ಕರ್ನಾಟಕ

karnataka

ಚಿಂತೆ ಮಾಡ್ಬೇಡಿ, ನಿಮ್‌ ಜತೆಗೆ ನಾನಿದೀನಿ.. ಹಿರಿಯ ನಿರ್ದೇಶಕ ಎ ಟಿ ರಘು ಸಹಾಯಕ್ಕೆ 'ಪೈಲ್ವಾನ್'!

By

Published : Jan 11, 2021, 5:10 PM IST

Updated : Jan 11, 2021, 5:33 PM IST

ಸುದೀಪ್ ಮಾತುಗಳನ್ನ ಕೇಳಿದ ಎ.ಟಿ. ರಘು ಅವರು, ಅಂಬರೀಶ್ ನಿಧನದ ಬಳಿಕ ನೀವೇ ಫೋನ್ ಮಾಡುತ್ತಿರೋದು. ನನಗೆ ಈಗ ಧೈರ್ಯ ಬಂದಿದೆ ಎಂದು ಹೇಳಿ, ಸುದೀಪ್​ಗೆ ಕೃತಜ್ಞತೆ ಸಲ್ಲಿಸಿದ್ದಾರೆ..

ಹಿರಿಯ ನಿರ್ದೇಶಕ ಎ.ಟಿ. ರಘು
ಹಿರಿಯ ನಿರ್ದೇಶಕ ಎ.ಟಿ. ರಘು

ಸಿನಿಮಾ​​ ನಿರ್ದೇಶಕ ಎ.ಟಿ. ರಘು ಅವರು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕಿಡ್ನಿ ವೈಫಲ್ಯ, ಹೃದಯ ಶಸ್ತ್ರ ಚಿಕಿತ್ಸೆ, ಎರಡು ಕಾಲು ಹಾಗೂ ಕಣ್ಣುಗಳ ಆಪರೇಷನ್​ಗೆ ಸಹಾಯದ ನಿರೀಕ್ಷೆಯಲ್ಲಿದ್ದಾರೆ. ಇದೀಗ ಅವರ ಸಹಾಯಕ್ಕೆ ಕಿಚ್ಚ ಸುದೀಪ್​ ಧಾವಿಸಿದ್ದಾರೆ.

ಎ ಟಿ ರಘು ಸಹಾಯಕ್ಕೆ ನಿಂತ 'ಪೈಲ್ವಾನ್'

ಎ ಟಿ ರಘು ಅವರು ರೆಬೆಲ್‌ ಸ್ಟಾರ್‌ ಅಂಬರೀಶ್‌ ಅವರಿಗೆ ಬರೋಬ್ಬರಿ 27 ಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ. 70 ವರ್ಷ ವಯಸ್ಸಾಗಿರುವ ನಿರ್ದೇಶಕ ಎ.ಟಿ. ರಘು ಇದೀಗ ಕಷ್ಟದ ದಿನಗಳನ್ನ ಎದುರಿಸುತ್ತಿದ್ದಾರೆ‌.

ಹಿರಿಯ ನಿರ್ದೇಶಕ ಎ.ಟಿ. ರಘು
ಈಗಾಗಲೇ ಚಿತ್ರರಂಗ ಹಾಗೂ ಸರ್ಕಾರ ಒಂದಿಷ್ಟು ಆರ್ಥಿಕ ನೆರವು ನೀಡಿದ್ದರೂ, ಅದು ಅವರ ಆರೋಗ್ಯ ಸುಧಾರಣೆಗೆ ಸಾಲುತ್ತಿಲ್ಲ. ಇದೀಗ ಸಂಕಷ್ಟದಲ್ಲಿ ಜೀವನ ನಡೆಸುತ್ತಿರುವ ಎ.ಟಿ. ರಘು ಅವರ ಸಹಾಯಕ್ಕೆ ಕಿಚ್ಚ ಸುದೀಪ್ ಧಾವಿಸಿದ್ದಾರೆ.

ಸ್ವತಃ ನಟ ಸುದೀಪ್ ಕರೆ ಮಾಡಿ, ನಿಮ್ಮ ಜೊತೆಗೆ ನಾನು ಇದ್ದೀನಿ. ಹಾಗೆ ನನ್ನ ಕೈಲಾದ ಸಹಾಯ ಮಾಡುವೆ ಅಂತಾ ಪೈಲ್ವಾನ್, ಹಿರಿಯ ನಿರ್ದೇಶಕ ಎ.ಟಿ. ರಘು ಅವ್ರಿಗೆ ಧೈರ್ಯ ತುಂಬಿದ್ದಾರೆ.

ಹಿರಿಯ ನಿರ್ದೇಶಕ ಎ.ಟಿ. ರಘು
ಸುದೀಪ್ ಮಾತುಗಳನ್ನ ಕೇಳಿದ ಎ.ಟಿ. ರಘು ಅವರು, ಅಂಬರೀಶ್ ನಿಧನದ ಬಳಿಕ ನೀವೇ ಫೋನ್ ಮಾಡುತ್ತಿರೋದು. ನನಗೆ ಈಗ ಧೈರ್ಯ ಬಂದಿದೆ ಎಂದು ಹೇಳಿ, ಸುದೀಪ್​ಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಓದಿ:ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಬಗ್ಗೆ ಮಾಸ್ಟರ್ ಚಿನ್ನಿ ಪ್ರಕಾಶ್ ಏನೆಂದ್ರು..?

Last Updated : Jan 11, 2021, 5:33 PM IST

ABOUT THE AUTHOR

...view details