ಕರ್ನಾಟಕ

karnataka

By

Published : Dec 12, 2019, 3:43 PM IST

ETV Bharat / sports

'ಟಿ20ಯಲ್ಲಿ ಬ್ಯಾಟಿಂಗ್​ ಹೇಗಿರಬೇಕು ಅನ್ನೋದನ್ನು ಕೊಹ್ಲಿ ಟೀಂ​ ತೋರಿಸಿಕೊಟ್ರು'

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ ನಡೆದ ಮೂರನೇ ಟಿ20 ಯಲ್ಲಿ ಭಾರತದ ಆರಂಭಿಕರಾದ ರೋಹಿತ್ ಶರ್ಮಾ 71, ರಾಹುಲ್ 91, ಹಾಗೂ ಕೊಹ್ಲಿ 70 ರನ್‌ಗಳ ಸ್ಫೋಟಕ ಬ್ಯಾಟಿಂಗ್​ ನಡೆಸಿ ರನ್‌ ಶಿಖರವನ್ನೇ ಕಡೆದು ನಿಲ್ಲಿಸಿದ್ರು.

Ganguly lauds dominant India
Ganguly lauds dominant India

ಮುಂಬೈ:ವೆಸ್ಟ್​ ಇಂಡೀಸ್​ ವಿರುದ್ಧದ ಅಂತಿಮ ಟಿ-20 ಪಂದ್ಯದಲ್ಲಿ ಅತ್ಯುತ್ತಮ ​ಪ್ರದರ್ಶನ ತೋರಿ ಸರಣಿ ಗೆದ್ದ ಭಾರತ ತಂಡವನ್ನು ಬಿಸಿಸಿಐ ಅಧ್ಯಕ್ಷ ಸೌರವ್​ ಗಂಗೂಲಿ ಅಭಿನಂದಿಸಿದ್ದಾರೆ.

ಭಾರತ ತಂಡ ಸರಣಿ ಸೋಲುತ್ತದೆ ಎಂದು ಯಾರೂ ನಿರೀಕ್ಷಿಸೋದಿಲ್ಲ. ಹಾಗಾಗಿ ಗೆಲುವು ಯಾವುದೇ ರೀತಿಯ ಅಚ್ಚರಿ ನೀಡಿಲ್ಲ. ಭಯವಿಲ್ಲದ ಬ್ಯಾಟಿಂಗ್​ ಹೇಗೆ ಹೊರಬರುತ್ತದೆ ಎಂಬುದನ್ನು ಇಂದಿನ ಟಿ20ಯಲ್ಲಿ ನಾವು ನೋಡಿದ್ದೇವೆ. ಇಲ್ಲಿ ಯಾರೊಬ್ಬರೂ ತನ್ನ ಸ್ಥಾನವನ್ನು ಉಳಿಸಿಕೊಳ್ಳುವುದಕ್ಕೆ ಆಡುವುದಿಲ್ಲ. ಬದಲಾಗಿ ಎಲ್ಲರೂ ಆಡುವುದು ತಂಡದ ಗೆಲುವಿಗಾಗಿ ಎಂದು ಭಾರತ ತಂಡದ ಗೆಲುವನ್ನು ಟ್ವೀಟ​ರ್​ ಮೂಲಕ ಗಂಗೂಲಿ ವಿಶ್ಲೇಷಿಸಿ ಅಭಿನಂದಿಸಿದ್ದಾರೆ.

ಮುಂಬೈನ ವಾಂಖೆಡೆಯಲ್ಲಿ ನಡೆದ ಮೂರನೇ ಟಿ20ಯಲ್ಲಿ ಭಾರತದ ಆರಂಭಿಕರಾದ ರೋಹಿತ್ ​(34 ಬಾಲ್‌ಗೆ 71), ರಾಹುಲ್​(56 ಬಾಲ್‌ಗೆ 91) ಹಾಗೂ ನಾಯಕ ಕೊಹ್ಲಿ (29 ಬಾಲ್‌ಗೆ 70) ಸ್ಫೋಟಕ ಬ್ಯಾಟಿಂಗ್​ ನಡೆಸಿ 240 ರನ್​ಗಳ ಬೃಹತ್​ ಮೊತ್ತ ದಾಖಲಿಸಲು ನೆರವಾಗಿದ್ದರು.

241 ರನ್​ಗಳ ಭಾರಿ​ ಗುರಿ ಪಡೆದಿದ್ದ ವಿಂಡೀಸ್‌ನ​ ಪೊಲಾರ್ಡ್​(68), ಶಿಮ್ರಾನ್​​ ಹೆಟ್ಮೈರ್​(41) ಅವರ ಭರ್ಜರಿ ಬ್ಯಾಟಿಂಗ್ ಹೊರತಾಗಿಯೂ 173 ರನ್​ಗಳಿಸಲಷ್ಟೇ ಶಕ್ತವಾಗಿ 67 ರನ್​ಗಳಿಂದ ಸೋಲುಕಂಡಿತು.

ಪಂದ್ಯದುದ್ದಕ್ಕೂ ಉತ್ತಮ ಬೌಲಿಂಗ್​ ಪ್ರದರ್ಶನ ನೀಡಿದ ದೀಪಕ್​ ಚಹಾರ್​, ಭುವನೇಶ್ವರ್​ ಕುಮಾರ್​, ಮೊಹಮ್ಮದ್​ ಶಮಿ ಹಾಗೂ ಕುಲ್ದೀಪ್​ ಯಾದವ್ ತಲಾ​ 2 ವಿಕೆಟ್​ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.​

ABOUT THE AUTHOR

...view details