ಕರ್ನಾಟಕ

karnataka

By

Published : Nov 5, 2019, 10:39 AM IST

ETV Bharat / sports

ದ್ವಿತೀಯ ಟಿ-20 ಪಂದ್ಯಕ್ಕೆ 'ಮಹಾ' ಭೀತಿ

'ಮಹಾ' ಚಂಡಮಾರುತ ಸದ್ಯ ಗುಜರಾತ್ ಕರಾಳಿಯತ್ತ ಮುಖ ಮಾಡಿದ್ದು, ನವೆಂಬರ್ 6 ಇಲ್ಲವೇ 7ರಂದು ಗುಜರಾತ್​ಗೆ ಅಪ್ಪಳಿಸಲಿದೆ ಎನ್ನುವ ಮಾಹಿತಿಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ.

ದ್ವಿತೀಯ ಟಿ20 ಪಂದ್ಯ

ರಾಜ್​ಕೋಟ್: ಪ್ರವಾಸಿ ಬಾಂಗ್ಲಾದೇಶದ ವಿರುದ್ಧ ಮೊದಲ ಟಿ-20 ಪಂದ್ಯ ಸೋತಿರುವ ಆತಿಥೇಯ ಭಾರತ ಎರಡನೇ ಪಂದ್ಯದಲ್ಲಿ ತಿರುಗೇಟು ನೀಡಲು ಸಜ್ಜಾಗಿದೆ. ಇದೇ ವೇಳೆ ಪಂದ್ಯದ ಮೇಲೆ ಸೈಕ್ಲೋನ್ ಭೀತಿಯೂ ಆವರಿಸಿದೆ.

ಗುಜರಾತ್​ನ ರಾಜ್​ಕೋಟ್​ನಲ್ಲಿ ನವೆಂಬರ್​ 7ರಂದು ಭಾರತ-ಬಾಂಗ್ಲಾ ನಡುವೆ ದ್ವಿತೀಯ ಟಿ-20 ಪಂದ್ಯ ಆಯೋಜನೆಯಾಗಿದೆ. ಈಗಾಗಲೇ 'ಮಹಾ' ಚಂಡಮಾರುತ ಗುಜರಾತ್ ಪ್ರವೇಶಿಸಲಿದ್ದು, ಪಂದ್ಯಕ್ಕೆ ಮಳೆಯ ಅಡ್ಡಿಪಡಿಸುವ ಸಾಧ್ಯತೆ ಹೆಚ್ಚಿದೆ.

'ಮಹಾ' ಚಂಡಮಾರುತ ಸದ್ಯ ಗುಜರಾತ್ ಕರಾಳಿಯತ್ತ ಮುಖ ಮಾಡಿದ್ದು, ನವೆಂಬರ್ 6 ಇಲ್ಲವೇ 7ರಂದು ಗುಜರಾತ್​ಗೆ ಅಪ್ಪಳಿಸಲಿದೆ ಎನ್ನುವ ಮಾಹಿತಿಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ.

ಮೊದಲ ಟಿ-20 ಪಂದ್ಯದಲ್ಲಿ ಭಾರತ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗದಲ್ಲಿ ನೀರಸ ಪ್ರದರ್ಶನ ನೀಡಿತ್ತು. ಆತಿಥೇಯರು ನೀಡಿದ 149 ರನ್​ಗಳ ಗುರಿಯನ್ನು ಬಾಂಗ್ಲಾದೇಶ 3 ಎಸೆತ ಬಾಕಿ ಇರುವಂತೆ ಗುರಿಮುಟ್ಟಿ ಸಂಭ್ರಮಿಸಿತ್ತು.

ABOUT THE AUTHOR

...view details