ಕರ್ನಾಟಕ

karnataka

By

Published : Sep 28, 2019, 2:50 PM IST

ETV Bharat / sitara

ದ್ವಾರಕೀಶ್ ಚಿತ್ರಾಲಯದ 'ಆಯುಷ್ಮಾನ್​​​​ಭವ' ರಾಜ್ಯೋತ್ಸವದಂದು ಬಿಡುಗಡೆ

ಶಿವರಾಜ್​​ಕುಮಾರ್ ಅಭಿನಯದ 'ಆಯುಷ್ಮಾನ್ ಭವ' ಕನ್ನಡ ರಾಜ್ಯೋತ್ಸವದಂದು ಬಿಡುಗಡೆಯಾಗುತ್ತಿದೆ. ದ್ವಾರಕೀಶ್ ಚಿತ್ರಾಲಯ ಸಂಸ್ಥೆ ಈ ಸಿನಿಮಾವನ್ನು ನಿರ್ಮಿಸಿದ್ದು ಪಿ. ವಾಸು ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ.

ಆಯುಷ್ಮಾನ್​​​​ಭವ

ಹ್ಯಾಟ್ರಿಕ್ ಹೀರೋ ಶಿವರಾಜ್​​​ಕುಮಾರ್​​ ಹಾಗೂ ನಿರ್ದೇಶಕ ಪಿ. ವಾಸು 'ಶಿವಲಿಂಗ' ಚಿತ್ರದ ನಂತರ 'ಆಯುಷ್ಮಾನ್​​​​ಭವ' ಸಿನಿಮಾದಲ್ಲಿ ಮತ್ತೆ ಒಂದಾಗಿದ್ದಾರೆ. ಈ ಸಿನಿಮಾ ಮೇಲೆ ಟಗರು ಶಿವನ ಅಭಿಮಾನಿಗಳಗೆ ಕುತೂಹಲ ಹೆಚ್ಚಾಗುವಂತೆ ಮಾಡಿದೆ. ಚಿತ್ರಕ್ಕೆ ಮೊದಲು 'ಆನಂದ್' ಎಂಬ ಟೈಟಲ್ ಇಟ್ಟು ಆರಂಭಿಸಿದ್ದರೂ ಕೊನೆಗೆ ಸಿನಿಮಾಗೆ 'ಆಯುಷ್ಮಾನ್​​​​ಭವ' ಎಂಬ ಹೆಸರು ಫೈನಲ್ ಮಾಡಲಾಗಿದೆ.

'ಆಯುಷ್ಮಾನ್​​​​ಭವ' ಪ್ರೆಸ್​​​ಮೀಟ್

ಇದೀಗ ಸಿನಿಮಾ ಬಿಡುಗಡೆಗೆ ರೆಡಿಯಾಗಿದ್ದು ಇದೇ ಮೊದಲ ಬಾರಿಗೆ ಚಿತ್ರತಂಡ ಸುದ್ದಿಗೋಷ್ಠಿ ನಡೆಸಿ ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡರು. ಪಿ. ವಾಸು ಅವರ ಈ ಹಿಂದಿನ ಚಿತ್ರಗಳಂತೆ ಈ ಚಿತ್ರದಲ್ಲಿ ಕೂಡಾ ಸೈಕಾಲಾಜಿಕಲ್ ಎಳೆ ಇದ್ದು, ಚಿತ್ರದಲ್ಲಿನ‌ ನನ್ನ ಪಾತ್ರ ನನ್ನ ಅಭಿಮಾನಿಗಳಿಗೆ ಅಲ್ಲದೆ ಫ್ಯಾಮಿಲಿ ಆಡಿಯನ್​​​​ಗಳಿಗೂ ಬಹಳ ಇಷ್ಟವಾಗುತ್ತದೆ ಎಂದು ಶಿವಣ್ಣ ಅವರ ಪಾತ್ರದ ಬಗ್ಗೆ ಹೇಳಿಕೊಂಡರು. ಅಲ್ಲದೆ ಚಿತ್ರದ ಕಥೆಗೂ 'ಆನಂದ್' ಟೈಟಲ್​​ಗೂ ಮ್ಯಾಚ್ ಆಗದ ಕಾರಣ ಟೈಟಲ್ ಬದಲಿಸಿದ್ದಾಗಿ ಶಿವಣ್ಣ ಹೇಳಿದರು. ಇನ್ನು ದ್ವಾರಕೀಶ್ ಚಿತ್ರಾಲಯ ಸಂಸ್ಥೆಗೆ ಸಿನಿಮಾ ನಿರ್ಮಾಣದಲ್ಲಿ 50 ವರ್ಷಗಳು ಮುಗಿದಿದ್ದು ಮೊದಲ ಸಿನಿಮಾದಲ್ಲಿ ಅಪ್ಪಾಜಿ ಹಾಗೂ 52ನೇ ಸಿನಿಮಾದಲ್ಲಿ ನಾನು ನಟಿಸುತ್ತಿರುವುದು ಖುಷಿಯ ವಿಚಾರ ಎಂದು ಶಿವರಾಜ್​​​​ಕುಮಾರ್ ಸಂತೋಷ ವ್ಯಕ್ತಪಡಿಸಿದರು.

'ಆಯುಷ್ಮಾನ್​​​​ಭವ' ಚಿತ್ರತಂಡ

ಯಾವುದೇ ಒಂದು ಸಂಸ್ಥೆ 50 ವರ್ಷಗಳಿಂದ ಸಿನಿಮಾ ನಿರ್ಮಾಣ ಮಾಡಿಕೊಂಡು ಬರುವುದು ಸುಲಭದ ಮಾತಲ್ಲ. ಅದರೆ ನನ್ನ ಸಂಸ್ಥೆ 1969 ರಲ್ಲಿ ರಾಜಣ್ಣನ ಜೊತೆ ಮೇಯರ್ ಮುತ್ತಣ್ಣ ಸಿನಿಮಾ ಮಾಡಿದ್ದು 2019 ರಲ್ಲಿ ಶಿವಣ್ಣನ ಜೊತೆ ಆಯುಷ್ಮಾನ್ ಭವ ಸಿನಿಮಾ ಮಾಡಿದ್ದೀನಿ. ನವೆಂಬರ್​ 1 ಕನ್ನಡ ರಾಜ್ಯೋತ್ಸವದಂದು ನಮ್ಮ ಸಿನಿಮಾ ರಿಲೀಸ್ ಆಗುತ್ತಿದೆ. ಕನ್ನಡಿಗನಾಗಿ ರಾಜ್ಯೋತ್ಸವದಂದು ಸಿನಿಮಾ ಬಿಡುಗಡೆ ಮಾಡುತ್ತಿರುವುದು ಹೆಮ್ಮೆಯ ವಿಷಯ ಎಂದು ಕರ್ನಾಟಕದ ಕುಳ್ಳ ಎಂದೇ ಖ್ಯಾತರಾದ ದ್ವಾರಕೀಶ್ ಹೇಳಿದರು. ಈ ಚಿತ್ರದಲ್ಲಿ ಡಿಂಪಲ್ ಕ್ವೀನ್ ರಚಿತಾ ರಾಮ್ ನಾಯಕಿಯಾಗಿ ಶಿವಣ್ಣನ ಜೊತೆ ನಟಿಸಿದ್ದು ಪಿ. ವಾಸು ನಿರ್ದೇಶನದ ಸಿನಿಮಾಗಳಲ್ಲಿ ನಟಿಸುವುದು ದೊಡ್ಡ ಟಾಸ್ಕ್​. ಅನಂತ್​​​ನಾಗ್ ಹಾಗೂ ಸುಹಾಸಿನಿ ಜೊತೆ ನಟಿಸುವುದು ನನ್ನ ಪುಣ್ಯ ಎಂದು ರಚಿತಾ ರಾಮ್ ಹೇಳಿದರು. ಇನ್ನು ಈ ಚಿತ್ರದ ವಿಶೇಷ ಅಂದ್ರೆ ಕೊಡಗಿನ ಬೆಡಗಿ ನಿಧಿ ಸುಬ್ಬಯ್ಯ ಬಹಳ ವರ್ಷಗಳ ಗ್ಯಾಪ್ ನಂತರ ಮತ್ತೆ ಈ ಚಿತ್ರದ ಮೂಲಕ ಸ್ಯಾಂಡಲ್​​ವುಡ್​​​​​​​ಗೆ ರೀ ಎಂಟ್ರಿ ಕೊಟ್ಟಿದ್ದಾರೆ. ಒಟ್ಟಿನಲ್ಲಿ ಶಿವಣ್ಣನ ಅಭಿಮಾನಿಗಳು ಸಿನಿಮಾ ನೋಡಲು ಕಾತರದಿಂದ ಕಾಯುತ್ತಿದ್ದಾರೆ.

ABOUT THE AUTHOR

...view details