ಕರ್ನಾಟಕ

karnataka

ತೆರೆಗೆ ಅಪ್ಪಳಿಸಲಿದೆ ಕುರುಕ್ಷೇತ್ರ: ಮಲ್ಟಿಪ್ಲೆಕ್ಸ್ ಗೆ ದಿಢೀರ್ ಭೇಟಿ ಕೊಟ್ಟ ದಾಸ...!

By

Published : Aug 6, 2019, 2:32 AM IST

Updated : Aug 6, 2019, 8:12 AM IST

ಬಹು ತಾರಾಗಣದ ಕುರುಕ್ಷೇತ್ರ ಸಿನಿಮಾ ಬಿಡುಗಡೆಗೆ ದಿನಾಂಕ ನಿಗದಿಯಾಗಿದ್ದು, ಖುದ್ದು ದರ್ಶನ್​ ಅವರೇ ನಗರದ ಒರಾಯನ್​ ಮಾಲ್​ಗೆ ಭೇಟಿ ನೀಡಿ ತಮ್ಮ ಚಿತ್ರಕ್ಕೆ ಸಿಕ್ಕಿರುವ ಶೋಗಳ ಬಗ್ಗೆ ವಿಚಾರಿಸಿದರು.

ಚಾಲೆಂಜಿಂಗ್ ಸ್ಟಾರ್ ದರ್ಶನ್

ಬೆಂಗಳೂರು: ಬಾಕ್ಸ್ ಆಫೀಸ್ ಸುಲ್ತಾನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುಕೋಟಿ ವೆಚ್ಚದ ಕುರುಕ್ಷೇತ್ರ ಚಿತ್ರ, ಇದೇ ವಾರ ವಿಶ್ವದಾದ್ಯಂತ ಸುಮಾರು ಮೂರು ಸಾವಿರ ಸ್ಕ್ರೀನ್​ಗಳ ಮೇಲೆ, ಐದು ಭಾಷೆಗಳಲ್ಲಿ ಅಬ್ಬರಿಸಲಿದೆ.

ಹಲವಾರು ವಿಶೇಷತೆಗಳನ್ನು ಹೊಂದಿರುವ ಕುರುಕ್ಷೇತ್ರ ಸಿನಿಮಾದಲ್ಲಿ ಸ್ಯಾಂಡಲ್ ವುಡ್, ಬಾಲಿವುಡ್, ಟಾಲಿವುಡ್ ಸ್ಟಾರ್ ಗಳ ಸಮಾಗಮವೇ ಇದೆ. ಅಲ್ಲದೆ ಚಿತ್ರದಲ್ಲಿ ಡಿ ಬಾಸ್ ದುರ್ಯೋಧನನಾಗಿ ಅಬ್ಬರಿಸಿದ್ದು. ಈಗಾಗಲೇ ಚಿತ್ರದ ಟಿಕೆಟ್ ಬುಕಿಂಗ್ ಶುರುವಾಗಿದೆ. ಅಲ್ಲದೆ ಕುರುಕ್ಷೇತ್ರ ಟೀಂ ಚಿತ್ರಕ್ಕಾಗಿ ಭರ್ಜರಿಯಾಗಿ ಪ್ರಚಾರ ನಡೆಸಿದೆ.

ಇಂದು ದರ್ಶನ್​ ಅವರು ದಿಢೀರನೆ ರಾಜಾಜಿನಗರದ ಒರಾಯನ್ ಮಾಲ್ಗೆ ಭೇಟಿ ನೀಡಿದ್ದು, ಚಿತ್ರಕ್ಕೆ ಎಷ್ಟು ಶೋ ಸಿಕ್ಕಿದೆ ಎಂಬುದನ್ನು ತಿಳಿದುಕೊಂಡಿದ್ದಾರಂತೆ. ಇನ್ನೂ ಈಗಾಗಲೇ ಡಿ ಬಾಸ್ ಭಕ್ತಗಣ ಕುರುಕ್ಷೇತ್ರ ಕನವರಿಕೆಯಲ್ಲಿದ್ದು, ಡಿ ಬಾಸ್ ಮತ್ತೆ ಬಾಕ್ಸ್ ಆಫೀಸ್ ಶೇಕ್ ಮಾಡಿ 'ಗಲ್ಲಾ ಪೆಟ್ಟಿಗೆ ಸುಲ್ತಾನ' ಆಗ್ತಾರ ಅಂತ ಕಾದು ನೋಡಬೇಕಿದೆ.

Last Updated : Aug 6, 2019, 8:12 AM IST

ABOUT THE AUTHOR

...view details