ಕರ್ನಾಟಕ

karnataka

ETV Bharat / sitara

ನನ್ನ ಮಗನನ್ನು ಇವತ್ತೇ ಹೀರೋ ಅನ್ನಲ್ಲ: ನಟ ರವಿಚಂದ್ರನ್​​

ಈ ಹಿಂದೆ ನಿರ್ದೇಶಕ ನಾಗಶೇಖರ್ ಅವರ 'ನವಂಬರ್​​ನಲ್ಲಿ ನಾನು ಮತ್ತು ಅವಳು' ಚಿತ್ರದ ಮೂಲಕ ವಿಕ್ರಂ ಸ್ಯಾಂಡಲ್​​​ವುಡ್​​ಗೆ ಎಂಟ್ರಿ ಕೊಡಲು ರೆಡಿಯಾಗಿದ್ದರು. ಈ ಚಿತ್ರದ ಟೈಟಲ್ ಪೋಸ್ಟರ್ ಸಹ ಲಾಂಚ್ ಆಗಿತ್ತು. ಅದ್ರೆ ಕಾರಣಾಂತರಗಳಿಂದ ಈ ಚಿತ್ರ ಸೆಟ್ಟೇರಲಿಲ್ಲ.

By

Published : Aug 8, 2019, 1:49 PM IST

ನಟ ರವಿಚಂದ್ರನ್

ಕ್ರೇಜಿ ಸ್ಟಾರ್ ರವಿಚಂದ್ರನ್‌ ದ್ವಿತೀಯ ಪುತ್ರ ವಿಕ್ರಂ 'ತ್ರಿವಿಕ್ರಮ' ಚಿತ್ರದ ಮೂಲಕ ಚಂದನವನಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ನಿನ್ನೆಯಷ್ಟೆ ರವಿಚಂದ್ರನ್ ತ್ರಿವಿಕ್ರಮ ಚಿತ್ರದ ಟೈಟಲ್ ಪೋಸ್ಟರ್ ಲಾಂಚ್ ಮಾಡಿದ್ರು.

ನಾಳೆ ನಾಗರಬಾವಿಯ ಮಲೆಮಹಾದೇಶ್ವರ ದೇವಾಲಯದಲ್ಲಿ ನಡೆಯಲಿರುವ ಮುಹೂರ್ತ ಕಾರ್ಯಕ್ರಮಕ್ಕೆ ನಟ ಪುನೀತ್ ರಾಜ್​ಕುಮಾರ್ ಅತಿಥಿಯಾಗಿ ಬರಲಿದ್ದಾರೆ. ಇವರು ಕ್ಯಾಮರಾಗೆ ಚಾಲನೆ ನೀಡುವ ಮೂಲಕ ಕ್ರೇಜಿ ಸ್ಟಾರ್ ಪುತ್ರನ ಚಿತ್ರಕ್ಕೆ ಶುಭ ಹಾರೈಸಲಿದ್ದಾರೆ. ಮಗನ ಚೊಚ್ಚಲ ಚಿತ್ರದ ಮೊದಲ ದೃಶ್ಯಕ್ಕೆ ಕ್ರೇಜಿ ಸ್ಟಾರ್ ಕ್ಲಾಪ್ ಮಾಡಲಿದ್ದಾರೆ.

ನನ್ನ ಮಗನನ್ನು ಇವತ್ತೇ ಹೀರೋ ಅನ್ನಲ್ಲ: ರವಿಚಂದ್ರನ್​​

ರೋಜ್ ಹಾಗೂ ಮಾಸ್ ಲೀಡರ್ ಚಿತ್ರಗಳ ನಿರ್ದೇಶಕ ಸಹನಾ ಮೂರ್ತಿ ತ್ರಿವಿಕ್ರಮ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಚಿತ್ರದಲ್ಲಿ ವಿಕ್ರಮ್ ಜೊತೆ ರೊಮ್ಯಾನ್ಸ್ ಮಾಡಲು ಬಾಲಿವುಡ್​ ನಟಿ ಆಕಾಂಕ್ಷ ಶರ್ಮಾ ಚಂದನವನಕ್ಕೆ ಕಾಲಿಟ್ಟಿದ್ದಾರೆ. ಇದೊಂದು ಪಕ್ಕಾ ಲವ್-ರೊಮ್ಯಾಂಟಿಕ್ ಚಿತ್ರವಾಗಿದ್ದು, ಬೆಂಗಳೂರು, ರಾಜಸ್ತಾನ, ದಾಂಡೇಲಿ ಸೇರಿದಂತೆ ಬಹುತೇಕ ಕಡೆಗಳಲ್ಲಿ ಶೂಟಿಂಗ್ ನಡೆಸೋ ಪ್ಲಾನ್ ಚಿತ್ರತಂಡಕ್ಕಿದೆ. ಈ ಚಿತ್ರದ ಮತ್ತೊಂದು ವಿಶೇಷ ಏನಂದರೆ ಡ್ಯಾನ್ಸ್ ಕಿಂಗ್ ಪ್ರಭುದೇವ ಕೊರಿಯೋಗ್ರಾಫರ್​ ಆಗಿ ವರ್ಕ್ ಮಾಡಲಿದ್ದಾರೆ.

ಮುಹೂರ್ತ ಕಾರ್ಯಕ್ರಮದ ಆಹ್ವಾನ ಪತ್ರಿಕೆ

ಇನ್ನು ಮಗನ ಸಿನಿ ಎಂಟ್ರಿ ಬಗ್ಗೆ ಮಾತಾಡಿರುವ ರವಿಮಾಮ, 'ನನ್ನ ಮಗ ತ್ರಿವಿಕ್ರಮ ಚಿತ್ರದ ಮೂಲಕ ಚಿತ್ರರಂಗಕ್ಕೆ ಬರ್ತಿದ್ದಾನೆ. ಅವನ‌ನ್ನು ನಾಯಕನಾಗಿ ಮಾಡುವ ಜವಾಬ್ದಾರಿ ನಿರ್ದೇಶಕ ಸಹನಾ ಮೂರ್ತಿ ಹೊತ್ತುಕೊಂಡಿದ್ದಾರೆ. ಅಲ್ಲದೆ ನನ್ನನ್ನು ಬೆಳೆಸಿದಂತೆ ನನ್ನ ಮಗನಿಗೂ ಹಾರೈಸಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.

ಮುಹೂರ್ತ ಕಾರ್ಯಕ್ರಮದ ಆಹ್ವಾನ ಪತ್ರಿಕೆ

ABOUT THE AUTHOR

...view details