ಮುಂಬೈ:ಸಾಲು ಸಾಲು ಟೀಕೆಗಳ ನಡುವೆಯೂ ಹಲವು ಯಶಸ್ವಿ ನಡೆಗಳಿಂದ ಆಯ್ಕೆ ಸಮಿತಿಯನ್ನು ಮುನ್ನಡೆಸಿದ್ದ ಮುಖ್ಯಸ್ಥ ಎಂ.ಎಸ್.ಕೆ.ಪ್ರಸಾದ್ ಅಧಿಕಾರಾವಧಿ ಮುಕ್ತಾಯವಾಗಿದೆ.
ತಮ್ಮ ನಿರ್ಗಮನದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪ್ರಸಾದ್, ನಾವು ನಮ್ಮ ಕೆಲಸವನ್ನು ಉತ್ತಮವಾಗಿ ನಿಭಾಯಿಸಿರುವ ಖುಷಿ ಇದೆ. ಟಿ20 ವಿಶ್ವಕಪ್ಗೂ ಮುನ್ನ ಹುದ್ದೆಯಿಂದ ಕೆಳಗಿಳಿಯುತ್ತಿರುವ ಬಗ್ಗೆ ಯಾವುದೇ ಬೇಸರ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
MSK ಪ್ರಸಾದ್ ಆಯ್ಕೆ ಸಮಿತಿಯ ಅವಧಿ ವಿಸ್ತರಣೆಗೆ ದಾದಾ ನಕಾರ..!
ಅಧಿಕಾರಾವಧಿ ವಿಸ್ತರಣೆ ಬಗ್ಗೆ ಮಾತನಾಡಿದ ಪ್ರಸಾದ್, ಆ ವಿಚಾರದ ಬಗ್ಗೆ ನನ್ನ ಬಳಿ ಮಾತನಾಡಿಲ್ಲ. ಎಲ್ಲ ನಿರ್ಧಾರ ಬಿಸಿಸಿಐ ತೆಗೆದುಕೊಳ್ಳುತ್ತದೆ. ನಿಯಮ ಹೇಗಿದೆಯೋ ಅದನ್ನು ಬಿಸಿಸಿಐ ಪಾಲಿಸುತ್ತದೆ ಎಂದಿದ್ದಾರೆ.
ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಎಂ.ಎಸ್.ಕೆ ಪ್ರಸಾದ್ ನೇತೃತ್ವದ ಆಯ್ಕೆ ಸಮಿತಿಯ ಎಲ್ಲ ಐವರ ಅವಧಿಯೂ ಮುಕ್ತಾಯವಾಗಿದೆ ಎಂದು ಡಿ.1ರಂದು ನಡೆದ ಬಿಸಿಸಿಐ ವಾರ್ಷಿಕ ಸಭೆಯಲ್ಲಿ ಎಂ.ಎಸ್.ಕೆ. ಪ್ರಸಾದ್ ಸಮಿತಿಯ ಅವಧಿ ಮುಕ್ತಾಯವಾಗಿದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಸ್ಪಷ್ಟಪಡಿಸಿದ್ದರು.