ನವದೆಹಲಿ:ಭಾರತ ತಂಡದ ಮಾಜಿ ನಾಯಕ ರಾಹುಲ್ ದ್ರಾವಿಡ್ ಟಿ20 ಕ್ರಿಕೆಟ್ನಲ್ಲಿ ಯಶಸ್ವಿಯಾಗಲು ತಮಗೆ ನೀಡಿದ ಸಲಹೆಯನ್ನು ಟೀಂ ಇಂಡಿಯಾದ ಟೆಸ್ಟ್ ತಂಡದ ಉಪನಾಯಕ ಅಜಿಂಕ್ಯಾ ರಹಾನೆ ಬಹಿರಂಗಗೊಳಿಸಿದ್ದಾರೆ.
ಯಾವಾಗಲೂ ಹೊಡೆತದ ಗುಣಮಟ್ಟದ ಬಗ್ಗೆ ತಲೆ ಕೆಡಿಸಿಕೊಳ್ಳಬೇಡ, ಹೊಡೆತದ ಪ್ರಭಾವದ ಮೇಲೆ ಮಾತ್ರ ಕೇಂದ್ರೀಕರಿಸಬೇಕು ಎಂದು ದ್ರಾವಿಡ್ ಸಲಹೆ ನೀಡಿದ್ದರೆಂದು ರಹಾನೆ ಹೇಳಿದ್ದಾರೆ. ಕೆಲವೊಮ್ಮೆ ಟಿ20ಯಲ್ದಿ ನೀವು ಹೊಡೆಯುವ ಶಾಟ್ ಉತ್ತಮವಾಗಿ ಕಾಣುವುದಿಲ್ಲ. ಮತ್ತು ನೀವು ಕೆಟ್ಟ ಹೊಡೆತಕ್ಕೆ ಕೈ ಹಾಕಿ ವಿಕೆಟ್ ಹೊಡೆದ ಎಂದು ಭಾವಿಸುತ್ತೀರಾ.. ಆದರೆ, ಟಿ20ಯಲ್ಲಿ ಶಾಟ್ ಹೇಗೆ ಕಾಣುತ್ತವೆ ಎಂಬುದರ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ ಎಂದು ರಾಹುಲ್ ಬಾಯ್ ಸಲಹೆ ನೀಡಿದ್ದರೆಂದು ವೆಬ್ಸೈಟ್ವೊಂದಕ್ಕೆ ರಹಾನೆ ತಿಳಿಸಿದ್ದಾರೆ.
'ಹೊಡೆತ ಕೆಟ್ಟದಾಗಿತ್ತು ಎಂಬುದು ಮುಖ್ಯವಲ್ಲ. ಟಿ20 ಕ್ರಿಕೆಟ್ನಲ್ಲಿ ಚೆಂಡನ್ನು ನೋಡುವ ಮೂಲಕ ಹೊಡೆಯಬೇಕು. ಆ ಹೊಡೆತ ಪರಿಣಾಮಕಾರಿ ಆಗಿರಬೇಕು ಅಷ್ಟೇ.. ಎಂದು ಅವರು ನನೆಗೆ ಹೇಳಿಕೊಟ್ಟಿದ್ದರು' ಅಂತಾ 32 ವರ್ಷದ ಆಟಗಾರ ಹೇಳಿದ್ದಾರೆ.
ರಹಾನೆ ಹಾಗೂ ದ್ರಾವಿಡ್ ಇಬ್ಬರೂ ಐಪಿಎಲ್ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಡಿದ್ದರು. ದ್ರಾವಿಡ್ ನಾಯಕನಾಗಿ ಹಾಗೂ ನಂತರ ತಂಡದ ಮೆಂಟರ್ ಆಗಿಯೂ ಕಾರ್ಯ ನಿರ್ವಹಿಸಿದ್ದರು.
ರಹಾನೆ 2016ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಲೌಡರ್ಹಿಲ್ನಲ್ಲಿ ಕೊನೆಯ ಟಿ20 ಆಡಿದ್ದರು. ಅವರು ಚುಟುಕು ಕ್ರಿಕೆಟ್ನಲ್ಲಿ ದೊಡ್ಡ ಹೊಡೆತಗಳಿಗಿಂತ ಸಾಂಪ್ರಾದಾಯಿಕ ಆಟಕ್ಕೆ ಹೆಚ್ಚಿನ ಮಹತ್ವ ನೀಡುತ್ತೇನೆಂದು ಒಪ್ಪಿಕೊಂಡಿದ್ದಾರೆ.
'ಟಿ20 ಕ್ರಿಕೆಟ್ನಲ್ಲಿ ನಾನು ಯಾರನ್ನು ನಕಲಿಸಲು ಪ್ರಯತ್ನಿಸುವುದಿಲ್ಲ. ನಾನು ಆಡುವ ಹೊಡೆತಗಳು ಬೌಲರ್ ಮೇಲೆ ಇರುತ್ತವೆ. ಕವರ್ಸ್ ಫೀಲ್ಡರ್ ಮತ್ತು ಬೌಲರ್ನ ತಲೆ ಮೇಲೆ ಸಾಗುವಂತೆ ಹೊಡೆಯುವುದು ಕೆಲವು ಹೊಡೆತಗಳನ್ನು ನಾನೇ ಅಭಿವೃದ್ಧಿ ಪಡಿಸಿಕೊಂಡಿದ್ದೇನೆ. ನಿಮ್ಮ ಹೊಡೆತಗಳ ಬಗ್ಗೆ ನಿಮಗೆ ಖಚಿತವಿದ್ದರೆ ಅವುಗಳನ್ನು ಸಮರ್ಥಿಸಿಕೊಳ್ಳಬಹುದು' ಎಂದು ರಹಾನೆ ಹೇಳಿದ್ದಾರೆ.
ಮೊದಲ 6 ಓವರ್ಗಳಲ್ಲಿ ನಾನು 18 ಎಸೆತಗಳನ್ನು ಎದುರಿಸಿದ್ರೆ ಯಾವಾಗಲು 150-160 ಸ್ಟ್ರೈಕ್ರೇಟ್ ಕಾಪಾಡಿಕೊಳ್ಳಲು ಬಯಸುತ್ತೇನೆ. ಇದು ಟಿ20 ಕ್ರಿಕೆಟ್ನಲ್ಲಿ ನಿಮ್ಮ ಇನ್ನಿಂಗ್ಸ್ ಆಡಬೇಕಾಗಿರುವುದು ಅಗತ್ಯವಾಗಿರುತ್ತದೆ ಎಂದು ಅವರು ಹೇಳಿದ್ದಾರೆ.