ಕರ್ನಾಟಕ

karnataka

By

Published : Oct 4, 2022, 7:07 PM IST

ETV Bharat / sports

ವಿಶ್ವಕಪ್​ ನನ್ನಿಂದ ಆಟವಾಡಲು ಆಗುತ್ತಿಲ್ಲ, ನಾನು ಇಲ್ಲಿಂದಲೇ ತಂಡಕ್ಕೆ ಬೆಂಬಲಿಸುತ್ತೇನೆ : ಬುಮ್ರಾ

ಬೆನ್ನು ನೀವಿನ ಕಾರಣ ಟಿ20ವಿಶ್ವ ಕಪ್​ನಿಂದ ಬುಮ್ರಾ ಹೊರಗುಳಿದಿರುವುದು ಭಾರತಕ್ಕೆ ದೊಡ್ಡ ಹೊಡೆತ ನೀಡಿದಂತಾಗಿದೆ. ಡೆತ್​ ಓವರ್​ಗಳ ಬೌಲಿಂಗ್​ನಲ್ಲಿ ನಿಯಂತ್ರಣ ಕಂಡುಕೊಳ್ಳಲು ಪ್ರಯತ್ನಿಸುತ್ತಿರುವ ಭಾರತಕ್ಕೆ ಇದ್ದು ದೊಡ್ಡ ನಷ್ಟವಾಗಿದೆ.

gutted-that-i-wont-be-part-of-t20-world-cup-bumrah
ಬುಮ್ರಾ

ನವದೆಹಲಿ :ಭಾರತ ಕ್ರಿಕೆಟ್​ ತಂಡದ ಸ್ಟಾರ್​ ವೇಗಿಜಸ್ಪ್ರೀತ್ ಬುಮ್ರಾ ಬೆನ್ನು ನೋವಿನ ಟಿ20 ವಿಶ್ವ ಕಪ್​ನಿಂದ ಹೊರಗುಳಿದ್ದಿದ್ದಾರೆ ಎಂದು ಬಿಸಿಸಿಐ ಅಧಿಕೃತವಾಗಿ ಪ್ರಕಟಿಸಿತು. ಪ್ರಕಟಣೆಯ ನಂತರ ಬುಮ್ರಾ ಟ್ವೀಟ್​ ಮಾಡಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ವಿಶ್ವಕಪ್​ ತಂಡಕ್ಕೆ ಆಟ ಆಡಲು ಆಗದಿದ್ದಲ್ಲಿ ಹುರಿದುಂಬಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

ಟ್ವಿಟ್​ನಲ್ಲಿ ಬುಮ್ರಾ 'ನಾನು ಈ ಬಾರಿ ಟಿ 20 ವಿಶ್ವಕಪ್‌ನ ಭಾಗವಾಗುವುದಿಲ್ಲ ಎಂಬುದು ಬೇಸರ ತಂದಿದೆ. ನನ್ನ ಬಗ್ಗೆ ಹಾರೈಸಿದ, ನನಗೆ ಪ್ರೀತಿ ತೋರಿದ ಬೆಂಬಲಿಸಿ ಎಲ್ಲರಿಗೂ ಧನ್ಯವಾದಗಳು. ನಾನು ಚೇತರಿಸಿಕೊಂಡ ಕೂಡಲೇ ತಂಡಕ್ಕಾಗಿ ಆಡುತ್ತೇನೆ. ಆಸ್ಟ್ರೇಲಿಯಾದಲ್ಲಿ ವಿಶ್ವಕಪ್​ ಆಡಲು ಹೋಗುವ ತಂಡಕ್ಕೆ ಹುರಿದುಂಬಿಸುತ್ತೇನೆ' ಎಂದು ಬರೆದುಕೊಂಡಿದ್ದಾರೆ.

ವೈದ್ಯಕೀಯ ವರದಿಯ ನಂತರ ಬಿಸಿಸಿಐ ಅಧಿಕೃತ ಸೋಮವಾರ ಬುಮ್ರಾ ಟಿ20 ವಿಶ್ವಕಪ್​ನಿಂದ ಹೊರಗುಳಿದಿರುವ ಬಗ್ಗೆ ಪ್ರಕಟಿಸಿತು. ಆದರೆ, ಈ ವರೆಗೆ ಬದಲಿ ಆಟಗಾರರು ಯಾರು ಎಂದು ತಿಳಿಸಿಲ್ಲ. ಮೊಹಮ್ಮದ್ ಶಮಿ ಕೋವಿಡ್​ನಿಂದ ಚೇತರಿಸಿ ಕೊಂಡ ನಂತರ ಸಂಪೂರ್ಣ ಫಿಟ್‌ನೆಸ್ ಗಳಿಸಿದರೆ ಅವರನ್ನೇ ಬದಲಿಯಾಗಿ ಆಡಿಸುವ ಸಾಧ್ಯತೆ ಇದೆ. ಇಲ್ಲವಾದಲ್ಲಿ ದಕ್ಷಿಣ ಆಫ್ರಿಕಾ ಎದುರಿನ ಪಂದ್ಯಕ್ಕೆ ಬುಮ್ರಾ ಬದಲಿಗೆ ಆಯ್ಕೆ ಆಗಿರುವ ಸಿರಾಜ್ ತಂಡದಲ್ಲಿ ಸ್ಥಾನ ಪಡೆಯಲಿದ್ದಾರೆ.

ಇದನ್ನೂ ಓದಿ:ಟಿ20 ವಿಶ್ವಕಪ್​​ನಿಂದ ಜಸ್ಪ್ರೀತ್ ಬುಮ್ರಾ ಔಟ್​​​​​..

ABOUT THE AUTHOR

...view details