗಿ ಪ್ರಕಟಿಸಿತು. ಪ್ರಕಟಣೆಯ ನಂತರ ಬುಮ್ರಾ ಟ್ವೀಟ್ ಮಾಡಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ವಿಶ್ವಕಪ್ ತಂಡಕ್ಕೆ ಆಟ ಆಡಲು ಆಗದಿದ್ದಲ್ಲಿ ಹುರಿದುಂಬಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.
ಟ್ವಿಟ್ನಲ್ಲಿ ಬುಮ್ರಾ 'ನಾನು ಈ ಬಾರಿ ಟಿ 20 ವಿಶ್ವಕಪ್ನ ಭಾಗವಾಗುವುದಿಲ್ಲ ಎಂಬುದು ಬೇಸರ ತಂದಿದೆ. ನನ್ನ ಬಗ್ಗೆ ಹಾರೈಸಿದ, ನನಗೆ ಪ್ರೀತಿ ತೋರಿದ ಬೆಂಬಲಿಸಿ ಎಲ್ಲರಿಗೂ ಧನ್ಯವಾದಗಳು. ನಾನು ಚೇತರಿಸಿಕೊಂಡ ಕೂಡಲೇ ತಂಡಕ್ಕಾಗಿ ಆಡುತ್ತೇನೆ. ಆಸ್ಟ್ರೇಲಿಯಾದಲ್ಲಿ ವಿಶ್ವಕಪ್ ಆಡಲು ಹೋಗುವ ತಂಡಕ್ಕೆ ಹುರಿದುಂಬಿಸುತ್ತೇನೆ' ಎಂದು ಬರೆದುಕೊಂಡಿದ್ದಾರೆ.