ಕರ್ನಾಟಕ

karnataka

ಟ್ಯಾಗೋರ್ ಕವನ ಸಂಕಲನ ಹಿಡಿದು 'ನಂಬಿಕೆ' ಉಳಿಸಿಕೊಳ್ಳುವತ್ತ ರಿಯಾ..

By

Published : Apr 11, 2021, 5:02 PM IST

ಗುರುದೇವ ರವೀಂದ್ರನಾಥ ಟ್ಯಾಗೋರ್ ಅವರ ಕವನ ಸಂಕಲನ 'ಸಂಚಯಿತಾ' ಕೈಯಲ್ಲಿ ಹಿಡಿದು ಓದುತ್ತಿರುವ ಪೋಟೋವನ್ನು ನಟಿ ರಿಯಾ ಚಕ್ರವರ್ತಿ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್​ ಒಂದು ಲಕ್ಷಕ್ಕೂ ಹೆಚ್ಚು ಲೈಕ್​ಗಳನ್ನು ಗಳಿಸಿದೆ.

Rhea Chakraborty
ರಿಯಾ

ಹೈದರಾಬಾದ್: ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣ ಹಾಗೂ ಡ್ರಗ್​ ಕೇಸ್​ನಲ್ಲಿ ಸಿಲುಕುವ ಮುನ್ನ ನಟಿ ರಿಯಾ ಚಕ್ರವರ್ತಿ ಸಾಮಾಜಿಕ ಜಾಲತಾಣಗಳಲ್ಲಿ ಅಷ್ಟೇನೂ ಸಕ್ರಿಯವಾಗಿರುತ್ತಿರಲಿಲ್ಲ. ಆದರೆ ಎನ್​ಸಿಬಿ ಬಂಧನದಿಂದ ಜಾಮೀನಿನ ಮೇಲೆ ಹೊರಬಂದಿರುವ ನಟಿ ಇದೀಗ ಇನ್‌ಸ್ಟಾಗ್ರಾಮ್​ನಲ್ಲಿ ಫುಲ್​ ಬ್ಯುಸಿ ಆಗಿದ್ದು, 'ನಂಬಿಕೆ ಉಳಿಸಿಕೊಳ್ಳುವ' ಬಗ್ಗೆ ಹಂಚಿಕೊಂಡಿದ್ದಾರೆ.

ರಿಯಾ ಚಕ್ರವರ್ತಿ ಇನ್‌ಸ್ಟಾಗ್ರಾಮ್​ ಪೋಸ್ಟ್

ಇಂದು ಬೆಳಗ್ಗೆ ಇನ್‌ಸ್ಟಾಗ್ರಾಮ್​ನಲ್ಲಿ ರವೀಂದ್ರನಾಥ ಟ್ಯಾಗೋರ್ ಅವರ ಕವನ ಸಂಕಲನ 'ಸಂಚಯಿತಾ' ಕೈಯಲ್ಲಿ ಹಿಡಿದಿರುವ ಪೋಟೋವನ್ನು ಪೋಸ್ಟ್ ಮಾಡಿದ್ದಾರೆ. Keeping the Faith (ನಂಬಿಕೆಯನ್ನು ಉಳಿಸಿಕೊಳ್ಳುವುದು) ಎಂದು ಬರೆದು, "ಪ್ರಶ್ನೆ ಮತ್ತು ಅಳು, 'ಓಹ್, ಎಲ್ಲಿ?' ಸಾವಿರ ನದಿಗಳ ಕಣ್ಣೀರಿನಲ್ಲಿ ಕರಗಿ, 'ನಾನು!' ಎಂಬ ಭರವಸೆಯ ಪ್ರವಾಹದಿಂದ ಜಗತ್ತನ್ನು ಮುಳುಗಿಸಿದ ನಾನು" ಎಂಬ ಟ್ಯಾಗೋರ್​ರ ಗೀತಾಂಜಲಿ ಕವನ ಸಂಕಲನದ ಸಾಲೊಂದನ್ನು ರಿಯಾ ಶೇರ್​ ಮಾಡಿದ್ದಾರೆ.

ರಿಯಾರ ಈ ಪೋಸ್ಟ್​ ಒಂದು ಲಕ್ಷಕ್ಕೂ ಹೆಚ್ಚು ಲೈಕ್​ಗಳನ್ನು ಗಳಿಸಿದ್ದು, ನಟಿಯ ಆಪ್ತರಲ್ಲಿ ಒಬ್ಬರಾದ ಶಿಬಾನಿ ದಾಂಡೇಕರ್ ಅವರು ಹಾರ್ಟ್ ಎಮೋಜಿಯೊಂದಿಗೆ 'ಲವ್ ಯು' ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಅಮಿತಾಬ್ ಬಚ್ಚನ್-ಇಮ್ರಾನ್ ಹಶ್ಮಿ ಅಭಿನಯದ 'ಚೆಹ್ರೆ' ಚಿತ್ರದಲ್ಲಿ ರಿಯಾ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಮೊದಲ ಪೋಸ್ಟರ್ ಮತ್ತು ಟೀಸರ್​ನಲ್ಲಿ ರಿಯಾ ಇರದ ಕಾರಣ ಚಿತ್ರತಂಡ ಇವರನ್ನು ಕೈಬಿಟ್ಟಿದೆ ಎಂಬ ಸುದ್ದಿ ಹರಿದಾಡಿತ್ತು. ಆದರೆ ಟ್ರೈಲರ್​ನಲ್ಲಿ ಇದು ಕೇವಲ ವದಂತಿ ಎಂಬುದು ಸಾಬೀತಾಗಿತ್ತು.

ABOUT THE AUTHOR

...view details