ಕರ್ನಾಟಕ

karnataka

By

Published : Mar 26, 2020, 1:31 PM IST

ETV Bharat / jagte-raho

ಪರಸ್ಪರ ಅಪ್ಪಿ ಬಾವಿಗೆ ಬಿದ್ದ ಜೋಡಿ ಹಕ್ಕಿ... ಕೆಟ್ಟವಾಸನೆ ನೀಡಿತು ಪ್ರೇಮಿಗಳ ಸಾವಿನ ಸುಳಿವು

ಪ್ರೇಮಿಗಳಿಬ್ಬರು ಪರಸ್ಪರ ಅಪ್ಪಿ ಬಾವಿಗೆ ಬಿದ್ದಿರುವ ಪ್ರಕರಣ ಇಂಡಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಬಾವಿಯಲ್ಲಿ ಕೆಟ್ಟ ವಾಸನೆಯಿಂದ ಆತ್ಮಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ.

lovers-suicide-in-vijayapur
ಪ್ರೇಮಿಗಳು ಆತ್ಮಹತ್ಯೆ

ವಿಜಯಪುರ:ಪ್ರೇಮ ವೈಫಲ್ಯದಿಂದ ಜೋಡಿ ಹಕ್ಕಿಗಳು ಆತ್ಮಹತ್ಯೆಗೆ ಶರಣಾದ ಘಟನೆ ಜಿಲ್ಲೆಯ ಇಂಡಿ ತಾಲೂಕಿನ ತಾಂಬಾದಲ್ಲಿ ನಡೆದಿದೆ.

ಇವರು ಒಬ್ಬರನ್ನೊಬ್ಬರು ತಬ್ಬಿಕೊಂಡು ಬಾವಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗಂಗಾಧರ ನಡಗಡ್ಡಿ (21), ರಕ್ಷಿತಾ ಶಿಂಗೆ (19) ಮೃತ ಪ್ರೇಮಿಗಳು. ರಕ್ಷಿತಾ ತನ್ನ ತಂದೆ ಹನುಮಂತ ಶಿಂಗೆ ಅವರ ಹೊಲದಲ್ಲಿರುವ ಬಾವಿಗೆ ಜಿಗಿದಿದ್ದಾರೆ. ಬಾವಿಯಲ್ಲಿ ಕೆಟ್ಟ ವಾಸನೆ ಬರುತ್ತಿರುವುದನ್ನು ಗಮನಿಸಿ ಪರಿಶೀಲಿಸಿದಾಗ ವಿಷಯ ಬೆಳಕಿಗೆ ಬಂದಿದೆ.

ಪ್ರೇಮಿಗಳು ಆತ್ಮಹತ್ಯೆ

ಎರಡು ತಿಂಗಳ ಹಿಂದೆ ರಕ್ಷಿತಾಗೆ ಬೇರೊಬ್ಬನ ಜೊತೆಗೆ ಮದುವೆ ಮಾಡಿಕೊಡಲಾಗಿತ್ತು. ಇನ್ನು ಎರಡು ದಿನಗಳ ಹಿಂದೆಯೇ ಪ್ರೇಮಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸ್ಥಳಕ್ಕೆ ಇಂಡಿ ಗ್ರಾಮೀಣ ಪೊಲೀಸರು ಭೇಟಿ ಪರಿಶೀಲನೆ ನಡೆಸಿದರು.

ABOUT THE AUTHOR

...view details