ಕರ್ನಾಟಕ

karnataka

ತಮಿಳು ಸರಿಗಮಪಕ್ಕೆ ಕರುನಾಡಿನ ಗಾಯಕಿ ಐಶ್ವರ್ಯಾ ಆಯ್ಕೆ

By

Published : May 28, 2019, 2:02 AM IST

ಸರಿಗಮಪ 11ರಲ್ಲಿ ತಮ್ಮ ಗಾಯನದ ಮೂಲಕ ಗಮನ ಸೆಳೆದಿದ್ದ ಐಶ್ವರ್ಯಾ ರಂಗರಾಜನ್​ ಇದೀಗ ತಮಿಳಿನಲ್ಲೂ ತಮ್ಮ ಪ್ರತಿಭೆ ತೋರಲು ಮುಂದಾಗಿದ್ದಾರೆ.

ಐಶ್ವರ್ಯಾ

ಬೆಂಗಳೂರು:ಸರಿಗಮಪ ಕಾರ್ಯಕ್ರಮದಲ್ಲಿ ಎಲ್ಲರ ಗಮನ ಸೆಳೆದಿದ್ದ ಕನ್ನಡದ ಗಾಯಕಿ ಐಶ್ವರ್ಯಾ ರಂಗರಾಜನ್ ಅವರು ತಮಿಳಿನ ಸರಿಗಮಪಕ್ಕೆ ಆಯ್ಕೆಯಾಗಿದ್ದಾರೆ.

ಸರಿಗಮಪ 11ರಲ್ಲಿ ತಮ್ಮ ಗಾಯನದ ಮೂಲಕ ಗಮನ ಸೆಳೆದಿದ್ದ ಐಶ್ವರ್ಯಾ ರಂಗರಾಜನ್, ತಮಿಳಿನಲ್ಲೂ ತಮ್ಮ ಪ್ರತಿಭೆ ತೋರಲು ಮುಂದಾಗಿದ್ದಾರೆ. ಐಶ್ವರ್ಯ ರಂಗನಾಥ್ 'ಸರಿಗಮಪ ಸೀಸನ್ 11ರಲ್ಲಿ ಭಾಗಿಯಾಗಿದ್ದರು. ತಮ್ಮ ಗಾಯನ ಪ್ರತಿಭೆ ಮೂಲಕ ಟಾಪ್ 3 ಸ್ಥಾನಕ್ಕೆ ಆಯ್ಕೆ ಆಗಿದ್ದರು. ಇಲ್ಲಿ ಟ್ರೋಫಿ ಗೆಲ್ಲದೆ ಇದ್ದರೂ ಅವರಿಗೆ ಅವಕಾಶಗಳು ಸಿಗುತ್ತಿವೆ.

ಗಾಯಕಿ ಐಶ್ವರ್ಯಾ ರಂಗರಾಜನ್

ಮೆಗಾ ಆಡಿಶನ್​​ನಲ್ಲಿ ಇವರ ಪರ್ಫಾಮೆನ್ಸ್​​​ಗೆ ಎಲ್ಲರೂ ಫಿದಾ ಆಗಿದ್ದಾರೆ. ತೀರ್ಪುಗಾರರಾದ ಶ್ರೀನಿವಾಸ್ ಹಾಗೂ ಸುಜಾತಾ ಐಶ್ವರ್ಯಾ ಹಾಡು ಕೇಳಿ ಫುಲ್ ಖುಷ್ ಆಗಿದ್ದಾರೆ. ನಿಮ್ಮನ್ನು ಪಡೆಯಲು ಈ ವೇದಿಕೆ ಅದೃಷ್ಠ ಮಾಡಿದೆ ಎಂದು ಐಶ್ವರ್ಯಾರನ್ನು ಸ್ವಾಗತಿಸಿದರು.

ಐಶ್ವರ್ಯಾ ರಂಗರಾಜನ್ ಗಾಯಕಿ ಆದರೂ ಕಿರುತೆರೆ ನಟನೆಯಲ್ಲೂ ಸೈ ಎನಿಸಿಕೊಂಡಿದ್ದರು. ಕಲರ್ಸ್ ಸೂಪರ್​​ನಲ್ಲಿ ಪ್ರಸಾರವಾಗುವ ‘ಮಗಳು ಜಾನಕಿ’ ಧಾರಾವಾಹಿಯಲ್ಲಿ ಜಾನಕಿ ತಂಗಿ ಚಂಚಲಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

For All Latest Updates

TAGGED:

ABOUT THE AUTHOR

...view details