ಹೈದರಾಬಾದ್: ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣ ಹಾಗೂ ಡ್ರಗ್ ಕೇಸ್ನಲ್ಲಿ ಸಿಲುಕುವ ಮುನ್ನ ನಟಿ ರಿಯಾ ಚಕ್ರವರ್ತಿ ಸಾಮಾಜಿಕ ಜಾಲತಾಣಗಳಲ್ಲಿ ಅಷ್ಟೇನೂ ಸಕ್ರಿಯವಾಗಿರುತ್ತಿರಲಿಲ್ಲ. ಆದರೆ ಎನ್ಸಿಬಿ ಬಂಧನದಿಂದ ಜಾಮೀನಿನ ಮೇಲೆ ಹೊರಬಂದಿರುವ ನಟಿ ಇದೀಗ ಇನ್ಸ್ಟಾಗ್ರಾಮ್ನಲ್ಲಿ ಫುಲ್ ಬ್ಯುಸಿ ಆಗಿದ್ದು, 'ನಂಬಿಕೆ ಉಳಿಸಿಕೊಳ್ಳುವ' ಬಗ್ಗೆ ಹಂಚಿಕೊಂಡಿದ್ದಾರೆ.
ಇಂದು ಬೆಳಗ್ಗೆ ಇನ್ಸ್ಟಾಗ್ರಾಮ್ನಲ್ಲಿ ರವೀಂದ್ರನಾಥ ಟ್ಯಾಗೋರ್ ಅವರ ಕವನ ಸಂಕಲನ 'ಸಂಚಯಿತಾ' ಕೈಯಲ್ಲಿ ಹಿಡಿದಿರುವ ಪೋಟೋವನ್ನು ಪೋಸ್ಟ್ ಮಾಡಿದ್ದಾರೆ. Keeping the Faith (ನಂಬಿಕೆಯನ್ನು ಉಳಿಸಿಕೊಳ್ಳುವುದು) ಎಂದು ಬರೆದು, "ಪ್ರಶ್ನೆ ಮತ್ತು ಅಳು, 'ಓಹ್, ಎಲ್ಲಿ?' ಸಾವಿರ ನದಿಗಳ ಕಣ್ಣೀರಿನಲ್ಲಿ ಕರಗಿ, 'ನಾನು!' ಎಂಬ ಭರವಸೆಯ ಪ್ರವಾಹದಿಂದ ಜಗತ್ತನ್ನು ಮುಳುಗಿಸಿದ ನಾನು" ಎಂಬ ಟ್ಯಾಗೋರ್ರ ಗೀತಾಂಜಲಿ ಕವನ ಸಂಕಲನದ ಸಾಲೊಂದನ್ನು ರಿಯಾ ಶೇರ್ ಮಾಡಿದ್ದಾರೆ.