ಬೆಂಗಳೂರು:ಸರಿಗಮಪ ಕಾರ್ಯಕ್ರಮದಲ್ಲಿ ಎಲ್ಲರ ಗಮನ ಸೆಳೆದಿದ್ದ ಕನ್ನಡದ ಗಾಯಕಿ ಐಶ್ವರ್ಯಾ ರಂಗರಾಜನ್ ಅವರು ತಮಿಳಿನ ಸರಿಗಮಪಕ್ಕೆ ಆಯ್ಕೆಯಾಗಿದ್ದಾರೆ.
ಸರಿಗಮಪ 11ರಲ್ಲಿ ತಮ್ಮ ಗಾಯನದ ಮೂಲಕ ಗಮನ ಸೆಳೆದಿದ್ದ ಐಶ್ವರ್ಯಾ ರಂಗರಾಜನ್, ತಮಿಳಿನಲ್ಲೂ ತಮ್ಮ ಪ್ರತಿಭೆ ತೋರಲು ಮುಂದಾಗಿದ್ದಾರೆ. ಐಶ್ವರ್ಯ ರಂಗನಾಥ್ 'ಸರಿಗಮಪ ಸೀಸನ್ 11ರಲ್ಲಿ ಭಾಗಿಯಾಗಿದ್ದರು. ತಮ್ಮ ಗಾಯನ ಪ್ರತಿಭೆ ಮೂಲಕ ಟಾಪ್ 3 ಸ್ಥಾನಕ್ಕೆ ಆಯ್ಕೆ ಆಗಿದ್ದರು. ಇಲ್ಲಿ ಟ್ರೋಫಿ ಗೆಲ್ಲದೆ ಇದ್ದರೂ ಅವರಿಗೆ ಅವಕಾಶಗಳು ಸಿಗುತ್ತಿವೆ.